Feb 8, 2022, 9:47 AM IST
ಮೈಸೂರು (ಫೆ. 08): ವಿವೇಕಾನಂದರ ಸ್ಮಾರಕ (Vivekananda Monument) ನಿರ್ಮಾಣಕ್ಕಾಗಿ ಶತಮಾನದ ಇತಿಹಾಸ ಹೊಂದಿರುವ, ಕರ್ನಾಟಕದ ಮೊದಲ ಮಹಿಳಾ ಕನ್ನಡ ಶಾಲೆ ನೆಲಸಮವಾಗಿದೆ. ವಿವೇಕಾನಂದರ 150 ನೇ ಜನ್ಮ ದಿನಾಚರಣೆ ಸ್ಮರಣೆಗಾಗಿ NTMS ಶಾಲೆಯನ್ನು ನೆಲಸಮ ಮಾಡಲಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾಡಳಿತ ಜಾಗವನ್ನು ತೆರವುಗೊಳಿಸಿದೆ. ತೀವ್ರ ವಿರೋಧದ ನಡುವೆಯೂ ಕಟ್ಟಡ ತೆರವುಗೊಳಿಸಿ, ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಲಾಗಿದೆ.