ಬಸ್‌ ಓಡಿಸಲು ಮುಂದೆ ಬಂದರೆ ನೌಕರರಿಗೆ ಪೊಲೀಸ್ ಭದ್ರತೆ: ಗೃಹ ಸಚಿವ

Apr 8, 2021, 3:17 PM IST

ಬೆಂಗಳೂರು (ಏ. 08): ಸಾರಿಗೆ ನೌಕರರ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದೆ.  ಪ್ರತಿಭಟನೆಯ ನಡುವೆ ಬಸ್ ಓಡಿಸಲು ಮುಂದೆ ಬಂದರೆ, ಅಂತಹ ನೌಕರರಿಗೆ ಪೊಲೀಸ್ ಭದ್ರತೆ ನೀಡಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದಾರೆ. 

ಸಾರಿಗೆ ಮುಷ್ಕರ 2 ನೇ ದಿನಕ್ಕೆ, ಪ್ರಯಾಣಿಕರಿಗೆ ಸಿಎಂ ಮಾಡಿದ್ಹೀಗೆ

4 ಸಾರಿಗೆ ನಿಗಮಗಳ ಜೊತೆ ಮಾತನಾಡಿದ್ದೇವೆ. ಎಲ್ಲಾ ಜಿಲ್ಲೆ ಎಸ್‌ಪಿ, ಡಿಜೆಗೆ ಸೂಚನೆ ನೀಡಿದ್ದೇವೆ. ಮುಷ್ಕರದಿಂದ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಸೇವೆಗೆ ಹಾಜರಾಗಿ ಎಂದು ಗೃಹ ಸಚಿವ ಬೊಮ್ಮಾಯಿ ವಿನಂತಿಸಿದ್ದಾರೆ.