ಪ್ರಜ್ವಲ್ ರೇವಣ್ಣ SIT ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸದ ಆರ್. ಅಶೋಕ್, ದೇವೇಗೌಡರು ದೊಡ್ಡ ನಾಯಕರಿದ್ದಾರೆ ಅವರು ನೋಡ್ಕೊಳ್ತಾರೆ. ಇಷ್ಟು ಡೈವರ್ಟ್ ಮಾಡೋದು ಬೇಡ ಎಂದರು.
ಇನ್ನು ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ನಾಯಕರನ್ನು ರಾಜ್ಯದ ಅನ್ಯಾಯದ ಬಗ್ಗೆ ಕೇಳಬೇಕು. ಶೋಭಕ್ಕ, ಯಡಿಯೂರಪ್ಪ, ವಿಜಯೇಂದ್ರ ಇವರಿಗೆ ನೀವು ಪ್ರಶ್ನೆ ಮಾಡಬೇಕು. ನಮ್ಮನ್ನು ಕೇಳಿದ್ರೆ ಏನು ಉತ್ತರ ಹೇಳೋಣ. ಎಲ್ಲೆಲ್ಲೋ ಬಾಯಿ ಬಿಡ್ತಾರೆ, ಆದ್ರೆ ಈಗ ಮೌನವಾಗಿದ್ದಾರೆ. ಯಾಕೆ ಅವರು ಬಾಯಿ ಬಿಡ್ತಾಯಿಲ್ಲ, ಎಲ್ಲೆಲ್ಲೋ ಬಾಯಿ ಬಿಡ್ತಾರೆ ಎಲ್ಲೆಲ್ಲೋ ಟ್ವೀಟ್ ಮಾಡ್ತಾರೆ. ಇದು ಆರ್ಡಿನರಿ ಮನುಷ್ಯನದ್ದಾ...? ದೇಶದ ಒಬ್ಬ ಸಂಸತ್ ಸದಸ್ಯನ ವಿಚಾರವಿದು. ಒಬ್ಬ ಶಾಸಕರ ವಿಚಾರ ಮಾಜಿ ಮಂತ್ರಿಗಳ ವಿಚಾರ ಅವರು ಉತ್ತರ ಕೊಡಬೇಕು ಇದಕ್ಕೆ ನಾವೇನು ಉತ್ತರ ಕೊಡಬೇಕು. ರಾಜ್ಯ ತಲತಗ್ಗಿಸುವಂತೆ ಆಗಿದೆ ದೆಹಲಿಯಿಂದ ಎಷ್ಟು ಕರೆ ಬರ್ತಾ ಇದ್ದಾವೆ ಗೊತ್ತಾ..? ಬಿಜೆಪಿಯವರು ಉತ್ತರ ಕೊಡಬೇಕು ಇದ್ದಕ್ಕೆ. ಅದೇನು ಮಾಡುತ್ತಾರೋ ಮೊದಲು ಹೇಳಲೇ ಅವರು ಎಂದಿದ್ದಾರೆ.