ರಾಜಾಹುಲಿ ಸಚಿವ ಸಂಪುಟ ತಂತ್ರಕ್ಕೆ ಬಿಜೆಪಿ ನಾಯಕರೇ ಥಂಡಾ!

Feb 1, 2020, 1:30 PM IST

ಬೆಂಗಳೂರು (ಫೆ. 01): ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಉಪ ಚುನಾವಣಾ ಫಲಿತಾಂಶ ಬಂದ ಮಾರನೇ ದಿನವೇ ಸಂಪುಟ ವಿಸ್ತರಣೆ ಮಾಡುತ್ತೇನೆ.ಗೆದ್ದು ಬಂದ ಎಲ್ಲಾ ಅನರ್ಹ ಶಾಸಕರನ್ನು ಸಚಿವರನ್ನಾಗಿ ಮಾಡುತ್ತೇನೆಂದು ಭರವಸೆ ನೀಡಿದ್ದ ಯಡಿಯೂರಪ್ಪ ಎರಡು ತಿಂಗಳ ನಂತರ ವಿಸ್ತರಣೆಗೆ ಮಾಡುತ್ತಿದ್ದಾರೆ.

ಬಿಎಸ್‌ವೈ ಸಂಪುಟದಲ್ಲಿ ಮೈಸೂರು ಭಾಗದಿಂದ 2 ಅಚ್ಚರಿಯ ಮುಖ?

ರಾಜಾಹುಲಿ ಇಟ್ಟಿರುವ ಹುಲಿ ಹೆಜ್ಜೆಗೆ ಕಮಲ ಪಾಳಯ ನಾಯಕರು ಥಂಢಾ ಹೊಡೆದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ, ರಾಜಾಹುಲಿಯ ಹುಲಿ ಹೆಜ್ಜೆ ಬಗ್ಗೆ ಇಂಟರೆಸ್ಟಿಂಗ್ ಪಾಲಿಟಿಕ್ಸ್ ಇಲ್ಲಿದೆ ನೋಡಿ!