ಭಾರತ್ ಬಂದ್‌ಗೆ ಬೆಂಬಲಿಸಲು ಸಂಘಟನೆಗಳ ಹಿಂದೇಟು, ನೀರಸ ಪ್ರತಿಕ್ರಿಯೆ

Sep 27, 2021, 9:08 AM IST

ಬೆಂಗಳೂರು (ಸೆ. 27): ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ ಬಹುತೇಕ ಸಂಘ ಸಂಸ್ಥೆಗಳು ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿವೆ. 

ಭಾರತ್ ಬಂದ್‌: ಕಾಂಗ್ರೆಸ್‌ ಪಕ್ಷ ರೈತರ ಪರವಾಗಿದೆ, ನಮ್ಮ ಬೆಂಬಲವಿದೆ ಎಂದ ಸಿದ್ದರಾಮಯ್ಯ

ಹೀಗಾಗಿ ಆಟೋ, ಟ್ಯಾಕ್ಸಿ, ಬಸ್‌, ರೈಲು ಹಾಗೂ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಓಲಾ- ಊಬರ್‌ ಸೇವೆಗಳು, ಲಾರಿ ಸೇರಿದಂತೆ ಸರಕು ಸಾಗಣೆ ವಾಹನ ಸಂಚಾರವೂ ಇರಲಿದೆ. ಹಾಗಾಗಿ, ಅಗತ್ಯ ವಸ್ತುಗಳ ಸರಬರಾಜಿಗೂ ತೊಂದರೆ ಆಗುವುದಿಲ್ಲ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂದ್‌ಗೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿದೆ.? ಇಲ್ಲಿದೆ ಗ್ರೌಂಡ್ ರಿಪೋರ್ಟ್.