Oct 24, 2020, 5:10 PM IST
ಬೆಂಗಳೂರು (ಅ. 24): ಬೆಂಗಳೂರು ಮುಳುಗಿದ್ರೂ ಅಧಿಕಾರಿಗಳು ಮಾತ್ರ ನಿರುಮ್ಮಳವಾಗಿದ್ದಾರೆ. ತಮಗೂ, ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ. ಇಂದು ಸಿಎಂ ಯಡಿಯೂರಪ್ಪ ಹೊಸಕೆರೆ ಹಳ್ಳಿಗೆ ಭೇಟಿ ನೀಡಿದ್ದಾರೆ. ಆಗ ಎಲ್ಲಾ ಅಧಿಕಾರಿಗಳು ಹಾಜರಾಗಿದ್ದಾರೆ. ಸಿಎಂ ಭೇಟಿ ಮುಗಿಸಿ ಹೊರಟ ನಂತರ ಅಧಿಕಾರಿಗಳು ಕೂಡಾ ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ.
ಬೆಂಗಳೂರು ಮಳೆ: ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೂ 25 ಸಾವಿರ ರೂ ಪರಿಹಾರ
ಅಲ್ಲಿ ಏನು ವ್ಯವಸ್ಥೆಯಾಗಬೇಕು? ರಸ್ತೆ ಸರಿ ಮಾಡಿಸಬೇಕಾ? ಪರಿಹಾರ ಕಾರ್ಯ ಯಾವ ರೀತಿ ಆಗಬೇಕು? ಎಂದು ನೋಡುವುದನ್ನು ಬಿಟ್ಟು ಅಧಿಕಾರಿಗಳು ಗಾಯಬ್ ಆಗಿದ್ದಾರೆ.