ಮಂಗಳೂರಿನಲ್ಲಿ 'ಕಂಬಳ' ಉದ್ಘಾಟಿಸಿದ ನಟ ಅಭಿಷೇಕ್: ಖಡಕ್ ಡೈಲಾಗ್‌ಗೆ ಫ್ಯಾನ್ಸ್ ಫಿದಾ

Jan 24, 2023, 2:47 PM IST

ಮಂಗಳೂರಿನಲ್ಲಿ ನಡೆದ ಕಂಬಳವನ್ನು ನಟ ಅಭಿಷೇಕ್ ಅಂಬರೀಶ್ ಉದ್ಘಾಟಿಸಿದ್ದಾರೆ‌‌. ಕ್ಯಾಪ್ಟನ್ ಬ್ರಿಟಿಷ್ ಚೌಟ ನೇತೃತ್ವದಲ್ಲಿ ಕಂಬಳ ಆಯೋಜಿಸಲಾಗಿತ್ತು. ಅಭಿಷೇಕ್ ಅಂಬರೀಶ್ ಅವರನ್ನು ಕಂಡು ಮಂಗಳೂರಿನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಭಿಷೇಕ್ ಅಂಬರೀಶ್ ಡೈಲಾಗ್ಸ್'ಗೆ ಜನರು, ಫುಲ್ ಫಿದಾ ಆಗಿದ್ದಾರೆ. ಶಿಳ್ಳೆ ಹಾಗೂ ಚಪ್ಪಾಳೆಗಳೊಂದಿಗೆ ಎಂಜಾಯ್ ಮಾಡಿದ್ದಾರೆ.