Jun 25, 2021, 12:20 PM IST
ಬೆಂಗಳೂರು(ಜೂ.25): ಸಿಎಂ ಬಿ.ಎಸ್. ಯಡಿಯೂರಪ್ಪ ಕ್ಯಾಬಿನೆಟ್ನಲ್ಲಿ ಖಾತೆ ಕ್ಯಾತೆ ಮುಂದುವರೆದಿದೆ. ಸಚಿವರಾದ ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಅವರು ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ಎಂಟಿಬಿ ನಾಗರಾಜ್ಗೆ ಕೇಳಿದ ಜಿಲ್ಲೆಗೆ ಉಸ್ತುವಾರಿ ಕೊಟ್ಟರೂ ಬೇರೆ ಖಾತೆ ಬೇಕಂತೆ ಅಂತ ತಿಳಿದು ಬಂದಿದೆ. ಉಸ್ತುವಾರಿ ಆಯ್ತು ಖಾತೆ ಬದಲಾವಣೆಗಾಗಿ ಎಂಟಿಬಿ ಪಟ್ಟು ಹಿಡಿದಿದ್ದಾರೆ. ಈ ಮೊದಲು ವಿಜಯನಗರ ಜಿಲ್ಲೆಯಾದ್ರೆ ಸಾಕು ಅಂತಿದ್ದ ಆನಂದ್ ಸಿಂಗ್ ಇದೀಗ ಖಾತೆ ಕ್ಯಾತೆಯನ್ನ ಆರಂಭಿಸಿದ್ದಾರೆ.