ಡಿಸಿಎಂ ಒತ್ತಾಯಕ್ಕೆ ಮಣಿದು JDS ನಾಮಪತ್ರ ವಾಪಾಸು; ಬಿಜೆಪಿ ರಿಲ್ಯಾಕ್ಸು!

Nov 21, 2019, 6:33 PM IST

ಬೆಂಗಳೂರು (ನ.21): ಡಿ.05ರಂದು ನಡೆಯುವ ಉಪಚುನಾವಣೆಗೆ ನಾಮಪತ್ರ ಹಿಂಪಡೆಯಲು ಇವತ್ತು ಕೊನೆಯ ದಿನವಾಗಿತ್ತು. ಎಲ್ಲಾ ಪಕ್ಷದ ನಾಯಕರು ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ಕೊನೆಕ್ಷಣದವರೆಗೆ ಪ್ರಯತ್ನ ನಡೆಸಿದ್ದಾರೆ. ಡಿಸಿಎಂ ಒತ್ತಾಯಕ್ಕೆ ಮಣಿದು ಜೆಡಿಎಸ್ ಅಭ್ಯರ್ಥಿಯೊಬ್ಬರು ನಾಮಪತ್ರ ವಾಪಾಸು ಪಡೆದಿದ್ದು, ಬಿಜೆಪಿಗೆ ರಿಲೀಫ್ ಸಿಕ್ಕಿದೆ.  

ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ಕ್ಷೇತ್ರಗಳಿಗೆ ಡಿ.05 ರಂದು ಉಪಚುನಾವಣೆ ನಡೆಯಲಿದೆ. ಡಿ.09ಕ್ಕೆ ಮತ ಎಣಿಕೆ ನಡೆಯಲಿದೆ.