Nov 14, 2019, 8:54 PM IST
ಬೆಂಗಳೂರು (ಅ.14): ಉಪಚುನಾವಣೆಗಾಗಿ ಅತ್ತ ಅನರ್ಹ ಶಾಸಕರು ಬಿಜೆಪಿ ಸೇರ್ಪಡನೆಯಾಗುತ್ತಿದ್ದಂತೆ ಕಮಲ ಪಾಳೆಯದಲ್ಲಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಪೋಟವಾಗಿದೆ.
ಅತ್ತ ಬಿಜೆಪಿ ಅನರ್ಹರಿಗೆ ಪಕ್ಷ ಟಿಕೆಟ್ಘೋಷಿಸಿದ್ದಂತೆ ಇತ್ತ ಕಾಗೆ ಕಾಂಗ್ರೆಸ್ ತೆಕ್ಕೆಗೆ ಬಿತ್ತು. ಕಾಗವಾಡ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾದ್ದ ರಾಜು ಕಾಗೆಯನ್ನು ಕೈಬಿಟ್ಟು ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಅವರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ.
ಇದ್ರಿಂದ ರಾಜು ಕಾಗೆ ಅಧಿಕೃತವಾಗಿ ಇಂದು [ಗುರುವಾರ] ಕಾಂಗ್ರೆಸ್ ಸೇರಿದರು. ಕೊನೆಗಳಿಗೆಯಲ್ಲಿ ರಾಜು ಕಾಗೆ ಅವರನ್ನು ಸಮಾಧಾನಪಡಿಸಲು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅಖಾಡಕ್ಕಿಳಿದಿದ್ದರು. ಆದ್ರೆ ಅದಕ್ಕೆ ಕಾಗೆ ಬಗ್ಗಲಿಲ್ಲ.