ಜೆಡಿಎಸ್ ಹಾಸನ ಟಿಕೆಟ್ ಸಂಕಷ್ಟಕ್ಕೆ ತೆರೆ, ಸ್ವರೂಪ್ ಮನೆ ಮುಂದೆ ಬೆಂಬಲಿಗರ ಸಂಭ್ರಮಾಚರಣೆ!

Apr 14, 2023, 8:00 PM IST

ಜೆಡಿಎಸ್ ಅಭ್ಯರ್ಥಿಗಳಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತೀವ್ರ ಕಗ್ಗಂಟಾಗಿದ್ದ ಹಾಸನ ಕ್ಷೇತ್ರ ಟಿಕೆಟ್ ಕೊನೆಗೂ ಬಗೆ ಹರಿದಿದೆ. ಹೆಚ್ ಡಿ ಕುಮಾರಸ್ವಾಮಿ ತಮ್ಮ ಮಾತಿನಂತೆ ಸ್ವರೂಪ್‌ಗೆ ಟಿಕೆಟ್ ನೀಡಿದ್ದಾರೆ. ಇತ್ತ ಭವಾನಿ ರೇವಣ್ಣಗೆ ಹಾಸನ ಟಿಕೆಟ್ ಕೈತಪ್ಪಿದೆ. ಈ ಘೋಷಣೆ ಹೊರಬೀಳುತ್ತಿದ್ದಂತೆ, ಸ್ವರೂಪ್ ಮನೆ ಮುಂದೆ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಸ್ವರೂಪ್ ಪರ ಜಯಘೋಷ ಮೊಳಗಿಸಿದ್ದಾರೆ. ಆದರೆ ರೇವಣ್ಣ ಬೆಂಬಲಿಗರ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.