Mar 6, 2023, 1:10 PM IST
ಬೆಂಗಳೂರು (ಮಾ.06): ಬೆಂಗಳೂರಿನಲ್ಲಿ ಇಂದು ಭರ್ಜರಿ ಬಾಡೂಟ ನಡೆಯುತ್ತಿದೆ. ಬೆಂಗಳೂರಿನಲ್ಲಿರುವ ನಾಗಮಂಗಲ ಕ್ಷೇತ್ರ ಜನರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಇಂದು ಭರ್ಜರಿ ಬಾಡೂಟ ಕೊಟ್ಟಿದ್ದಾರೆ. ಎರಡೂ ಪಕ್ಷಗಳು ಕೊಟ್ಟ ಬಾಡೂಟದ ರುಚಿ ಮತ್ತು ಘಮ ಹೇಗಿತ್ತು. ಬಾಡೂಟ ಸವಿದ ನಾಗಮಂಗಲ ಜನ ಏನಂದ್ರು ಅನ್ನೋದನ್ನು ಇಂದಿನ ಸುವರ್ಣ ಸ್ಪೆಷಲ್ ಕಾರ್ಯಕ್ರಮದಲ್ಲಿ ನೋಡಿ.
ಬೆಂಗಳೂರಿನಲ್ಲಿ ಇಂದು ನಡೆದ ನಾಗಮಂಗಲ ಕ್ಷೇತ್ರದ ಬಾಡೂಟ. ನಾಗಮಂಗಲ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ಸಹ ಬಾಡೂಟ ಏರ್ಪಡಿಸಿದ್ದರು. ಎರಡೂ ಪಕ್ಷಗಳು ಬೆಂಗಳೂರಿನಲ್ಲಿ ಇಂದು ಬಾಡೂಟ ಏರ್ಪಡಿಸಿದ್ದರು ನಿಜ. ಈ ಬಾಡೂಟದಿಂದ ಎಲೆಕ್ಷನ್ನಲ್ಲಿ ಎರಡೂ ಪಕ್ಷಗಳಿಗೆ ಹೇಗೆಲ್ಲ ಲಾಭಗಳಾಗುವ ನಿರೀಕ್ಷೆಯಲ್ಲಿವೆ. ಆದರೆ, ಎರಡೂ ಪಕ್ಷಗಳಿಗೆ ಈ ಬಾಡೂಟದಿಂದ ಲಾಭ ಮತ್ತು ನಷ್ಟ ಎರಡೂ ಇದೆ. ಈ ಬಗ್ಗೆ ಸಂಪೂರ್ಣ ವಿವರ ಈ ಸುವರ್ಣ ನ್ಯೂಸ್ ಸ್ಪೆಷಲ್ನಲ್ಲಿ ಅನಾವರಣ ಮಾಡಲಾಗಿದೆ.