Jul 26, 2021, 10:21 AM IST
ಬೆಂಗಳೂರು(ಜು.26): ಸಸ್ಪೆನ್ಸ್ ಇನ್ನೂ ಮುಂದುವರಿಯುತ್ತಿದೆ. ಹೌದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಕದನಕ್ಕೆ ಇವತ್ತೇ ಕ್ಲೈಮ್ಯಾಕ್ಸ್ ಬೀಳುತ್ತಾ?. ಯಡಿಯೂರಪ್ಪ ಇಂದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ತಾರಾ?. ಹೈಕಮಾಂಡ್ನಿಂದ ಸಂದೇಶ ಬರುತ್ತಾ?. ರಾಜ್ಯ ಬಿಜೆಪಿ ಪಾಳಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ಸಿಎಂ ರಾಜೀನಾಮೆ ಸಲ್ಲಿಸ್ತಾರಾ? ಎಂಬುದಕ್ಕೆ ಯಾವುದೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಹೈಕಮಾಂಡ್ನಿಂದ ಸಂದೇಶ ಬಂದ ಮೇಲೆಯೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆಯಿದೆ.