ಕುರುಬ ಸಮುದಾಯಕ್ಕೆ ಅವಮಾನ: ಮಾಧುಸ್ವಾಮಿ ಪರ ಸಿಎಂ ಕ್ಷಮೆ ಯಾಚನೆ

Nov 20, 2019, 2:14 PM IST

ಬೆಂಗಳೂರು (ನ.20): ಚಿಕ್ಕನಾಯಕನಹಳ್ಳಿ ಹುಳಿಯಾರು ಪಟ್ಟಣದ ಸರ್ಕಲ್‌ಗೆ ಕನಕವೃತ್ತ ಹೆಸರಿಡುವ ವಿಚಾರದಲ್ಲಿ, ಸಚಿವ ಜೆ.ಸಿ. ಮಾಧುಸ್ವಾಮಿ ಕುರುಬ ಸಮುದಾಯದ ಹಾಲುಮತ ಸ್ವಾಮೀಜಿಗೆ ಅವಮಾನ ಮಾಡಿರುವ ವಿವಾದಕ್ಕೆ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದರು. 

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕನಕ ಪೀಠದ ಸ್ವಾಮೀಜಿಗೆ ಅವಹೇಳಕಾರಿಯಾಗಿ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಈ ಹಿಂದೆಯೂ ಪ್ರವಾಹ ಪರಿಸ್ಥಿತಿ ಮತ್ತು ನೆರೆ ಪರಿಹಾರ ಬಗ್ಗೆ ಉಡಾಫೆ ಮಾತುಗಳನ್ನಾಡಿ ಟೀಕೆಗೆ ಗುರಿಯಾಗಿದ್ದರು. ಒಮ್ಮೆ ಪೋರ್ನ್ ವೀಕ್ಷಣೆ ದೇಶದ್ರೋಹ ಅಲ್ಲ ಎಂದು ಲಕ್ಷ್ಮಣ ಸವದಿ ಬೆನ್ನಿಗೆ ಜೆ.ಸಿ. ಮಾಧುಸ್ವಾಮಿ ನಿಂತಿದ್ದರು.