2014, 2019ರಲ್ಲಿ ಮೋದಿಗೆ ಹಾಕಿದ್ದ ವೋಟ್‌ ಸಾರ್ಥಕ: ಸಂಸದ ತೇಜಸ್ವಿ ಸೂರ್ಯ

Aug 5, 2020, 7:59 PM IST

ಬೆಂಗಳೂರು, (ಆ.05): ಅಯೋಧ್ಯೆಯಲ್ಲಿ ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಿದರು.

ಶ್ರೀರಾಮ ಮಂದಿರ ಭೂಮಿ ಪೂಜೆ ಖುಷಿಯಲ್ಲಿ ಕೆಎಸ್ ಈಶ್ವರಪ್ಪ ವಿವಾದತ್ಮಕ ಹೇಳಿಕೆ

ಬಳಿಕ ನರೇಂದ್ರ ಮೋದಿ ಮಾಡಿದ ಭಾಷಣದ ಬಗ್ಗೆ  ಸಂಸದ ತೇಜಸ್ವಿ ಸುರ್ಯ ಅವರು ಪ್ರತಿಕ್ರಿಯಿಸಿದ್ದು, ಮೋದಿ ಅವರ ಈ ಇವತ್ತಿನ ಭಾಷಣ ಅಗ್ರಮಾನ್ಯ ಸ್ಥಾನ ಪಡೆದುಕೊಂಡಿದೆ ಎಂದರು. ಅಲ್ಲದೇ 2014, 2019ರಲ್ಲಿ ಮೋದಿ ಹಾಕಿದ್ದ ವೋಟ್‌ ಮತದಾರರ ಮನಸ್ಸಿಯಲ್ಲಿ ಸಾರ್ಥಕ ಮನೋಭಾವನೆ ಮೂಡಿದೆ ಹೇಳಿದರು.