ಪಂಚಾಂಗ: ಕೆಲಸ ವಿಳಂಬವಾಗುತ್ತಿದ್ದರೆ ಶನೈಶ್ಚರನಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶುಭಫಲ

Oct 3, 2020, 8:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ರೇವತಿ/ ಅಶ್ವಿನಿ ನಕ್ಷತ್ರವಾಗಿದೆ. ಶನಿವಾರವಾಗಿದ್ದರಿಂದ ಆಂಜನೇಯ ಸ್ವಾಮಿ/ ಶನೈಶ್ಚರನನ್ನು ಆರಾಧನೆ ಮಾಡಿದರೆ ಶುಭಫಲವಿದೆ. ತಿಲತೈಲ (ಎಳ್ಳೆಣ್ಣೆ) ವನ್ನು ಶನೈಶ್ಚರನಿಗೆ ಅರ್ಪಿಸುವುದರಿಂದ ಅನುಗ್ರಹಕ್ಕೆ ಪಾತ್ರರಾಗಬಹುದು. ಸಾಡೇಸಾಥ್ ಇರುವವರು, ಕೆಲಸ ವಿಳಂಬವಾಗುತ್ತಿದ್ದರೆ, ಕಾಲು ನೋವಿನಿಂದ ಬಳಲುತ್ತಿರುವವರು ಇದನ್ನು ಮಾಡುವುದರಿಂದ ಖಂಡಿತಾ ಶುಭಫಲವಿದೆ. 

ರಾಶಿಯನುಸಾರ ವಾರದ ಯಾವ ದಿನ ನಿಮಗೆ ಸೂಕ್ತ