Jun 22, 2019, 7:20 PM IST
ಮಂಡ್ಯ (ಜೂ.22): ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮಂಡ್ಯ ಕಾಂಗ್ರೆಸ್ ನಾಯಕ ಚೆಲುವರಾಯ ಸ್ವಾಮಿ ಮತ್ತೆ ಸಿಡಿದೆದ್ದಿದ್ದಾರೆ. ಮಂಡ್ಯ ರೈತರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಚೆಲುವರಾಯ ಸ್ವಾಮಿ, ಸರ್ಕಾರ ನೀಡುವ ಸಾಲಮನ್ನಾ ಪತ್ರದಿಂದ ಯಾವ ಪ್ರಯೋಜನವು ಇಲ್ಲ, ಬ್ಯಾಂಕ್ನವರು ಅದಕ್ಕೆ ಬೆಲೆ ಕೊಡಲ್ಲ. ಆದ್ದರಿಂದ ಅದನ್ನು ನಿಲ್ಲಿಸಿ, ರೈತರ ಜೊತೆ ಚೆಲ್ಲಾಟವಾಡಬೇಡಿ ಎಂದು ಆಗ್ರಹಿಸಿದರು.