ಪ್ರಜ್ವಲ್ ಗೆ ಸಂಕಷ್ಟ: MP ಸ್ಥಾನ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ..!

Jun 26, 2019, 8:37 PM IST

ಬೆಂಗಳೂರು, (ಜೂ.26): ಹಾಸನ ಲೋಕಸಭೆಯಿಂದ ಗೆದ್ದರೂ ಪ್ರಜ್ವಲ್​ ರೇವಣ್ಣಗೆ ಸಂಕಷ್ಟ ತಪ್ಪುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್​ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ.  ಹೀಗಾಗಿ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹಾಸನದ ಪರಾಜಿತ ಬಿಜೆಪಿ ಅಭ್ಯರ್ಥಿ ಎ. ಮಂಜು ಇಂದು [ಬುಧವಾರ] ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.ಹಾಗಾದ್ರೆ ಎ. ಮಂಜು ಅವರು ಏನೆಲ್ಲ ಹೇಳಿದ್ದಾರೆ ಅಂತ ಅವರ ಬಾಯಿಂದಲೇ ಕೇಳಿ.