ಗ್ರಾ.ಪಂ ಅಧಿಕಾರಿಯ ರೌಡಿಸಂ ಬಟಾಬಯಲು..! ಅವ್ಯವಹಾರ ಪ್ರಶ್ನಿಸಿದ್ರೆ ಕೇಸ್ ಹಾಕಿಸ್ತಾನೆ ಆಸಾಮಿ

ಗ್ರಾ.ಪಂ ಅಧಿಕಾರಿಯ ರೌಡಿಸಂ ಬಟಾಬಯಲು..! ಅವ್ಯವಹಾರ ಪ್ರಶ್ನಿಸಿದ್ರೆ ಕೇಸ್ ಹಾಕಿಸ್ತಾನೆ ಆಸಾಮಿ

Published : Oct 27, 2023, 11:39 AM IST

ಆ ಪಂಚಾಯತಿಯಲ್ಲಿ ಏನೇ ಅವ್ಯವಹಾರ ನಡೆದ್ರೂ ಯಾರೂ ಪ್ರಶ್ನಿಸಬಾರದು. ಹಾಗೆ ಪ್ರಶ್ನೆ ಮಾಡಿದ್ರೆ ಅಂತವರೇ ಊರು ಬಿಟ್ಟು ಓಡಿ ಹೋಗಬೇಕಾಗುತ್ತೆ. ಇದು ಅಧಿಕಾರಿಯೊಬ್ಬನ ರೌಡಿಸಂ ಕಥೆ. ಈತನ ಮಾತು ಕೇಳಿದ್ರೆ ಈತ ಪಿಡಿಓನಾ ? ಇಲ್ಲಾ ರೌಡಿನಾ ? ಅಂತ ನೀವೆ ದಂಗಾಗ್ತಿರಿ.
 

ಈತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಪಡೆಯೋದು ಸರ್ಕಾರಿ ಸಂಬಳ. ಆದ್ರೆ ಮಾಡೋದು ಮಾತ್ರ ರೌಡಿಸಂ. ಪಂಚಾಯತ್‌ನಲ್ಲಿ ಏನೇ ಅವ್ಯವಹಾರಗಳು ನಡೆಯಲಿ. ಈತ ಏನೇ ಕಾನೂನು ಬಾಹಿರ ಕೆಲಸ ಮಾಡಲಿ. ಗ್ರಾಮಸ್ಥರು ಈತನಿಗೆ ಪ್ರಶ್ನೆ ಮಾಡಬಾರದು. ಹಾಗೆ ಪ್ರಶ್ನೆ ಮಾಡಿದ್ರೆ ಅಂತವರ ಮೇಲೆಯೇ ಕೇಸ್ ಹಾಕಿಸ್ತಾನೆ ಈ ಆಸಾಮಿ. ನಾನು ಭೀಮಾ ತೀರದವನು. ಹತ್ತು ಜನರ ಮರ್ಡರ್ ಮಾಡಿದವರನ್ನೇ ಅಟ್ಟಾಡಿಸಿ ಬಂದವನು ನಾನು. ನಿನ್ನ ಮೇಲೆ ರೌಡಿ ಶೀಟರ್ ಹಾಕಿಸಬೇಕಾ ? ಅಬ್ಬಬ್ಬಾ  ಏನು ಈತನ ಅವಾಜ್.. ಈತನೇ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮದನಾ ಗ್ರಾಮ ಪಂಚಾಯತ್ ಪಿಡಿಓ ಬಸೀರ್ ಜಮಾದಾರ್. ಈ ಪಂಚಾಯತಿಯಲ್ಲಿ ಕ್ರೀಯಾ ಯೋಜನೆ ಮಾಡದೇ 80 ಲಕ್ಷ ರೂ. ಲೂಟಿ ಹೊಡೆದಿರೋ ಆರೋಪ ಈತನ ಮೇಲಿದೆ. ಈ ಬಗ್ಗೆ ಗ್ರಾಮದ ಕೆಲವರು ಸಿಇಓಗೆ ದೂರು ಕೊಟ್ಟಿದ್ದಾರೆ. ಹಾಗೆ ದೂರು ಕೊಟ್ಟ ಖಂಡೆಪ್ಪ ಎನ್ನುವಾತನಿಗೆ ಈತ ಹಾಕಿರುವ ಬೆದರಿಕೆ ಇದು. ಅಷ್ಟೇ ಅಲ್ಲ, ಅವ್ಯವಹಾರದ ಆರೋಪ ಮಾಡಿದವರ ಮೇಲೆ ಪಂಚಾಯತ್ ಹಿಂದಿ‌ನ ಅಧ್ಯಕ್ಷೆಯ ಮೂಲಕ ಅಟ್ರಾಸಿಟಿ ಕೇಸ್ ದಾಖಲಾಗುವಂತೆ ಮಾಡಿದ್ದಾನೆ ಈ ಪಿಡಿಓ. ಸರ್ಕಾರವೇ ಇಂಥವರಿಗೆ ಕುಮ್ಮಕ್ಕು ನೀಡುತ್ತಿದೆ ಅಂತ ಸಂಸದ ಉಮೇಶ ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವ್ಯವಹಾರದ ಬಗ್ಗೆ ಗ್ರಾಮಸ್ಥರು ಸಿಇಓಗೆ ದೂರು ಕೊಟ್ಟಾಗಿದೆ. ತಪ್ಪೇ ಮಾಡದಿದ್ರೆ ಧೈರ್ಯವಾಗಿ ಎದುರಿಸಬೇಕಿತ್ತು. ಅದು ಬಿಟ್ಟು ಒಬ್ಬ ಸರ್ಕಾರಿ ನೌಕರ ಎನ್ನುವುದನ್ನೂ ಮರೆತು ಪುಡಿ ರೌಡಿಯಂತೆ ಪಿಡಿಓ ಅವಾಜ್ ಹಾಕಿದ್ದು ಇಲಾಖೆಯೇ ತಲೆ ತಗ್ಗಿಸುವಂತಾಗಿದೆ. 

ಇದನ್ನೂ ವೀಕ್ಷಿಸಿ:  ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅಂತರ್ ಕಾಲೇಜು, ವಿವಿ ಬದಲಾವಣೆಗೆ ಅಸ್ತು

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more