ಬೀದಿಗಿಳಿದು ಕ್ರಿಮಿನಾಶಕ ಸಿಂಪಡಿಸಿದ ರೇಣುಕಾ, ಕೊರೋನಾಕ್ಕೆ ಅಲ್ಲ!

Apr 5, 2020, 5:20 PM IST

ದಾವಣಗೆರೆ(ಏ. 05) ಶಾಸಕ ಎಂಪಿ ರೇಣುಕಾಚಾರ್ಯ ಅವರೇ ಹಾಗೆ. ತಾವೆ ಬೇರೆ ತಮ್ಮ ಸ್ಟೈಲೇ ಬೇರೆ ಅಂಥ ಇರುವವರು. ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂಬ ದೂರು ಬಂದ ಕಾರಣಕ್ಕೆ ತಾವೇ ಸ್ವತಃ ಚರಂಡಿಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.

ಕೊರೋನಾ ಲಾಕ್ ಡೌನ್ ಮಧ್ಯೆ ರೇಣುಕಾಚಾರ್ಯ ಬಿಂದಾಸ್ ತಿರುಗಾಟ!

ಕೊರೋನಾ ಜಾಗ್ಋತಿಯನ್ನು ಮೂಡಿಸಿದ್ದ ರೇಣುಕಾ ಮಾಸ್ಕ್ ಇಲ್ಲದೆ ಮನೆ ಮನೆಗೆ ಹೋಗಿದ್ದು ಸುದ್ದಿಯಾಗಿತ್ತು. ಏನೇ ಇದ್ದರೂ ರೇಣುಕಾಚಾರ್ಯ ಮಾತ್ರ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಲೇ ಇದ್ದಾರೆ.