'ಕಡೇ ದಿನ ಕಡೇ ಶೋ'  ಆಮಂತ್ರಣ ಕೊಟ್ಟರು ಜಯಂತ್ ಕಾಯ್ಕಿಣಿ

Sep 29, 2019, 5:55 PM IST

'ಕಡೇ ದಿನ ಕಡೇ ಶೋ'.. ಹೌದು ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ಇದೇ ಅಕ್ಟೋಬರ್ 1ರಂದು ಸಂಜೆ 7.30 ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರ ಟೂರಿಂಗ್ ಟಾಕೀಸ್ ಪುಸ್ತಕದಿಂದ ಪ್ರೇರಣೆ  ಪಡೆದುಕೊಂಡ 'ಕಡೇ ದಿನ ಕಡೇ ಶೋ' ನಾಟಕದ ನಿರ್ಮಾಣವನ್ನು ಧನುಷ್. ಎಸ್ ಮಾಡಿದ್ದರೆ, ಗೀತ ಸಾಹಿತ್ಯವನ್ನು ಬಾಲಾಜಿ ಶರ್ಮ, ಶ್ರೀನಿಧಿ. ಎಸ್ ನೀಡಿದ್ದಾರೆ. ಸಂಗೀತದ ಹೊಣೆಗಾರಿಕೆ ಪ್ರಸನ್ನ ಕುಮಾರ್ ಅವರದ್ದಾಗಿದ್ದರೆ, ರಂಗರೂಪ, ವಿನ್ಯಾಸ ಹಾಗೂ ನಿರ್ದೇಶನದ ಜವಾಬ್ದಾರಿ ಶ್ರೀನಿಧಿ ಎಸ್ ಅವರದ್ದು.  ಬಿಡುವು ಮಾಡಿಕೊಂಡು  ನೀವು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ..