ASI ಶಾಂತ ಶೆಟ್ಟಿಯಿಂದ ಜನಜಾಗೃತಿ :ಖಾಲಿ ಬಿದ್ದ ಸ್ಥಳವೀಗ ಬಸ್ ಸ್ಟಾಂಡ್

Sep 5, 2021, 1:20 PM IST

ಬೆಂಗಳೂರು (ಸೆ.05):  ನಾಲ್ಕು ವರ್ಷಗಳಿಂದ ಖಾಲಿ ಬಿದ್ದಿದ್ದ ಸ್ಥಳವೀಗ ಬಸ್ ಸ್ಟಾಂಡ್ ಆಗಿ ಪರಿವರ್ತನೆಯಾಗುತ್ತಿವೆ. ಕಾಂಕ್ರಿಟ್ ಡಿವೈಡರ್ ಬಳಸಿ ಬಸ್‌ಸ್ಟಾಂಡ್‌ಗೆ ಮಹಿಳಾ ಪೊಲೀಸ್ ಪ್ರತ್ಯೇಕ ಸ್ಥಳ ನಿಗದಿ ಮಾಡಿದ್ದಾರೆ.

ಸಾರ್ವಜನಿಕ ರಸ್ತೆಯೇ ಪಬ್‌ ಪಾರ್ಕಿಂಗ್! ಕಣ್ಮುಚ್ಚಿ ಕುಳಿತ ಪೊಲೀಸರು

ಮಲ್ಲೇಶ್ವರಂ ಸಂಚಾರ ವಿಭಾಗದ ಎಎಸ್‌ಐ ಶಾಂತ ಶೆಟ್ಟಿ  ಮಾದರಿ ಕಾರ್ಯ ಮಾಡಿದ್ದು,  ಆಟೋಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿಸಿ ಇದರ ಜೊತೆಯಲ್ಲಿಯೇ ಸಾರ್ವಜನಿಕರಿಗೆ ಜನಜಾಗೃತಿ ಕಾರ್ಯಕ್ರಮ ಮಾಡಿದ್ದಾರೆ.  ಮಲ್ಲೆಶ್ವರಂ ವಿದ್ಯಾರ್ಥಿನಿಯರಿಗೆ ಕೋವಿಡ್ ಹಾಗೂ ಟ್ರಾಫಿಕ್ ನಿಯಮದ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.  ಎಎಸ್ಐ ಶಾಂತಶೆಟ್ಟಿ ಕಾರ್ಯಕ್ಕೆ  ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ