News 360° : ಮಸೀದಿಯನ್ನ ಬಿಟ್ಟು ಕೊಡಿ ಅಂದ್ರಾ ಯೋಗಿ?

Aug 1, 2023, 10:27 PM IST

ಬೆಂಗಳೂರು(ಆ.01):  ಜ್ಞಾನವ್ಯಾಪಿ ಮಸೀದಿಗೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಒಂದು ದೊಡ್ಡ ಹೇಳಿಕೆಯನ್ನ ಕೊಟ್ಟಿದ್ದಾರೆ. ಅಲಹಾಬಾದ್‌ ಹೈಕೋರ್ಟ್‌ ಆ.3 ರಂದು ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ತೀರ್ಪನ್ನ ಪ್ರಕಟಿಸಲಿದೆ. ಆ ತೀರ್ಪು ಬರುವ ಮೊದಲೇ ಯೋಗಿ ಆದಿತ್ಯನಾಥ್‌ ಕೊಟ್ಟಂತಹ ಹೇಳಿಕೆ ದೇಶಾದ್ಯಂತ ಭಾರೀ ಚರ್ಚೆ ಆಗುತ್ತಿದೆ. ಅಲಹಾಬಾದ್‌ ಹೈಕೋರ್ಟ್‌ ತೀರ್ಪಿಗೂ ಮುನ್ನ ಯೋಗಿ ಆದಿತ್ಯನಾಥ್‌ ಜ್ಞಾನವ್ಯಾಪಿ ಮಸೀದಿಯನ್ನ ಬಿಟ್ಟುಕೊಡಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಯೋಗಿ ಆದಿತ್ಯನಾಥ್‌ ಮಾತಿಗೆ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧವನ್ನ ವ್ಯಕ್ತಪಡಿಸಿವೆ. 

ದೀಪಿಕಾ ಪಡುಕೋಣೆ ಬೆನ್ನ ಮೇಲೆ ರಣ್ವೀರ್ ಸಿಂಗ್ ಪೋಸ್ಟರ್; ಜಾಕೆಟ್ ವೈರಲ್!