ಶನಿಯ ರಾಶಿಗೆ ರವಿ ಪ್ರವೇಶ; ಮುಂದಿನ 27 ದಿನಗಳು ಅಂಟಲಿದೆ ಲೋಕಕ್ಕೆ ದೋಷ

Feb 13, 2023, 4:30 PM IST

ಭಗವಂತ ಸೂರ್ಯ ನಾರಾಯಣನು ಕುಂಭ ರಾಶಿಗೆ ಫೆಬ್ರವರಿ 13ರಂದು ಪ್ರವೇಶಿಸಿದ್ದಾನೆ. ಈಗಾಗಲೇ ಕುಂಭ ರಾಶಿಯಲ್ಲಿ ಶನಿ ಇದ್ದು, ರವಿ ಶನಿ ಯುತಿಯಿಂದ ಲೋಕಕ್ಕೆ ಗಂಡಾಂತರ ಕಾದಿದೆ ಎನ್ನುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ. ಮುಂದಿನ 27 ದಿನಗಳ ಕಾಲ ಜನರ ಮನಸ್ಸು ಮಂದವಾಗುತ್ತದೆ, ಬುದ್ಧಿ ಮಂದ , ಗರ್ವ , ಹೀನಭಾವ , ಮರೆವು , ನಿದ್ರಾ ಹೀನತೆ , ಚಿತ್ತ ಕೆಡುವುದು, ಸೋಮಾರಿತನದಂಥ ಭಾವನೆಗಳು ಆವರಿಸುತ್ತವೆ. ತಂದೆ ಮಕ್ಕಳ ಜಗಳ ಹೆಚ್ಚುತ್ತದೆ, ರಾಜಕೀಯದಲ್ಲಿ ರೋಷಾವೇಶ ಹೆಚ್ಚುತ್ತದೆ. ಇಷ್ಟೇ ಅಲ್ಲದೆ, ರವಿ ಶನಿ ಯುತಿಯ ಕಾರಣದಿಂದ ಲೋಕಕ್ಕೆ ಇನ್ನೂ ಹಲವು ಕಂಟಕ ಕಾದಿದೆ. ಅವುಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ..

ಮಂತ್ರಾಲಯ ಸಮೀಪವೇ ಪಂಚಮುಖಿ ಆಂಜನೇಯ ದೇವಾಲಯ ಇರೋದ್ಯಾಕೆ ತಿಳ್ದಿದೀರಾ?