ಪಿತೃಗಳಿಗೆ ತರ್ಪಣ ನೀಡುವುದರಿಂದ ಆರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ ನಿವಾರಣೆ

Aug 31, 2020, 2:19 PM IST

ಈ ಶರೀರದ ಹುಟ್ಟಿಗೆ ಪಿತೃಗಳು ಕಾರಣ. ಅವರಿಂದಾಗಿಯೇ ಪಡೆದ ಶರೀರವಿರುವ ತನಕ ನಾವು ಅವರಿಗೆ ಋಣಿಯಾಗಿರಬೇಕು. ಅದುವೇ ಪಿತೃ ತರ್ಪಣದ ಹಿಂದಿನ ಭಾವ. ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮಹಾಲಯದ 15 ದಿನಗಳು ಪಿತೃಪಕ್ಷವೆನಿಸಿ ಶ್ರಾದ್ಧಾದಿಗಳಿಗೆ ಪ್ರಶಸ್ತವಾಗಿದೆ. 

ಪಿತೃಪಕ್ಷದಲ್ಲಿ ನಮ್ಮ ಪೂರ್ವಿಕರಿಗೆ ಪಿತೃ ತರ್ಪಣ ನೀಡಿದರೆ ಅವರುಗಳು ಸಂತುಷ್ಟರಾಗುತ್ತಾರೆ. ನಮ್ಮನ್ನು ಹರಸುತ್ತಾರೆ. ಏನೇ ದೋಷಗಳಿದ್ದರೂ ನಿವಾರಣೆಯಾಗುತ್ತದೆ. ಪಾಪಕರ್ಮಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಹಾಗಾದರೆ ಪಿತೃ ತರ್ಪಣ ನೀಡುವುದು ಹೇಗೆ? ಎಲ್ಲದರ ಬಗ್ಗೆ ಜ್ಯೋತಿಷಿಗಳು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ಮಹಾಲಯ ಅಮಾವಾಸ್ಯೆ: ಪಿತೃ ದೇವತೆಗಳನ್ನು ಸಂತುಷ್ಟಗೊಳಿಸುವುದು ಹೇಗೆ?