May 14, 2022, 7:57 PM IST
ಬೆಂಗಳೂರು (ಮೇ. 14): ವರ್ಷದ ಮೊದಲ ಚಂದ್ರ ಗ್ರಹಣ ಗೋಚಾರಕ್ಕೂ ಮುನ್ನ ಆಸಾನಿ ಚಂಡಿ ಆರ್ಭಟ ತಾರಕಕ್ಕೇರಿದೆ. ಒಂದ್ ಕಡೆ ರಣ ರಣ ಬಿಸಿತು ತಾಂಡವವಾಡ್ತಿದ್ರೆ, ಇನ್ನೊಂದು ಕಡೆ ರಣರಕ್ಕಸ ಮಳೆಯಿಂದ ಜನರು ಹೈರಾಣಾಗಿದ್ದಾರೆ. ಹಾಗಾದ್ರೆ ವರ್ಷದ ಮೊಟ್ಟ ಮೊದಲ ರಕ್ತ ಚಂದ್ರ ಗ್ರಹಣ ಹೊತ್ತು ತಂದಿತಾ ಗಂಡಾಂತರ..? ವರ್ಷದ ಮೊದಲ ಚಂದ್ರಗ್ರಹಣ ಮೇ 16 ಸೋಮವಾರದಂದು ಸಂಭವಿಸಲಿದೆ. ಈ ದಿನ ಬುದ್ಧ ಪೌರ್ಣಿಮೆಯನ್ನೂ ಆಚರಿಸಲಾಗುತ್ತದೆ. ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆ, ಅದರಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣಗಳು ಇವೆ. ಈಗಾಗಲೇ ಕಳೆದ ತಿಂಗಳು ಏಪ್ರಿಲ್ 30 ರಂದು ಮೊದಲ ಸೂರ್ಯಗ್ರಹಣ ಸಂಭವಿಸಿದೆ.
ಈ ಚಂದ್ರಗ್ರಹಣವು ಮೇ 15ರಂದು ರಾತ್ರಿ 10.28 ಪ್ರಾರಂಭವಾಗಿ, ಮೇ 16ರಂದು ಬೆಳಗ್ಗೆ 12.11ರ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮತ್ತು ಅರ್ಧರಾತ್ರಿ 1.55ರ ಹೊತ್ತಿಗೆ ಮುಗಿಯುತ್ತದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ ಈ ರೀತಿಯ ಚಂದ್ರಗ್ರಹಣದಲ್ಲಿ ಸೂತಕದ ಆಚರಣೆ ಮಾಡಲಾಗುವುದಿಲ್ಲ.
ಇದನ್ನೂ ಓದಿ: Lunar Eclipse 2022: ಈ ಚಂದ್ರಗ್ರಹಣವು 3 ರಾಶಿಯವರ ಅದೃಷ್ಟ ಬದಲಿಸುತ್ತೆ..!
ಮೇ ತಿಂಗಳು ಅಂದ್ರೆ ಸಾಮಾನ್ಯವಾಗಿ ರಣ ರಣ ಬಿಸಿಲು ತಾಂಡವವಾಡುತ್ತದೆ. ಆದ್ರೆ ಈ ವರ್ಷ ಮಾತ್ರ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಉತ್ತರದಲ್ಲಿ ರಣಭೀಕರ ಬಿಸಿಲಿನ ಅಲರ್ಟ್ ಘೋಷಿಸಲಾಗಿದ್ದು, ದಕ್ಷಿಣದಲ್ಲಿ ಚಂಡಾಸುರ ಘರ್ಜಿಸುತ್ತಿದ್ದಾನೆ. ಆಸಾನಿ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ಹುಟ್ಟಿಕೊಂಡು ಪಂಚರಾಜ್ಯಗಳಲ್ಲಿ ರಣಭಯಂಕರ ಬಿರುಗಾಳಿ ಎಬ್ಬಿಸಿ, ಮಳೆ ಸುರಿಸಿ ಅಟ್ಟಹಾಸದಿಂದ ಮೆರೆಯುತ್ತಿದೆ..
ಈ ಸೈಕ್ಲೋನ್ ಪರಿಣಾಮ, ರಾಜ್ಯದಲ್ಲಿ ಸಿಡಿಲಾರ್ಭಟದಿಂದ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲವೂ ವರ್ಷದ ಮೊಟ್ಟ ಮೊದಲ ರಕ್ತ ಚಂದ್ರ ಗ್ರಹಣಕ್ಕಿಂದ ಪೂರ್ವದಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟಿಸುತ್ತಿದೆ. ಈ ರಕ್ತ ಚಂದ್ರ ಗ್ರಹಣ ಎಲ್ಲೆಲ್ಲಿ ಗೋಚಾರವಾಗುತ್ತೋ ಅಲ್ಲಲ್ಲಿ ದೋಷ, ಕಂಟಕ ಇದೆ ಅಂತ ಜ್ಯೋತಿಷ್ಯಾಸ್ತ್ರ ಹೇಳ್ತಿದೆ. ಇಲ್ಲಿದೆ ಈ ಕುರಿತ ಕಂಪ್ಲೀಟ್ ರಿಪೊರ್ಟ್