ತುಮಕೂರು ಮೈತ್ರಿ ಸಂಧಾನ ಯಶಸ್ಸು? ‘ಅಂತಿಮ ನಿರ್ಧಾರ’ ಕಾಯ್ದಿರಿಸಿದ ಗೌಡರು!

Mar 29, 2019, 1:12 PM IST

ಎಚ್.ಡಿ. ದೇವೇಗೌಡರ ರಂಗ ಪ್ರವೇಶದಿಂದ ತುಮಕೂರು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಗೆಲುವಿಗೆ ಮುದ್ದೆ ಹನುಮೇಗೌಡರ ಸ್ಪರ್ಧೆ ವಿಘ್ನ ತಂದೊಡ್ಡುತ್ತಾ? ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈತ್ರಿನಾಯಕರು ಮುದ್ದುಹನುಮೇಗೌಡರ ಮನವೊಲಿಸುವ ಕಸರತ್ತು ಮುಂದುವರೆಸಿದ್ದಾರೆ. ಆದರೆ ಮುದ್ದಹನುಮೇಗೌಡರು ತಮ್ಮ ‘ಅಂತಿಮ ತೀರ್ಪನ್ನು’ ಕಾಯ್ದಿರಿಸಿದ್ದಾರೆ.