'ಸರ್ಕಾರ ವಿದ್ಯಾಗಮ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು'

Oct 9, 2020, 5:03 PM IST

ಬೆಂಗಳೂರು (ಅ. 09): ವಿದ್ಯಾಗಮ ಶಾಲೆಯ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಶಿಕ್ಷಕರಿಗೆ, ಮಕ್ಕಳಿಗೆ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತಿದೆ. ಜೊತೆಗೆ ಶಾಲೆಯ ಪುನಾರಂಭವೂ ಬೇಡ ಎನ್ನುವ ಚರ್ಚೆ ಮಾಧ್ಯಮಗಳಲ್ಲಿ ಜೋರಾಗಿದೆ. ಇದಕ್ಕೆ ಮಾಜಿ ಸಿಎಂ ಎಚ್‌ಡಿಕೆ ಪ್ರತಿಕ್ರಿಯಿಸಿದ್ದಾರೆ. 

ಕೋವಿಡ್‌ನಿಂದ ಶಿಕ್ಷಕರ ಸಾವು: ಶಿಕ್ಷಣ ಸಚಿವರೇ ದಯವಿಟ್ಟು ಶಿಕ್ಷಕರ ಅಳಲನ್ನು ಕೇಳಿ

ವಿದ್ಯಾಗಮ ಹೆಸರಲ್ಲಿ ಸರ್ಕಾರ ಶಾಲೆ ನಡೆಸುತ್ತಿದೆ. ಮೊದಲು ನಮಗೆ ಜೀವ ಮುಖ್ಯ. ಜೀವ ಉಳಿದರೆ ಆಮೇಲೆ ಬೇರೆ ವಿಚಾರ ನೋಡಿಕೊಳ್ಳೋಣ. ಸರ್ಕಾರ ಹಠಮಾರಿ ಧೋರಣೆ ಬಿಟ್ಟು, ಒತ್ತಡಕ್ಕೆ ಮಣಿಯದೇ, ಮಕ್ಕಳ, ಪೋಷಕರ ಜೀವದ ಜೊತೆ ಚೆಲ್ಲಾಟ ಆಡೋದು ಬೇಡ ಅಂತ ನಾನು ಕೇಳಿಕೊಳ್ಳುತ್ತೇನೆ. ಮುಖ್ಯಮಂತ್ರಿಗಳ ಜೊತೆ ನಾನೇ ನೇರವಾಗಿ ಮಾತನಾಡುತ್ತೇನೆ. ದಯವಿಟ್ಟು ಇದನ್ನ ನಿಲ್ಲಿಸಿ ಬಿಡಿ' ಎಂದು ಮನವಿ ಮಾಡುವುದಾಗಿ ಹೇಳಿದ್ದಾರೆ.