ತುಳು ನಟ ಸುರೇಂದ್ರ ಬಂಟ್ವಾಳರ ಮರ್ಡರ್ ಮಾಡಿದ್ದೇಕೆ? ತಾಯಿಯ ಹೇಳಿಕೆಯಿಂದ ಸಿಕ್ತು ಟ್ವಿಸ್ಟ್!

Oct 28, 2020, 12:22 PM IST

ಬೆಂಗಳೂರು (ಅ. 28): ತುಳುವಿನ ಖ್ಯಾತ ನಟ ಕಂ ರೌಡಿ ಸುರೇಶ್ ಬಂಟ್ವಾಳ ಮರ್ಡರ್ ಆಗಿದೆ. ಸುರೇಶ್ ತಾಯಿ ಹೇಳಿದ ಹೇಳಿಕೆಯೊಂದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ. 

ನಾನೇ ಕೊಂದಿದ್ದು.. ಖ್ಯಾತ ನಟನ ಕೊಲೆ ಹಿಂದಿನ ಕರಾಮತ್ತು!

ಸುರೇಂದ್ರನ ಭಂಡಾರಿ ಬೆಟ್ಟು ಫ್ಲಾಟ್‌ನಲ್ಲಿ ಒಂದು ಕೋಟಿ ರೂ ಹಣ ಇತ್ತು. ಈ ಬಗ್ಗೆ ಮೂರು ದಿನಗಳ ಹಿಂದೆ ನನ್ನ ಬಳಿ ಹೇಳಿದ್ದ. ಹೀಗಾಗಿ ಆ ಹಣಕ್ಕಾಗಿಯೇ ಆತನ ಹತ್ಯೆ ಮಾಡಲಾಗಿದೆ. ಅಲ್ಲದೆ ಅವನ ಮೈಮೇಲೆ ಸುಮಾರು ಒಂದು ಕೆ.ಜಿ. ಚಿನ್ನಾಭರಣ ಇತ್ತು. ಕೊಲೆ ಮಾಡಿದ ಬಳಿಕ ಆರೋಪಿಗಳು ಕೋಟಿ ರು. ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ. ಆದರೆ ಪೊಲೀಸರು ಎಫ್‌ಐಆರ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ. ಮಾಹಿತಿ ನೀಡಿದರೂ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ ಎಸ್ಪಿಗೆ ಹಣ ಮತ್ತು ಆಭರಣದ ಬಗ್ಗೆ ದೂರು ನೀಡುತ್ತೇವೆ ಎಂದು ತಾಯಿ ರಾಧಾ ಹೇಳಿದ್ದಾರೆ.