
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ಚಿತ್ರದಲ್ಲಿ ಶೇಖರ್ ಸುಮನ್ ಅಭಿನಯಕ್ಕೆ ಸಿನಿಪ್ರಿಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಬ್ರಿಟಿಷ್ ರಾಜ್ನಿಂದ ನವಾಬನ ಪಾತ್ರವನ್ನು ಇದರಲ್ಲಿ ಶೇಖರ್ ಸುಮನ್ ಮಾಡಿದ್ದಾರೆ. ನವಾಬ್ ಎಂಬುದು ಒಬ್ಬ ಸಾರ್ವಭೌಮ ಆಡಳಿತಗಾರನನ್ನು ಸೂಚಿಸುವ ರಾಜಮನೆತನದ ಬಿರುದು, ಸಾಮಾನ್ಯವಾಗಿ ದಕ್ಷಿಣ ಏಷ್ಯಾದ ರಾಜ್ಯದ, ರಾಜಕುಮಾರನ ಪಾಶ್ಚಿಮಾತ್ಯ ಬಿರುದನ್ನು ಹೋಲುತ್ತದೆ. ಈ ಚಿತ್ರದ ಕುರಿತು ಸಂದರ್ಶನ ನೀಡುವ ಸಂದರ್ಭದಲ್ಲಿ ಶೇಖರ್ ಸುಮನ್ ಅವರು ಸಮಾಜಕ್ಕೆ, ಸಮಾಜದ ಒಳಿತಿಗೆ ಲೈಂಗಿಕ ಕಾರ್ಯಕರ್ತೆಯರ ಕೊಡುಗೆ ಕುರಿತು ಮಾತನಾಡಿದ್ದಾರೆ. ಲೈಂಗಿಕ ಕಾರ್ಯಕರ್ತೆಯರು ಸಮಾಜದಲ್ಲಿ ಹೇಗೆ ಅಪಾರ ಕೊಡುಗೆಯನ್ನು ಹೊಂದಿದ್ದಾರೆ ಎಂಬುದರ ಕುರಿತು ಶೇಖರ್ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ.
ಹೀರಾಮಂಡಿ ನವಾಬರು ಮತ್ತು ವೇಶ್ಯೆಯರ ನಡುವಿನ ಸಂಬಂಧವನ್ನು ಚಿತ್ರಿಸುತ್ತದೆ. ವೇಶ್ಯೆಯರನ್ನು ಸಾಮಾನ್ಯವಾಗಿ ಕೇವಲ ಲೈಂಗಿಕ ಕಾರ್ಯಕರ್ತರು ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ ಎಂದು ಶೇಖರ್ ಹೇಳಿದ್ದಾರೆ. ಅವರನ್ನು ಈ ರೀತಿ ಮಾಡಿದ್ದು ಸಮಾಜವೇ ಎಂದಿರುವ ನಟ, ಬಹಳಷ್ಟು ಬಾರಿ, ಯಾವುದೇ ಮಹಿಳೆ ಆಯ್ಕೆಯಿಂದ ವೇಶ್ಯೆಯಾಗುವುದಿಲ್ಲ. ಸಂದರ್ಭಗಳು ಹೆಚ್ಚಾಗಿ ಮಹಿಳೆಯನ್ನು ಲೈಂಗಿಕ ಕಾರ್ಯಕರ್ತೆಯಾಗುವಂತೆ ಒತ್ತಾಯಿಸುತ್ತವೆ. ಈ ಎಲ್ಲದರ ಹೊರತಾಗಿಯೂ, ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದಿದ್ದಾರೆ. ಹಲವು ಪುರುಷರಲ್ಲಿ ಲೈಂಗಿಕ ಹಸಿವು ಇರುತ್ತದೆ. ಆ ಹಸಿವನ್ನು ತಣಿಸುವ ಕೆಲಸವನ್ನು ಲೈಂಗಿಕ ಕಾರ್ಯಕರ್ತೆಯರು ಮಾಡುತ್ತಾರೆ. ಇದೊಂದು ರೀತಿಯಲ್ಲಿ ಒಳ್ಳೆಯ ಕೊಡುಗೆ. ಇಲ್ಲದಿದ್ದರೆ ಈ ಹಸಿವನ್ನು ತಣಿಸಿಕೊಳ್ಳಲು ಬೇರೆ ಮಾರ್ಗವನ್ನು ಪುರುಷರು ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಲೈಂಗಿಕ ಕಾರ್ಯಕರ್ತೆಯರು ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶೇಖರ್ ಸುಮನ್ ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಶಾರುಖ್, ಕರಣ್ ಜೋಹರ್ ಸಲಿಂಗಕಾಮಿಯೆ? ವಿದೇಶಗಳ ಸಭೆಯ ಶಾಕಿಂಗ್ ಹೇಳಿಕೆ ನೀಡಿದ ಗಾಯಕಿ ಸುಚಿತ್ರಾ
ಹೀರಾಮಂಡಿಯ ಕುರಿತು ಮಾತನಾಡಿದ ಶೇಖರ್, ಮಕ್ಕಳನ್ನು ಹೀರಾಮಂಡಿಗೆ ಕಳುಹಿಸಲಾಗುತ್ತಿತ್ತು. ನವಾಬರು ಅವರಿಂದ ಕಲಿಯುತ್ತಾರೆ. ಹೀರಾಮಂಡಿಯವರ ಕೊಡುಗೆ ಅಪಾರವಾಗಿತ್ತು, ಅದೊಂದು ಸಂಸ್ಥೆಯಾಗಿತ್ತು, ಆದರೆ ನಾವು ಯಾವಾಗಲೂ ವೇಶ್ಯೆಯರನ್ನು ವಿಭಿನ್ನ ಅರ್ಥದಲ್ಲಿ ನೋಡಿದ್ದೇವೆ. ಸೌಜನ್ಯಕ್ಕಾದರೂ ಅವರ ಬಗ್ಗೆ ಅನುಕಂಪ ತೋರಿಸುತ್ತಿಲ್ಲ. ಆದರೆ ಹೀರಾಮಂಡಿಯಲ್ಲಿ, ಸ್ವಾತಂತ್ರ್ಯ ಚಳವಳಿಗೆ ಅವರ ಕೊಡುಗೆಯನ್ನು ಸಹ ತೋರಿಸಲಾಗಿದ್ದು, ಇದು ಗಮನಾರ್ಹವಾಗಿದೆ ಎಂದಿದ್ದಾರೆ.
ಹೀರಾಮಂಡಿಯು 1920-40ರ ದಶಕದಲ್ಲಿ ಭಾರತದ ಸ್ವಾತಂತ್ರ್ಯ ಕ್ರಾಂತಿಯು ಹೆಚ್ಚುತ್ತಿರುವ ಕಾಲಘಟ್ಟದಲ್ಲಿದೆ. ಶೇಖರ್ ಹೊರತುಪಡಿಸಿ, ಅವರ ಮಗ ಅಧ್ಯಾಯನ್ ಸುಮನ್ ಸಹ ನವಾಬ್ ಜೋರಾವರ್ ಮತ್ತು ಯುವ ನವಾಬ್ ಜುಲ್ಫಿಕರ್ ಅವರನ್ನು ಸರಣಿಯಲ್ಲಿ ಚಿತ್ರಿಸಿದ್ದಾರೆ. ಮನೀಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಫರೀದಾ ಜಲಾಲ್ ಎಪಿಕ್ ಶೋನಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸುತ್ತಾರೆ.
10 ಸೆಂ.ಮೀ. ಗಡ್ಡೆ: ಆಸ್ಪತ್ರೆಯಿಂದಲೇ ವಾಯ್ಸ್ ಮೆಸೇಜ್ ಮಾಡಿ ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.