ಬೆಂಗಳೂರು;  ತನ್ನ ರಂಗಿನಾಟಕ್ಕೆ ಅಡ್ಡಿಯಾದ ಪುತ್ರನನ್ನೇ ಹತ್ಯೆ ಮಾಡಿಸಿದ 'ಮಹಾತಾಯಿ'

Oct 8, 2021, 3:42 PM IST

ಬೆಂಗಳೂರು(ಅ. 08)   ತಾಯಿ-ಮಗ ಮತ್ತು ತಾಯಿಯ ಬಾಯ್ ಫ್ರೆಂಡ್ ಒಟ್ಟಿಗೆ ಕುಳಿತು ಎಣ್ಣೆ ಪಾರ್ಟಿ ಮಾಡಿದ್ದರು. ಈ ನಡುವೆ ಅವರ ನಡುವೆ ಕಿರಿಕ್ ಶುರುವಾಗಿತ್ತು.  ತಾಯಿಯ ಎದುರಲ್ಲೇ ಮಗನ ಹತ್ಯೆಯಾಗಿತ್ತು. ತಾಯಿ-ಮಗ ಮತ್ತು ಪ್ರಿಯಕರ...!(Suvarna FIR) 

ಕಾಂಡೋಮ್  ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಮಗನ ಹತ್ಯೆ ಮಾಡಲು ತಾಯಿಯೇ ಸಾಥ್ ನೀಡಿದ್ದ ಕತೆ. ಇದಕ್ಕೆಲ್ಲ ಕಾರಣ ಅದೊಂದು ಸಂಬಂಧ. ವಿಚಿತ್ರ  ಪ್ರಕರಣದಲ್ಲಿ ಒಂದು(Murder) ಕೊಲೆಯಾಗಿಹೋಗಿದೆ. ಅಕ್ರಮ ಸಂಬಂಧಕ್ಕೆ(Illicit Relationship) ಯುವಕ ಬಲಿಯಾಗಿದ್ದಾನೆ ಹಲಸೂರು ಠಾಣಾ ವ್ಯಾಪ್ತಿಯ ಮರ್ಫಿ ಟೌನ್ ನಲ್ಲಿ‌ ನಡೆದ ಘಟನೆ ಬೆಳಕಿಗೆ ಬಂದಿದ್ದು ನಂದು (17) ಕೊಲೆಯಾಗಿದ್ದಾನೆ. 6 ವರ್ಷದ ಹಿಂದೆಯೇ ಗಂಡ ಪರಮೇಶ್ವರ್ ನಿಂದ ಪತ್ನಿ ಗೀತಾ (35) ದೂರವಾಗಿದ್ದಳು. ಗೀತಾಗೆ ಫೇಸ್‌ಬುಕ್‌  ಶಕ್ತಿವೇಲ್ (24) ಪರಿಚಯವಾಗಿದ್ದ. ಶಕ್ತಿವೇಲ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಗೀತಾ ಮನೆಗೆಲಸ ಮಾಡಿಕೊಂಡಿದ್ಳು. ತಾಯಿ ಹಾಗೂ ಶಕ್ತಿ ನಡುವಿನ ಅನೈತಿಕ ಸಂಬಂಧನ್ನು ಪುತ್ರ ನಂದು (17) ವಿರೋಧಿಸುತ್ತಿದ್ದ.