ಬೆಂಗಳೂರು;  ಹೆತ್ತ ಮಗನನ್ನೇ ಹತ್ಯೆ ಮಾಡಿದ..ಹುಡುಕಿದರೆ ಕಾರಣವೇ ಇಲ್ಲ!

Oct 14, 2021, 3:48 PM IST

ಬೆಂಗಳೂರು(ಅ. 14)  ಕುಡುಕ ತಂದೆ.. ಬಿಂದಾಸ್ ಮಗ.. ದಿನ ಬೆಳಗಾದರೆ ತಂದೆ ಮಗ ಕಿತ್ತಾಡುತ್ತಿದ್ದರು. ಅದೊಂದು ದಿನ ಭಯಾನಕ ಘಟನೆ (Suvarna FIR)ನಡೆದು ಹೋಗುತ್ತದೆ. ತಂದೆಯಿಂದಲೇ ಮಗನ (Murder) ಹತ್ಯೆಯಾಗುತ್ತದೆ. ಎದೆ ಭಾಗಕ್ಕೆ ಹೆತ್ತ ತಂದೆಯೇ ಮನಸೋ ಬಂದಂತೆ ಚಾಕು ಇರಿದಿದ್ದ.

ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಹನಿಟ್ರ್ಯಾಪ್ ಸುಂದರಿ

ಬೆಂಗಳೂರಿನ(Bengaluru) ಕಾಮಾಕ್ಷಿ ಪಾಳ್ಯದ ಈ ಪ್ರಕರಣ ನಿಜಕ್ಕೂ  ಘೋರ..ಘನ ಘೋರ.. ಹೆಸರು ಮಾಡಿರುವ ಮಾರುತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಇವರ ಕುಟುಂಬಕ್ಕೆ ಸೇರಿದ್ದು. ಮಗ ಸಂತೋಷ್ ನನ್ನು ತಂದೆ ಗುರುರಾಜ್ (Crime News) ಹತ್ಯೆ ಮಾಡಿದ್ದ.  ಹಾಗಾದರೆ ಇಂಥ ಘೋರ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?