ಬೆಂಗಳೂರು; ಬಾಡಿಗೆ ಕೊಡುವ ಮುನ್ನ ಯೋಚಿಸಿ.. ಹಂತಕರಿರಬಹುದು!

Aug 27, 2021, 5:34 PM IST

ಬೆಂಗಳೂರು(ಆ. 27)  ಕಾಲ ತುಂಬಾ ಬದಲಾಗಿದೆ. ಯಾರನ್ನು ಹತ್ತಿರ ಸೇರಿಸಬೇಕು ಎಂದರೂ ಒಮ್ಮೆ ಯೋಚನೆ ಮಾಡಿ. ಅದಕ್ಕೆ ಕಾರಣ ಬೆಂಗಳೂರಿನ ವೃದ್ಧ ದಂಪತಿಯ ಕೊಲೆ ಪ್ರಕರಣ. ಮೆನ ಬಾಡಿಗೆ ಕೊಡುವ ಮಾಲೀಕರೇ ಎಚ್ಚರ. ಮನೆ ಬಾಡಿಗೆ ನೀಡುವ ಮುನ್ನ  ಹತ್ತು ಬಾರಿ ಯೋಚನೆ ಮಾಡಬೇಕಾಗುತ್ತದೆ.

ನಾಲ್ಕು ಕೋಟಿ ಮೊತ್ತದ ಚಿನ್ನ ಗಂಟು ಕಟ್ಟುತ್ತಿರುವಾಗಲೇ ಸಿಕ್ಕಿಬಿದ್ರು

ನಂಬಿಕೆಯಿಟ್ಟು ಮನೆ ಬಾಡಿಗೆಗೆ ಕೊಟ್ಟಿದ್ದ ವೃದ್ಧ ದಂಪತಿಯನ್ನು ಬಾಡಿಗೆದಾರರೇ  ಹತ್ಯೆ ಮಾಡಿದ್ದರು. ವರಮಹಾಲಕ್ಷ್ಮೀ ಹಬ್ಬದ ದಿನವೇ ವೃದ್ಧ ದಂತಿ ಹೆಣವಾಗಿದ್ದರು. ಅಕ್ಕ ಪಕ್ಕದವರಿಗೆ ವಿಚಾರ ಗೊತ್ತಾಗಿದೆ.  ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.