Nov 26, 2021, 4:50 PM IST
ಒಂದು ತುಂಬು ಕುಟುಂಬ, 5 ಮಂದಿಯ ಸುಂದರ ಸಂಸಾರ. ಇದಕ್ಕಿದ್ದಂತೆ ಇಡೀ ಕುಟುಂಬ ವಿಷ ಕುಡಿದು ಆತ್ಮಹತ್ಯೆ(Suicide) ಮಾಡಿಕೊಳ್ಳುತ್ತೆ. ಪಿಯುಸಿ(PUC) ಓದುತ್ತಿದ್ದ ಮಗಳು ನರಳುತ್ತಾ ಪ್ರಾಣ ಉಳಿಸಿಕೊಳ್ಳಲು ಬೊಬ್ಬೆ ಹೊಡೆದಿದ್ದಳು. ಆ ಐವರ ಆತ್ಮಹತ್ಯೆಯ ಹಿಂದೆ ಇದ್ದದ್ದು ಒಂದು ಮಗುವಿನ ಕಳ್ಳತನ ಮತ್ತು ಪೊಲೀಸರ(Police) ತನಿಖೆ. ಆ ಕಳ್ಳತನ ಹಾಗೂ ಹಾಗೂ ಪೊಲೀಸರ ತನಿಖೆ. ಆತ್ಮಹತ್ಯೆ ಹಾಗೂ ಮಗುವಿನ ಮಾರಾಟದ ಕಥೆಗೆ ದೊಡ್ಡ ತಿರುವು ಸಿಕ್ಕಿದೆ.
Mangaluru Rape Case : ಸ್ಲೀಪರ್ ಬಸ್ಸಿನಲ್ಲಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ - ಸಾಬೀತು
ಒಂದು ಮಿಸ್ಟೇಕ್ ಇಡೀ ಕುಟುಂಬವನ್ನು ಸರ್ವನಾಶ ಮಾಡಿದ ಕಥೆ ಇದು. 50 ಸಾವಿರಕ್ಕೆ ನಡೆದ ಡೀಲ್ನಲ್ಲಿ ಹಲವರ ಡೀಲ್. ನ,07ರಂದು ಗಂಗೋತ್ರಿ ಮನೆಯಿಂದ ನರಳುತ್ತಾ ಬಂದು ಮನೆಯವರೆಲ್ಲಾ ವಿಷ ಕುಡಿದಿದ್ದೇವೆ, ಅಮ್ಮ ಉರಿ ತಡೆಯಲಾರದೆ ಸಂಪಿನಲ್ಲಿ ಬಿದ್ದಿದ್ದಾಳೆ ನಮ್ಮನ್ನು ರಕ್ಷಿಸಿ ಎಂದಿದ್ದಳು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುಷ್ಪಾ ಮಗಳು ಗಂಗೋತ್ರಿಯಿಂದ ಹೇಳಿಕೆ ಪಡೆದಿದ್ದರು ಪೊಲೀಸರು. ಆ ಹೇಳಿಕೆಯಲ್ಲಿತ್ತು ದೊಡ್ಡ ರಹಸ್ಯ.