ಬಾಲಿವುಡ್ ಸ್ಟಾರ್ಸ್ ಗೆಲುವಿನ ಹಿಂದಿದ್ದಾರೆ ದಕ್ಷಿಣದ ಕಲಾವಿದರು

Jan 27, 2023, 1:20 PM IST

ಸೋಲು ನಮಗೆ ಕಟ್ಟಿಟ್ಟ ಬುತ್ತಿ ಅಂತ ಡಿಸೈಡ್ ಆಗಿದ್ರು ಬಾಲಿವುಡ್ ಮಂದಿ. ಆದ್ರೆ ಶಾರುಖ್ ಖಾನ್ ಪಠಾಣ್ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್ಗೆ ನೀರೆರೆದು ಸಧ್ಯಕ್ಕೆ ಎದ್ದು ನಿಲ್ಲುವಂತೆ ಮಾಡಿದೆ. ಈ ಮಧ್ಯೆ ಒಂದ್ ಕಾಲದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಅಂತ ಕರೆಸಿಕೊಳ್ಳುತ್ತಿದ್ದ ಸಲ್ಮಾನ್ ಖಾನ್ ನಾನು ಮತ್ತೆ ಗೆದ್ದೇ ಗೆಲ್ತೇನೆ ಅಂತ ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಸಲ್ಲು ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಟೀಸರ್. ಟೀಸರ್ ನೋಡಿದವರು ಈ ಸಿನಿಮಾ ಗೆಲುವಿಗೆ ಸೌತ್ ಸ್ಟಾರ್ಸ್ ಕಾರಣ ಆಗ್ತಾರೆ ಅಂತ ಕಮೆಂಟ್ ಮಾಡುತ್ತಿದ್ದಾರೆ. ಅದು ಕೂಡ ನಿಜ. ಬಾಲಿವುಡ್ ಸಿನಿಮಾಗಳ ಗೆಲುವಿಗೆ ಈಗ ದಕ್ಷಿಣ ಭಾರತದ ಸ್ಟಾರ್ಸ್ ಅನಿವಾರ್ಯವಾಗಿದ್ದಾರೆ. ಹೀಗಾಗೆ ಸಲ್ಲು ಸಿನಿಮಾದಲ್ಲಿ ಸೌತ್ ಸ್ಟಾರ್ಸ್ ಆಗಿರೋ ವಿಕ್ಟರಿ ವೆಂಕಟೇಶ್ ಹಾಗು ಜಗಪತಿ ಬಾಬು ಅಬ್ಬರಿಸಿದ್ದಾರೆ. ಬಾಲಿವುಡ್ ಮಂದಿ ಸೋಲಿನ ಸುಳಿಯಲ್ಲಿ ಸಿಕ್ಕಿಕೊಂಡಾಗೆಲ್ಲಾ ಅವರ ಸಿನಿಮಾಗಳಲ್ಲಿ ದಕ್ಷಿಣ ಭಾರತದ ನಟರು ಅಭಿನಯಿಸಿ ಮತ್ತೆ ಬಾಲಿವುಡ್ಅನ್ನ ಮೇಲೆತ್ತಿದ್ದಾರೆ. ಇದಕ್ಕೆ ಮತ್ತೊಂದು ಎಕ್ಸಾಂಪಲ್ ಇತ್ತೀಚೆಗೆ ರಿಲೀಸ್ ಆದ ಬ್ರಹ್ಮಾಸ್ತ್ರ ಸಿನಿಮಾ.