ಚಿಕ್ಕಮಗಳೂರಲ್ಲಿ ನವರಾತ್ರಿ ಸಂಭ್ರಮ: ಪುಟಾಣಿಗಳಿಗೆ ಗೊಂಬೆ ನೋಡೋದೇ ಸಂತಸ!

First Published Oct 4, 2024, 11:27 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.04):  ದಸರಾ ನಾಡಿನ ಸಂಸ್ಕೃತಿಯ ಪ್ರತಿಬಿಂಬ. ನವರಾತ್ರಿ ಉತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿರುತ್ತದೆ. ಶಾಲೆಗೆ ರಜಾ ದಿನಗಳಾಗಿರುವುದು ಮಕ್ಕಳಲ್ಲಿ ಸಂತಸ ತಂದಿರುತ್ತದೆ. ಇದರ ಸಂಪೂರ್ಣ ಮಜಾ ಪಡೆಯುಲು ಹವಣಿಸುವ ಪುಟಾಣಿಗಳಿಗೆ ಗೊಂಬೆಗಳನ್ನು ನೋಡುವುದೇ ಆಹ್ಲಾದಕರ.

ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ ಪ್ರಾರಂಭವಾಗಿ, ಪೆಟ್ಟಿಗೆಯಲ್ಲಿರಿಸಿದ್ದ ಗೊಂಬೆಗಳನ್ನು ತೆಗೆದು, ಅವುಗಳಿಗೆ ಉಡುಗೆ ತೊಡಿಸಿ ಪಟ್ಟದ ಗೊಂಬೆಗಳನ್ನಾಗಿ ಶೃಂಗಾರ ಮಾಡಿ ಜೋಡಿಸುವ ಸಡಗರ ಎಲ್ಲೆಡೆ ಕಾಣಬಹುದು. ಮೈಸೂರಿನ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆ ಬಿಂಬಿಸಲು ಗೊಂಬೆ ಹಬ್ಬ ಆಚರಿಸಿದರೂ, ಇಂದು ರಾಜ್ಯದ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವ ಐದನ್ನು ಕಾಣಬಹುದು. 

ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಕೆ ಕೆ ಬಾಲಕೃಷ್ಣರವರು ನವರಾತ್ರಿ ಪ್ರಯುಕ್ತ ಗೊಂಬೆಗಳನ್ನು ಕೂರಿಸಿದ್ದು ಕಳಸ ಪಟ್ಟಣದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ. ಯಧುವಂಶಸ್ಥರ ಪರಂಪರೆಯ ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂಸವಾರಿ, ಅರಮನೆ, ಅರಸರ ಸಾಂಪ್ರದಾಯಿಕ ಆಚರಣೆಗಳ ವೈಭವವನ್ನು ಸಾರುತ್ತಿದ್ದರೆ, ಇನ್ನೂ ಕೆಲವು ಗೊಂಬೆಗಳು ವಿವಿಧ ದೇವತೆಗಳ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿವೆ. 

Latest Videos


ಕಳೆದ 16 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಗೊಂಬೆಗಳನ್ನು ಕೊರಿಸುತ್ತಿದ್ದ ಬಂದಿರುವ ಬಾಲಕೃಷ್ಣ ಕುಟುಂಬ ಕೇವಲ ಹೆಸರಿಗೆ ಎಷ್ಟೇ ಗೊಂಬೆಗಳನ್ನು ಕೂರಿಸದೆ, ಅದರ ಹಿನ್ನೆಲೆಯ ಇತಿಹಾಸವನ್ನು ಗೊಂಬೆ ನೋಡಲು ಬಂದವರಿಗೆ ವಿವರಿಸುತ್ತಾರೆ. ಕಳಸ ಸುತ್ತಲಿನ ವಿವಿಧ ಗ್ರಾಮಗಳಿಂದ ಜನರು ಆಗಮಿಸಿ ಗೊಂಬೆಗಳನ್ನು ವೀಕ್ಷಣೆ ಮಾಡುತ್ತಾರೆ. ಗೊಂಬೆಗಳನ್ನು ಕೂರಿಸಿಕೊಂಡು ಬರುತ್ತಿರುವ ಈ ಕುಟುಂಬ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಗುರಿಹೊಂದಿದೆ. 

ಒಟ್ಟಿನಲ್ಲಿ ಆಧುನಿಕತೆಯ ಹೆಸರಲ್ಲಿ ಹುಟ್ಟು ಹಬ್ಬ ಆಚರಣೆಯ ಭರಾಟೆಯಲ್ಲಿ ನಶಿಸುತ್ತಿರುವ ಸಂಪ್ರದಾಯವನ್ನು ಉಳಿಸುವ ಕೆಲಸವನ್ನು ಈ ಕುಟುಂಬ ಮಾಡುತ್ತಿದೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

click me!