Published : Jun 21, 2025, 07:09 AM ISTUpdated : Jun 21, 2025, 11:19 PM IST

ಬಿ2 ಬಾಂಬರ್‌ ಜೆಟ್‌ ಗುವಾಮ್‌ ದೇಶಕ್ಕೆ ಕಳಿಸಿದ ಅಮೆರಿಕ, ಇರಾನ್‌ ಮೇಲೆ ದಾಳಿಗೆ ಇನ್ನೊಂದೇ ಹೆಜ್ಜೆ!

ಸಾರಾಂಶ

11ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ಭಾರತ ಹಾಗೂ ವಿಶ್ವಾದ್ಯಂತ ನಡೆಯುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಆಯೋಜಿಸಿರುವ ಯೋಗಾ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಬರೋಬ್ಬರಿ 3 ಲಕ್ಷ ಮಂದಿ ಭಾಗಿಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಮೋದಿ, ದೇಶದ ಜನತೆಗೆ ಯೋಗಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. 175 ದೇಶಗಳು ಯೋಗದ ಮೂಲಕ ಒಂದಾಗಿದೆ. ಯೋಗದ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಇದು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

B-2 Bomber

11:19 PM (IST) Jun 21

ಬಿ2 ಬಾಂಬರ್‌ ಜೆಟ್‌ ಗುವಾಮ್‌ ದೇಶಕ್ಕೆ ಕಳಿಸಿದ ಅಮೆರಿಕ, ಇರಾನ್‌ ಮೇಲೆ ದಾಳಿಗೆ ಇನ್ನೊಂದೇ ಹೆಜ್ಜೆ!

ಬಿ-2 ಅಮೆರಿಕದ 30,000 ಪೌಂಡ್ ತೂಕದ ಜಿಬಿಯು-57 ಮ್ಯಾಸಿವ್‌ ಆರ್ಡನೆನ್ಸ್ ಪೆನೆಟ್ರೇಟರ್ ಅನ್ನು ಹೊತ್ತೊಯ್ಯಲು ಸಾಧ್ಯವಾಗುವ ಜಗತ್ತಿನ ಏಕೈಕ ಜೆಟ್‌. ಇದನ್ನು ಆಳವಾದ ಭೂಗತ ಗುರಿಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ.

 

Read Full Story

10:18 PM (IST) Jun 21

ಇರಾನ್‌ನ ಇಸ್ಫಹಾನ್ ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಿದ ಇಸ್ರೇಲ್‌!

ಒಂಬತ್ತನೇ ದಿನವೂ ಇಸ್ರೇಲ್-ಇರಾನ್ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್ ಇರಾನ್‌ನ ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತಮ್ಮ ಉತ್ತರಾಧಿಕಾರಿಯನ್ನು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

 

Read Full Story

10:00 PM (IST) Jun 21

15ರ ಬಾಲಕಿ 8 ತಿಂಗಳು ಗರ್ಭಿಣಿ - ದಲಿತ ಹುಡುಗಿಯ ಮೇಲೆ 2 ವರ್ಷ 14 ಜನರಿಂದ ಬಲಾತ್ಕಾರ!

ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಬಂದ 15 ವರ್ಷದ ಬಾಲಕಿ 8 ತಿಂಗಳು ಗರ್ಭಿಣಿ ಎಂದು ತಿಳಿದುಬಂದಿದೆ. 2 ವರ್ಷಗಳ ಕಾಲ 14 ಜನರಿಂದ ನಿರಂತರ ದೌರ್ಜನ್ಯಕ್ಕೊಳಗಾಗಿದ್ದಳು ಎಂದು ತನಿಖೆಯಿಂದ ಬಹಿರಂಗವಾಗಿದೆ.

 

Read Full Story

08:58 PM (IST) Jun 21

ಸೊಸೆ ಓಡಿಹೋಗಿದ್ದಾಳೆ ಎಂದು ಗಂಡನ ಮನೆಯವರು ಹೇಳಿದ 2 ತಿಂಗಳ ಬಳಿಕ 10 ಫೀಟ್‌ ಆಳದ ಗುಂಡಿಯಲ್ಲಿ ಪತ್ತೆಯಾದ ಮೃತದೇಹ!

ತನು ತನ್ನ ಪತಿಯೊಂದಿಗೆ ವಾಸಿಸುತ್ತಿದ್ದ ಮನೆಯ ಪಕ್ಕದಲ್ಲಿರುವ ಪಬ್ಲಿಕ್‌ ಲೈನ್‌ನಲ್ಲಿ ಹೊಸದಾಗಿ ಹಾಕಲಾದ ಕಾಂಕ್ರೀಟ್ ಅಡಿಯಲ್ಲಿ ಶವವನ್ನು ಹೂತುಹಾಕಲಾಗಿತ್ತು.

 

Read Full Story

08:43 PM (IST) Jun 21

ಸ್ಮಾರ್ಟ್‌ ಸ್ಪರ್ಧೆಗೆ ಇಳಿದ ಜಿಯೋ, ಏರ್‌ಟೆಲ್‌ - ತಿಂಗಳು, ದಿನಗಳ ಬದಲು ಗಂಟೆಗಳ ರಿಚಾರ್ಜ್‌ ಪ್ಲ್ಯಾನ್‌!

ಜಿಯೋ ಮತ್ತು ಏರ್‌ಟೆಲ್‌ 11 ರೂಪಾಯಿಗೆ ಒಂದು ಗಂಟೆಗೆ 10 ಜಿಬಿ ಡೇಟಾ ನೀಡುವ ಯೋಜನೆಗಳು ಸಮಯ ಆಧಾರಿತ ಟೆಲಿಕಾಂ ಬೆಲೆಯತ್ತ ಬದಲಾವಣೆಯನ್ನು ಸೂಚಿಸುತ್ತವೆ, ಇದು ಭಾರತದಲ್ಲಿ ಡೇಟಾ ಹಣಗಳಿಕೆಯ ಭವಿಷ್ಯವನ್ನು ಸೂಚಿಸುತ್ತದೆ.

 

Read Full Story

08:33 PM (IST) Jun 21

ಇರಾನ್-ಇಸ್ರೇಲ್‌ ಯುದ್ಧ - ಭಾರತೀಯರನ್ನು ಬಲವಂತವಾಗಿ ಕರೆಸಿಕೊಳ್ಳಲಾಗುತ್ತಿದೆಯಾ? ಏನಿದು ವಿವಾದ

ಇಸ್ರೇಲ್‌ನಲ್ಲಿ ಭಾರತೀಯರ ಬಲವಂತದ ಹಿಂದಿರುಗುವಿಕೆ ಕುರಿತ ಸಾಮಾಜಿಕ ಮಾಧ್ಯಮದ ಸುದ್ದಿಗಳು ನಕಲಿ ಎಂದು ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೋರಿದೆ.
Read Full Story

07:52 PM (IST) Jun 21

ಶೋಭಾ ಹಿಲ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಜೂನ್ 21 ರಂದು ಶೋಭಾ ಹಿಲ್ ವ್ಯೂ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹದಿಂದ ಆಚರಿಸಿದರು. ಸಮುದಾಯದ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ವಯಸ್ಸಿನವರು ಸಕ್ರಿಯವಾಗಿ ಭಾಗವಹಿಸಿ, ದೈನಂದಿನ ಜೀವನದಲ್ಲಿ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು.

Read Full Story

07:49 PM (IST) Jun 21

ಜೈನ ದೀಕ್ಷೆ ಸ್ವೀಕರಿಸಿದ ವರ್ಷಕ್ಕೆ 75 ಕೋಟಿ ಸಂಬಳ ಪಡೆಯುತ್ತಿದ್ದ ಮುಕೇಶ್‌ ಅಂಬಾನಿ ಆಪ್ತ!

ಮುಕೇಶ್‌ ಅಂಬಾನಿಯವರ ಆಪ್ತ ಸಹಾಯಕರಾಗಿದ್ದ ಅವರು ಈಗ ಐಷಾರಾಮಿ ಜೀವನವನ್ನು ತ್ಯಜಿಸಿ 'ದೀಕ್ಷೆ' ತೆಗೆದುಕೊಂಡಿದ್ದಾರೆ.

 

Read Full Story

07:39 PM (IST) Jun 21

ಯುದ್ಧದ ನಡುವೆಯೇ ಇರಾನ್ ನಲ್ಲಿ ಭೀಕರ ಭೂಕಂಪ, ಪರಮಾಣು ಪರೀಕ್ಷೆ ನಡೆಯಿತಾ?

ಇರಾನ್‌ನಲ್ಲಿ ಸಂಭವಿಸಿದ ಭೂಕಂಪ ನೈಸರ್ಗಿಕವೇ ಅಥವಾ ಪರಮಾಣು ಪರೀಕ್ಷೆಯ ಪರಿಣಾಮವೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಘಟನೆ ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
Read Full Story

07:37 PM (IST) Jun 21

ಗಂಡ ಮಕ್ಳು ಬಿಟ್ಟು ಹೋದಾಕೆ ಬೀದಿ ಹೆಣವಾದ್ಳು, ಚಾಮರಾಜನಗರ ಒಂಟಿ ಮಹಿಳೆ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್!

ಸುವರ್ಣಾವತಿ ಹೊಳೆ ದಡದಲ್ಲಿ ಪತ್ತೆಯಾದ ಸೋನಾಕ್ಷಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯ ಪ್ರಿಯಕರ ಮಾದೇಶನೇ ಹಂತಕ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮತ್ತೊಬ್ಬನ ಜೊತೆ ಸಂಪರ್ಕ ಬೆಳೆಸಿದ್ದಕ್ಕೆ ಸಿಟ್ಟಿನಿಂದ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
Read Full Story

07:10 PM (IST) Jun 21

ಸಣ್ಣ ಟೈಲರಿಂಗ್‌ ಶಾಪ್‌ ಹೊಂದಿದ್ದ ವ್ಯಕ್ತಿ ಇಂದು ಬೆಂಗಳೂರಿನ ಶ್ರೀಮಂತ ವ್ಯಕ್ತಿ, 12 ಸಾವಿರ ಕೋಟಿಗೆ ಮಾಲೀಕ!

ಬೆಂಗಳೂರಿನ ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್‌ನ ಚೇರ್ಮನ್ ಇರ್ಫಾನ್ ರಜಾಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ. ಸಣ್ಣ ಬಟ್ಟೆ ಅಂಗಡಿಯಿಂದ ಬಿಲಿಯನ್ ಡಾಲರ್ ಸಾಮ್ರಾಜ್ಯದವರೆಗಿನ ಅವರ ಪ್ರಯಾಣದ ಅದ್ಭುತ ಒಳನೋಟ.
Read Full Story

06:56 PM (IST) Jun 21

ಸಚಿವ ಕೆಎನ್‌ ರಾಜಣ್ಣ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆ ಸಾವು!

ಸಚಿವ ರಾಜಣ್ಣ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಮಹಿಳೆ ಬಸ್‌ನಲ್ಲಿ ಸಾವು. ತುಮಕೂರಿನಿಂದ ವಾಪಸ್ಸಾಗುವಾಗ ಗುಬ್ಬಿ ಬಳಿ ಸಂಭವಿಸಿದ ದುರ್ಘಟನೆ.
Read Full Story

06:36 PM (IST) Jun 21

ಐಸಿಐಸಿಐ-ಎಚ್‌ಡಿಎಫ್‌ಸಿ ವಿಲೀನದ ಗುಟ್ಟು ಬಹಿರಂಗ, ಚಂದಾ ಕೊಚ್ಚರ್ ಕಾರಣ!

ಎಚ್‌ಡಿಎಫ್‌ಸಿಯ ಮಾಜಿ ಅಧ್ಯಕ್ಷ ದೀಪಕ್ ಪರೇಖ್ ಅವರು ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರು ಎರಡು ಸಂಸ್ಥೆಗಳ ವಿಲೀನದ ಬಗ್ಗೆ ಮೊದಲು ಪ್ರಸ್ತಾಪಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ನಿಯಂತ್ರಕ ಒತ್ತಡದಿಂದಾಗಿ ವಿಲೀನ ನಡೆಯಿತು ಎಂದು ಅವರು ಹೇಳಿದ್ದಾರೆ.
Read Full Story

06:33 PM (IST) Jun 21

ಹೆಲ್ಪ್‌ಲೈನ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ; ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಎಫ್‌ಐಆರ್

ಸೌಜನ್ಯಾ ಹೆಲ್ಪ್‌ಲೈನ್ ಹೆಸರಿನಲ್ಲಿ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಬೆಳ್ತಂಗಡಿಯ ರಾಜೇಶ್ ಎಂಬುವವರಿಂದ 3.2 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

06:18 PM (IST) Jun 21

ಎಐ ಸ್ಟಾರ್ಟ್‌ಅಪ್‌ Perplexity ಖರೀದಿಗೆ ಮುಂದಾದ ಆಪಲ್‌, 1.21 ಲಕ್ಷ ಕೋಟಿಯ ಡೀಲ್‌ ಆಗುವ ಸಾಧ್ಯತೆ!

ಆಪಲ್, AI ಸ್ಟಾರ್ಟ್ಅಪ್ ಪರ್ಪ್ಲೆಕ್ಸಿಟಿಯನ್ನು ಖರೀದಿಸಲು ಯೋಜಿಸುತ್ತಿದೆ. ಈ ಒಪ್ಪಂದ ಸುಮಾರು ₹1.21 ಲಕ್ಷ ಕೋಟಿಗಳಷ್ಟು ಮೌಲ್ಯದ್ದಾಗಿದ್ದು, ಆಪಲ್‌ನ ಇತಿಹಾಸದಲ್ಲೇ ಅತಿ ದೊಡ್ಡ ಖರೀದಿಯಾಗಲಿದೆ. ಈ ಖರೀದಿ AI ಕ್ಷೇತ್ರದಲ್ಲಿ ಆಪಲ್‌ನ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ.
Read Full Story

06:12 PM (IST) Jun 21

ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡ್ತೀರಾ? ಹೋಟೆಲ್​ನಲ್ಲಿ ಕೆಲ್ಸ ಮಾಡುವ ಇವ್ರ ಮಾತೊಮ್ಮೆ ಕೇಳಿಬಿಡಿ!

ಕುಳಿತಲ್ಲೆ ಎಲ್ಲಾ ಸಿಗುವಾಗ ಅಡುಗೆ ಯಾರು ಮಾಡಿಕೊಳ್ತಾರೆ, ಹೋಟೆಲ್​ತನಕ ಯಾರು ಹೋಗ್ತಾರೆ ಎಂದೆಲ್ಲಾ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡ್ತೀರಾ? ಅದರಲ್ಲಿಯೂ ಕ್ಲೌಡ್​ ಕಿಚನ್​ನಲ್ಲಿ ಆರ್ಡರ್​ ಮಾಡ್ತೀರಾ? ಹೋಟೆಲ್​ಗಳಲ್ಲಿ ಶೆಫ್​ ಆಗಿರೋ, ಕೆಲಸ ಮಾಡ್ತಿರೋ ಈ ಯುವಕರ ಮಾತೊಮ್ಮೆ ಕೇಳಿಬಿಡಿ...

 

Read Full Story

06:02 PM (IST) Jun 21

ಹಿಂದುತ್ವದ ಶಿಕ್ಷಣ ಪಡೆದವರು ಜಗತ್ತಿಗೇ ಮಾದರಿ - ಕಲ್ಲಡ್ಕ ಪ್ರಭಾಕರ್ ಭಟ್

ಸುಲ್ಕೇರಿಯ ಶ್ರೀರಾಮ ಶಾಲೆಯ ಪ್ರವೇಶೋತ್ಸವದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಹಿಂದೂ ಧರ್ಮ, ಸಂಸ್ಕೃತಿ ಉಳಿಸುವ ಕೆಲಸ ಶಿಕ್ಷಣ ಕ್ಷೇತ್ರದಿಂದ ಸಾಧ್ಯ ಎಂದರು. ಮಕ್ಕಳ ಸಂಸ್ಕಾರಯುತ ಬೆಳವಣಿಗೆಗೆ ತಾಯಂದಿರ ಪಾತ್ರ ಮುಖ್ಯ ಎಂದು ಅವರು ಹೇಳಿದರು.
Read Full Story

05:57 PM (IST) Jun 21

K L Rahul ನನ್ನ ಅಳಿಯನಾಗಬೇಕು ಎಂದು ಮ್ಯಾನಿಫೆಸ್ಟ್‌ ಮಾಡಿದ್ದೆ - ಸುನಿಲ್ ಶೆಟ್ಟಿ

ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಅಳಿಯ, ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮುದ್ದಿನ ಅಳಿಯ ರಾಹುಲ್ ಬಗ್ಗೆ ಸುನಿಲ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Read Full Story

05:53 PM (IST) Jun 21

UPSC Pratibha Setu - ಸಂದರ್ಶನದಲ್ಲಿ ಫೇಲ್‌ ಆದ್ರೂ ಸಿಗಲಿದೆ ಕೆಲಸ, ಹೊಸ ಯೋಜನೆ ಆರಂಭಿಸಿದ UPSC

UPSC Pratibha Setu Portal: ಯುಪಿಎಸ್‌ಸಿ ಪರೀಕ್ಷೆಯ ಸಂದರ್ಶನದಲ್ಲಿ ಉತ್ತೀರ್ಣರಾಗದವರಿಗೆ 'ಪ್ರತಿಭಾ ಸೇತು' ಪೋರ್ಟಲ್ ಮೂಲಕ ಉದ್ಯೋಗಾವಕಾಶ. ಖಾಸಗಿ ಕಂಪನಿಗಳು ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ನೇಮಕ ಮಾಡಿಕೊಳ್ಳಬಹುದು.

Read Full Story

05:42 PM (IST) Jun 21

ಉದಯಗಿರಿ ಪೊಲೀಸ್ ಠಾಣೆ ಈಗ ಉತ್ತರ- ದಕ್ಷಿಣ ಠಾಣೆಯಾಗಿ ವಿಭಜನೆ!

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯನ್ನು ವಿಭಜಿಸಿ ಉದಯಗಿರಿ ಉತ್ತರ ಮತ್ತು ದಕ್ಷಿಣ ಎಂದು ಎರಡು ಠಾಣೆಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. .

Read Full Story

05:07 PM (IST) Jun 21

ಸಿಕ್ಸರ್ ಮೂಲಕ ಶತಕ ಸಿಡಿಸಿ ಹೊಸ ದಾಖಲೆ ಬರೆದ ರಿಷಭ್ ಪಂತ್!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅಮೋಘ ಶತಕ ಸಿಡಿಸಿ ಎಂ.ಎಸ್. ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಇದು ಪಂತ್ ಅವರ ಏಳನೇ ಟೆಸ್ಟ್ ಶತಕವಾಗಿದ್ದು, ಇಂಗ್ಲೆಂಡ್ ನಲ್ಲಿ ಮೂರು ಶತಕ ಸಿಡಿಸಿದ ಮೊದಲ ವಿದೇಶಿ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

05:01 PM (IST) Jun 21

ಗಂಡನ ಜೊತೆ ಪ್ರಪಾತಕ್ಕೆ ಧುಮುಕಿದ ವೈಷ್ಣವಿ ಗೌಡ; ವಿಡಿಯೋ ವೈರಲ್

ಕಿರುತೆರೆ ನಟಿ ವೈಷ್ಣವಿ ಗೌಡ ತಮ್ಮ ಪತಿ ಅನುಕೂಲ್ ಜೊತೆ 117 ಅಡಿ ಎತ್ತರದಿಂದ ಪ್ರಪಾತಕ್ಕೆ ಧುಮುಕಿ ಸಾಹಸ ಮೆರೆದಿದ್ದಾರೆ. ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Read Full Story

04:52 PM (IST) Jun 21

'ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು..' ವಿನಾಶದ ಬಗ್ಗೆ ಕುತೂಹಲದ ಭವಿಷ್ಯದ ನುಡಿದ ಕೋಡಿಮಠ ಸ್ವಾಮೀಜಿ!

ಕೋಡಿಮಠದ ಶ್ರೀಗಳು ಮುನಿಪುರದ ಬಗ್ಗೆ ಮತ್ತು ರಾಜಕೀಯ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ ನಂತರ ರಾಜಕೀಯ ವಿಪ್ಲವದ ಸೂಚನೆಗಳಿವೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ದುಃಖಗಳು ಎದುರಾಗಲಿವೆ ಎಂದು ಎಚ್ಚರಿಸಿದ್ದಾರೆ.
Read Full Story

04:37 PM (IST) Jun 21

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಜಾಗತಿಕ ಯೋಗ ಸಂದೇಶ - ಇಂದು ಸಂಜೆ ಬೊಗೋಟಾದಿಂದ ಯೋಗಾಭ್ಯಾಸಿಗಳನ್ನುದ್ದೇಶಿಸಿ ಮಾತು

ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತದಾದ್ಯಂತ ಲಕ್ಷಾಂತರ ಜನರು ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಶ್ರೀ ಶ್ರೀ ರವಿಶಂಕರ್ ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದವು. ಯೋಗದ ಮೂಲ ಉದ್ದೇಶ ದೈಹಿಕ ಭಂಗಿಗಳನ್ನು ಮೀರಿದೆ ಎಂದು ಗುರುಗಳು ಒತ್ತಿ ಹೇಳಿದರು.
Read Full Story

04:27 PM (IST) Jun 21

ಕೆಲಸದ ಅವಧಿ ತಿದ್ದುಪಡಿ , 48 ಗಂಟೆ ಬದಲಾಗದು ಸರ್ಕಾರದಿಂದ ಸ್ಪಷ್ಟನೆ

ಕರ್ನಾಟಕ ಸರ್ಕಾರವು ವಾರದ ೪೮ ಗಂಟೆಗಳ ಕೆಲಸದ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರವು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಹಾಗೂ ದೇಶೀಯ ಕಾನೂನುಗಳಿಗೆ ಅನುಗುಣವಾಗಿದೆ.
Read Full Story

04:21 PM (IST) Jun 21

ದಾಖಲೆಯ ಗರಿಷ್ಠ ಮಟ್ಟದ ಸನಿಹ ಭಾರತದ ಫಾರೆಕ್ಸ್‌, 699 ಬಿಲಿಯನ್‌ ಡಾಲರ್‌ಗೆ ಏರಿಕೆ!

ಇತ್ತೀಚಿನ ಹಣಕಾಸು ನೀತಿ ಸಭೆಯಲ್ಲಿ, ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ವಿದೇಶಿ ವಿನಿಮಯ ಮೀಸಲು ದೇಶದ 11 ತಿಂಗಳ ಆಮದು ಮತ್ತು ಬಾಹ್ಯ ಸಾಲದ ಸುಮಾರು 96 ಪ್ರತಿಶತವನ್ನು ಪೂರೈಸಲು ಸಾಕಾಗುತ್ತದೆ ಎಂದು ಹೇಳಿದರು.

 

Read Full Story

03:58 PM (IST) Jun 21

ಉಪಾಧ್ಯಕ್ಷ ಸೇರಿದಂತೆ ಮೂವರನ್ನು ಹುದ್ದೆಯಿಂದ ತೆಗೆಯುವಂತೆ ಏರ್‌ ಇಂಡಿಯಾಗೆ ಸೂಚಿಸಿದ ಡಿಜಿಸಿಎ!

ಅಹಮದಾಬಾದ್ ವಿಮಾನ ದುರಂತದ ನಂತರ, ಡಿಜಿಸಿಎ ಏರ್ ಇಂಡಿಯಾದ ಮೂವರು ಅಧಿಕಾರಿಗಳನ್ನು ವಜಾಗೊಳಿಸಿದೆ. ಸುರಕ್ಷತಾ ಶಿಷ್ಟಾಚಾರ ಉಲ್ಲಂಘನೆ ಮತ್ತು ಸಿಬ್ಬಂದಿ ವೇಳಾಪಟ್ಟಿ ನಿರ್ವಹಣೆಯಲ್ಲಿನ ಲೋಪಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ

Read Full Story

03:52 PM (IST) Jun 21

ಪಂದ್ಯದ ನಡುವೆ ಕುಸಿದ ಕರೀಷ್ಮಾ ಮಾಜಿ ಪತಿ ಸಂಜಯ್ ಕಪೂರ್ ಅಂತಿಮ ಕ್ಷಣದ ವಿಡಿಯೋ

ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಪೋಲೋ ಪಂದ್ಯದ ನಡುವೆ ಇತ್ತೀಚೆಗೆ ಮೃತಪಟ್ಟಿದ್ದರು. ಪಂದ್ಯ ಆಡುತ್ತಿದ್ದಂತೆ ಕುಸಿದು ಬಿದ್ದ ಸಂಜಯ್ ಕಪೂರ್ ಅಂತಿಮ ಕ್ಷಣದ ವಿಡಿಯೋ ಬಹಿರಂಗವಾಗಿದೆ.

Read Full Story

03:02 PM (IST) Jun 21

ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅಪರೂಪದ ದಾಖಲೆ ಧೂಳೀಪಟ ಮಾಡಿದ ರಿಷಭ್ ಪಂತ್!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ. ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Read Full Story

03:00 PM (IST) Jun 21

Yoga Day - ಬಿಜೆಪಿ ಕಚೇರಿಯಲ್ಲಿ ಯೋಗ ದಿನ - ವಿಜಯೇಂದ್ರ ಜೊತೆ ಭಾಗಿಯಾದ ಮಾಳವಿಕಾ, ಸುಧಾರಾಣಿ!

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಲಾದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Read Full Story

02:06 PM (IST) Jun 21

ಏರ್ ಇಂಡಿಯಾ ದುರಂತ ಬೆನ್ನಲ್ಲೇ ಬೋಯಿಂಗ್‌ನ ಮತ್ತೊಂದು ವಿಮಾನ ಅಪಘಾತ

ಏರ್ ಇಂಡಿಯಾ ವಿಮಾನ ದುರಂತದ ಸಾವು ನೋವು ಇನ್ನು ಕಣ್ಣಮುಂದಿದೆ. ಇದರ ಬೆನ್ನಲ್ಲೇ ಬೊಯಿಂಗ್ ಸಂಸ್ಥೆಯ ಮತ್ತೊದು ವಿಮಾನ ಅಪಘಾತಕ್ಕೀಡಾಗಿದೆ. ಇದರೊಂದಿಗೆ ಬೋಯಿಂಗ್ ವಿಮಾನ ಸುರಕ್ಷತೆ ಮೇಲೆ ಅನುಮಾನ ಮತ್ತಷ್ಟು ಹೆಚ್ಚಾಗಿದೆ.

Read Full Story

01:19 PM (IST) Jun 21

ಚಿನ್ನಕ್ಕೂ ತಟ್ಟಿದಾ ಇರಾನ್ ಯುದ್ಧ? ಯೋಗ ದಿನಾಚರಣೆಯಂದೇ ಏರಿಕೆ ಕಂಡ ಬಂಗಾರ

ಇಸ್ರೇಲ್ ಇರಾನ್ ಯುದ್ಧ ತೀವ್ರಗೊಳ್ಳುತ್ತಿದೆ. ಇರಾನ್ ನ್ಯೂಕ್ಲಿಯರ್ ಕುರಿತು ಮಾತುಕತೆಗೆ ನಿರಾಕರಿಸಿದ ಬೆನ್ನಲ್ಲೇ ಇತ್ತ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.ಅಂತಾರಾಷ್ಟ್ರೀಯ ಯೋಗದಿನಾಚರಣೆಯಂದೇ ಚಿನ್ನದ ಬೆಲೆ ಏರಿಕೆ ಕಂಡಿದೆ.

 

Read Full Story

01:12 PM (IST) Jun 21

ಎರಡೆರಡು ಸಲ ರನೌಟ್‌ಗೆ ಯತ್ನ! ಗಲ್ಲಿ ಕ್ರಿಕೆಟ್‌ನಂತಾದ ಮಹಾರಾಷ್ಟ್ರ ಪ್ರೀಮಿಯರ್ ಲೀಗ್! ವಿಡಿಯೋ ವೈರಲ್

ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ರಾಯಘಡ ರಾಯಲ್ಸ್ ಮತ್ತು ಕೊಲ್ಲಾಪುರ ಟಸ್ಕರ್ಸ್ ನಡುವಿನ ಪಂದ್ಯದಲ್ಲಿ ನಡೆದ ವಿಚಿತ್ರ ರನೌಟ್ ಘಟನೆ ಗಲ್ಲಿ ಕ್ರಿಕೆಟ್‌ನ್ನು ನೆನಪಿಸಿತು. ಎರಡು ಬಾರಿ ರನೌಟ್ ಅವಕಾಶವನ್ನು ಕೈಚೆಲ್ಲಿದ ಫೀಲ್ಡಿಂಗ್ ತಂಡ, ಚೆಂಡನ್ನು ಓವರ್‌ಥ್ರೋ ಮಾಡಿ ಬೌಂಡರಿ ನೀಡಿತು.  

Read Full Story

01:11 PM (IST) Jun 21

ಹೋರಾಟದ ಹಾದಿ ಹಿಡಿದ ಬೆಂಗಳೂರು ಮದ್ಯ ವ್ಯಾಪಾರಿಗಳ ಸಂಘ, ಅಳಿವು ಉಳಿವಿನ ಹೋರಾಟ

ರಾಜ್ಯದ ಚಿಲ್ಲರೆ ಮದ್ಯ ವ್ಯಾಪಾರಿಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಲಾಭಾಂಶ ಹೆಚ್ಚಳ, ತೆರಿಗೆ ರದ್ದತಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅಬಕಾರಿ ಡಿಸಿ ನಾಗಶಯನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿದ್ದಾರೆ.
Read Full Story

12:30 PM (IST) Jun 21

ತಮಿಳುನಾಡಿನಲ್ಲಿ ದೇವರ ಮೀನು! ಪ್ರಕೃತಿ ವಿಕೋಪಕ್ಕೆ ಮುನ್ನುಡಿ? ಭಾರಿ ಸಾವುನೋವಿನ ಸೂಚನೆ?

ಇದಾಗಲೇ ಹಲವಾರು ಪ್ರಕೃತಿ ವಿಕೋಪಗಳು, ಸಾವು ನೋವುಗಳ ನಡುವೆಯೇ ಇದೀಗ ತಮಿಳುನಾಡಿನಲ್ಲಿ ದೇವರ ಮೀನು ಸಿಕ್ಕಿದ್ದು, ಇದು ಭಾರಿ ಆತಂಕಕ್ಕೆ ಕಾರಣವಾಗಿದೆ!

 

Read Full Story

12:02 PM (IST) Jun 21

3BHK ಯಲ್ಲಿ ಮಿಂಚೋಕೆ ರೆಡಿಯಾಗ್ತಿದ್ದಾರೆ ಚೈತ್ರಾ ಆಚಾರ್… ಜೋರಾಗಿ ನಡೀತಿದೆ ಪ್ರಚಾರ

ಚಂದನವನ ಚೆಲುವೆ ಚೈತ್ರಾ ಆಚಾರ ತಮ್ಮ ಮೊದಲ ತಮಿಳು ಸಿನಿಮಾ 3BHK ಯಲ್ಲಿ ಮಿಂಚೋದಕ್ಕೆ ರೆಡಿಯಾಗ್ತಿದ್ದಾರೆ. ಈ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಲಿದೆ.

Read Full Story

12:01 PM (IST) Jun 21

ಮೇಡೇ..ಮೇಡೇ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ

ಏರ್ ಇಂಡಿಯಾ ವಿಮಾನ ದುರಂತ ಬಳಿಕ ವಿಮಾನದಲ್ಲಿನ ತಾಂತ್ರಿಕ ದೋಷಗಳು ಹೆಚ್ಚಾಗಿ ವರದಿಯಾಗುತ್ತಿದೆ. ಇದೀಗ ಇಂಡಿಗೋ ವಿಮಾನ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಎದುರಿಸಿದೆ. ಪೈಲೆಟ್ ಮೇಡೇ, ಮೇಡೇ ಸಂದೇಶ ರವಾನಿಸಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ.

Read Full Story

11:46 AM (IST) Jun 21

34 ವರ್ಷ ಜೈಲಲ್ಲಿ ಇದ್ದ ಬಳಿಕ 'ನಿರಪರಾಧಿ' ಎಂದ ಕೋರ್ಟ್​! 104ರ ವೃದ್ಧನ ನೋವಿನ ಕಥೆ ಕೇಳಿ...

ನ್ಯಾಯದಾನ ವಿಳಂಬವಾದರೆ ಅದು ನ್ಯಾಯಕ್ಕೇ ಮಾಡುವ ಅನ್ಯಾಯ ಎನ್ನುವ ಮಾತಿದ್ದರೂ ನ್ಯಾಯಕ್ಕಾಗಿ ಕಾದುಕುಳಿತಿರುವ ಜೀವವಳು ಅದೆಷ್ಟೋ. ಅಂಥದ್ದೇ ಒಂದು ಕಣ್ಣೀರಿನ ಕಥೆ 104ವರ್ಷ ವಯಸ್ಸಿನ ಈ ವೃದ್ಧನದ್ದು!

 

Read Full Story

11:29 AM (IST) Jun 21

ಎರಡು ವರ್ಷಗಳ ಬಳಿಕ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ನೀರಜ್ ಚೋಪ್ರಾ!

ಪ್ಯಾರಿಸ್: ಎರಡು ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಬದ್ದ ಎದುರಾಳಿ ಜೂಲಿಯನ್ ವೇಬರ್ ಮಣಿಸಿ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

11:29 AM (IST) Jun 21

ಮಹಿಳಾ ಒಳ ಉಡುಪು ಹಾಕಿಲ್ಲ ಅಂದ್ರೆ ಪರೀಕ್ಷೆ ಬರೆಯೋ ಹಾಗಿಲ್ಲ; ಕಾಲೇಜಿನಲ್ಲಿ ಎಂಥ ರೂಲ್ಸ್?

ನೈಜೀರಿಯಾದ ಒಂದು ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಬರೆಯಲು ಬ್ರಾ ಧರಿಸುವುದು ಕಡ್ಡಾಯ ಎಂಬ ವಿಚಿತ್ರ ನಿಯಮ ಜಾರಿಯಾಗಿದೆ. ಈ ನಿಯಮದ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
Read Full Story

More Trending News