Sep 1, 2018, 8:30 PM IST
ಬೆಂಗಳೂರು(ಸೆ.1): ಮೈಸೂರು ದಸರಾ ಹತ್ತಿರ ಬರ್ತಿದ್ದು ತಯಾರಿಯೂ ಜೋರಾಗಿದೆ. ಮಡಿಕೇರಿಯಿಂದ 3 ಆನೆಗಳು ಮೈಸೂರು ಕಡೆ ಹೊರಡಲಿದ್ದು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮಡಿಕೇರಿಯ ಆನೆಕಾಡು ಶಿಬಿರದಿಂದ ಗೋಪಿ, ವಿಕ್ರಮ್ ಮತ್ತು ಧನಂಜಯ ಹೆಸರಿನ ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ತೆರಳಲಿವೆ.
ಎರಡನೇ ತಂಡದಲ್ಲಿ ಕಾವೇರಿ, ವಿಜಯ ಆನೆಗಳನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿದೆ. ಧನಂಜಯ ಎಂಬ ಆನೆ ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು ಪೂಜೆ ಸಲ್ಲಿಸಿ ಮೈಸೂರಿಗೆ ಕಳುಹಿಸಿಕೊಡಲಾಗ್ತಿದೆ. ಅತ್ತ ಮೈಸೂರಿನಲ್ಲಿ ಗಜಪಡೆ ಆಗಮನ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಸ್ವಾಗತ ಮಾಡಲು ಸಿದ್ಧತೆ ಜೋರಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..