LIVE NOW
Published : Apr 18, 2026, 07:45 AM ISTUpdated : Apr 18, 2026, 11:31 PM IST

Karnataka News Live: ರಸ್ತೆ ದುರಂತದಲ್ಲಿ ಮೃತ ಏಕೈಕ ಪುತ್ರನ ಕಣ್ಣು, ಕಿಡ್ನಿ ದಾನ ಮಾಡಿದ ಕೊಡಗಿನ ಪೋಷಕರು

ಸಾರಾಂಶ

ಬೆಂಗಳೂರು (ಏ.18): ಬೆಂಗಳೂರು ವಿದ್ಯುತ್ ಸರಬರಾಜುನಿಗಮ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಗಳಿಗೆ (ಸೆಸ್ಟ್-ಮೈಸೂರು) 2024-25ನೇ ಸಾಲಿನಲ್ಲಿ ಉಂಟಾಗಿರುವ ಆದಾಯ ಕೊರತೆ ತುಂಬಿಕೊಳ್ಳಲು 2026-27ನೇ ಸಾಲಿನಲ್ಲಿ ಬೆಸ್ಕಾಂ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಸೆಸ್ಕ್ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 15 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:31 PM (IST) Apr 18

ರಸ್ತೆ ದುರಂತದಲ್ಲಿ ಮೃತ ಏಕೈಕ ಪುತ್ರನ ಕಣ್ಣು, ಕಿಡ್ನಿ ದಾನ ಮಾಡಿದ ಕೊಡಗಿನ ಪೋಷಕರು

ಸೋಮವಾರಪೇಟೆ ತಾಲೂಕಿನ ಬಾಲಕ ಹನ್ವಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಪುತ್ರನ ಮೆದುಳು ನಿಷ್ಕ್ರಿಯಗೊಂಡ ದುಃಖದ ನಡುವೆಯೂ, ಆತನ ಪೋಷಕರು ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡಿ ಇತರರ ಬಾಳಿಗೆ ಬೆಳಕಾಗಿದ್ದಾರೆ.
Read Full Story

11:12 PM (IST) Apr 18

Dharwad - ಶೀಘ್ರದಲ್ಲಿಯೇ ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಬೆಂಗಳೂರಿಗೆ ಸ್ಥಳಾಂತರ?

ಪ್ರಸಾರ ಭಾರತಿಯು ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರದ ಸುದ್ದಿ ಪ್ರಸಾರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. 1981ರಲ್ಲಿ ಆರಂಭವಾದ ಈ ಕೇಂದ್ರದ ಸ್ಥಳಾಂತರಕ್ಕೆ ಉತ್ತರ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಲಾಗುತ್ತಿದೆ.
Read Full Story

10:46 PM (IST) Apr 18

ಹಸು/ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತರಿಗೆ ಆರ್ಥಿಕ ಭದ್ರತೆ ನೀಡುವ ಯೋಜನೆಗೆ ಚಾಲನೆ

ಹಾವೇರಿಯಲ್ಲಿ ಹೈನುಗಾರರ ಹಿತದೃಷ್ಟಿಯಿಂದ ‘ರಾಸು ವಿಮೆ’ ಯೋಜನೆಗೆ ಚಾಲನೆ ನೀಡಲಾಗಿದೆ. ಹಸು ಅಥವಾ ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತರಿಗೆ ಆರ್ಥಿಕ ಭದ್ರತೆ ನೀಡಿ, ಹೈನುಗಾರಿಕೆಯನ್ನು ಮುಂದುವರಿಸಲು ಈ ಯೋಜನೆ ಸಹಕಾರಿಯಾಗಿದೆ.
Read Full Story

09:09 PM (IST) Apr 18

ಏಷ್ಯಾದಲ್ಲೇ ಬೆಂಗಳೂರಿಗೆ ಟಾಪ್ ಸ್ಥಾನ! ಸಿಲಿಕಾನ್ ಸಿಟಿ ನಂತ್ರದ ಸ್ಥಾನದಲ್ಲಿ ಮುಂಬೈ, ಚೆನ್ನೈ

ಮುಂಬೈನಲ್ಲಿ ದಾಖಲೆಯ 56 ಲಕ್ಷ ಚದರ ಅಡಿ ಕಚೇರಿ ಸ್ಥಳ ಗುತ್ತಿಗೆಗೆ ನೀಡಲಾಗಿದ್ದು, ಬಾಡಿಗೆಯಲ್ಲಿ 7.5% ಬೆಳವಣಿಗೆ ಕಂಡಿದೆ. 16.2% ಸ್ಥಳಗಳು ಖಾಲಿ ಇರುವುದರಿಂದ, ಸದ್ಯದ ವಾರ್ಷಿಕ ಪ್ರತಿ ಚದರ ಅಡಿಗೆ ರೂ. 4,025 ಇರುವ ಬಾಡಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
Read Full Story

08:26 PM (IST) Apr 18

ಭೂ ದಾಖಲೆ ಸ್ಕ್ಯಾನಿಂಗ್ ವಿಳಂಬ - ತಹಸೀಲ್ದಾರ್‌ಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ

ಭೂ ಸುರಕ್ಷಾ, ಪೌತಿ ಖಾತೆ, ಪೋಡಿ ದುರಸ್ತಿ, ಕಂದಾಯ ಗ್ರಾಮ ಅಭಿಯಾನ ಸೇರಿ ಮತ್ತಿತರ ಕಾರ್ಯಗಳಲ್ಲಿ ವಿಳಂಬ ಧೋರಣೆ ತೋರಿದ ತಹಸೀಲ್ದಾರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ.

Read Full Story

07:40 PM (IST) Apr 18

ದಾವಣಗೆರೆ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ನಾಯಕ ಸೈಯದ್ ಸೈಫುಲ್ಲಾ ಸಾಬ್ ನಿಧನ

ದಾವಣಗೆರೆಯ ಹಿರಿಯ ಕಾಂಗ್ರೆಸ್ ನಾಯಕ, ಶಿಕ್ಷಣ ತಜ್ಞ ಹಾಗೂ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರಾದ ಸೈಯದ್ ಸೈಫುಲ್ಲಾ ಸಾಬ್ (79) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

Read Full Story

06:56 PM (IST) Apr 18

ಅಂದು ದೇವೇಂದ್ರ ಮಹಾಲಕ್ಷ್ಮೀಗೋಸ್ಕರ ಹೇಳಿದ್ದ ಈ ಮಂತ್ರ ಹೇಳಿ; ಕೋಟ್ಯಧಿಪತಿ ಆಗ್ತೀರಾ! ಯಾವಾಗ? ಹೇಗೆ?

Mantra Chant ಬಡತನವನ್ನು ದೂರ ಮಾಡಿ ಕೋಟ್ಯಾಧಿಪತಿ ಯೋಗ ಪಡೆಯಲು, ಮಹಾಲಕ್ಷ್ಮಿ, ಶುಕ್ರ ಮತ್ತು ಕುಬೇರರ ಶಕ್ತಿಶಾಲಿ ಮಂತ್ರಗಳನ್ನು ಪಠಿಸುವುದು ಬಹಳ ಮುಖ್ಯ. ಈ ಮಂತ್ರಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಂಬಿಕೆಯಿಂದ ಜಪಿಸಿದರೆ, ಹಣಕಾಸಿನ ಅಡೆತಡೆಗಳು ನಿವಾರಣೆಯಾಗಿ, ಸಂಪತ್ತು ವೃದ್ಧಿಯಾಗುತ್ತದೆ.

 

Read Full Story

06:42 PM (IST) Apr 18

ಮಹಿಳೆಯರ ಮೇಲೆ ಕಾಳಜಿ ಇದ್ದರೆ ಮಹಿಳಾ ಮೀಸಲಾತಿ ಜಾರಿ ಮಾಡಿ - ಸೌಮ್ಯ ರೆಡ್ಡಿ ಆಗ್ರಹ

ಮಹಿಳೆಯರ ಮೇಲೆ ನಿಮಗೆ ಕಾಳಜಿ ಇದ್ದರೆ 543 ಲೋಕಸಭೆ ಸ್ಥಾನಗಳಿಗೆ ಕೂಡಲೇ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿ ಮಾಡಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗ್ರಹ ಮಾಡಿದ್ದಾರೆ.

Read Full Story

06:25 PM (IST) Apr 18

ಪಶ್ಚಿಮ ಘಟ್ಟಗಳು ಭವಿಷ್ಯದ ಪೀಳಿಗೆಯ ಜೀವನಾಡಿ - ಸಚಿವ ಈಶ್ವರ್ ಖಂಡ್ರೆ

ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು. ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

Read Full Story

06:11 PM (IST) Apr 18

ಕಾನೂನು ಸುವ್ಯವಸ್ಥೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲು - ಗೃಹ ಸಚಿವ ಪರಮೇಶ್ವರ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪೊಲೀಸ್ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Read Full Story

06:03 PM (IST) Apr 18

ಮನೇಲಿ ತರಕಾರಿ ಇಲ್ಲದಿರುವಾಗ ಮಾಡಿ ಘಮ ಘಮಿಸುವ ರುಚಿಯಾದ ಜೀರೋ ವೆಜಿಟೇಬಲ್ ಬಿರಿಯಾನಿ

ಮನೇಲಿ ಯಾವುದೇ ತರಕಾರಿ ಇಲ್ಲದಿದ್ದಾಗಲೂ ಹೋಟೆಲ್ ಸ್ಟೈಲ್‌ನ ಘಮಘಮಿಸುವ ವೆಜಿಟೆಬಲ್ ಬಿರಿಯಾನಿ ಮಾಡಬಹುದು ಗೊತ್ತಾ? ಬ್ಯಾಚುಲರ್‌ಗಳಿಗೆ ಇದು ಬೆಸ್ಟ್ ಚಾಯ್ಸ್. ಸಮಯ ಇಲ್ಲದಿದ್ದಾಗ ಬೇಗನೆ ಅಡುಗೆ ಮುಗಿಸಬೇಕು ಅನ್ನೋರಿಗೆ ಇದು ಪರ್ಫೆಕ್ಟ್ ಆಯ್ಕೆ. ಇದನ್ನು ಮಾಡೋದು ಹೇಗೆ ಅಂತ ಇಲ್ಲಿ ನೋಡೋಣ ಬನ್ನಿ.
Read Full Story

05:58 PM (IST) Apr 18

ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮತ್ತೆ ನೇಪಥ್ಯಕ್ಕೆ, ಕನಸು ಹಳಿ ತಪ್ಪಿತೇ?

ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ನೇಪಥ್ಯಕ್ಕೆ ಸರಿಯುವ ಆತಂಕ ಎದುರಾಗಿದೆ. ಕೇಂದ್ರ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಹಾಗೂ ಜನಬೆಂಬಲದ ಕೊರತೆಯ ನಡುವೆಯೂ, ಹೋರಾಟ ಸಮಿತಿಯು ಕಾಮಗಾರಿ ಪೂರ್ಣಗೊಳ್ಳುವವರೆಗೂ ನಿರಂತರ ಹೋರಾಟ ನಡೆಸಲು ಸಜ್ಜಾಗಿದೆ.
Read Full Story

05:49 PM (IST) Apr 18

ವರ್ಷಗಟ್ಟಲೇ ಉಪ್ಪಿನಕಾಯಿ ಫ್ರಿಡ್ಜ್‌ನಲ್ಲಿಟ್ರೆ ಏನಾಗುತ್ತೆ? ಈ ಹಿಂದೆ ಅಜ್ಜಿಯಂದಿರು ಏನು ಮಾಡ್ತಿದ್ರು?

ಅಮ್ಮ ಮತ್ತು ಉಪ್ಪಿನಕಾಯಿ ಎಂದಿಗೂ ಬೋರ್ ಹೊಡೆಯಲ್ಲ. ಆದರೆ ನಾವೇ ಅದರ ಅಸಲಿ ಸ್ವಾದವನ್ನು ಹಾಳು ಮಾಡುತ್ತಿದ್ದೇವೆ. ಉಪ್ಪಿನಕಾಯಿ ತಯಾರಿಸುವ ಹಳೆಯ ಸಂಪ್ರದಾಯಗಳನ್ನು ಬದಿಗಿಟ್ಟು, ಫ್ರಿಡ್ಜ್‌ನಲ್ಲಿ ಇಟ್ಟು ಅದರ ರುಚಿಯನ್ನು ನಾಶ ಮಾಡುತ್ತಿದ್ದೇವೆ.

Read Full Story

05:43 PM (IST) Apr 18

ಪರವಾನಗಿ ಭೂಮಾಪಕರ ಮುಷ್ಕರದಿಂದ ಸಾರ್ವಜನಿಕರಿಗೆ ಸಂಕಷ್ಟ, ಭೂ ವ್ಯವಹಾರಕ್ಕೆ ಬಿದ್ದ ಬೀಗ! ಏನಿದು ಬಿಕ್ಕಟ್ಟು?

 ಪರವಾನಗಿ ಭೂಮಾಪಕರು ಖಾಯಮಾತಿಗಾಗಿ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಭೂಮಾಪನ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ತಾಲೂಕಿನಲ್ಲಿ 710ಕ್ಕೂ ಹೆಚ್ಚು ಅರ್ಜಿಗಳು ಬಾಕಿಯಾಗಿದ್ದು, ಜಮೀನು ನೋಂದಣಿ, ಖರೀದಿ-ಮಾರಾಟದಂತಹ ಪ್ರಮುಖ ವ್ಯವಹಾರಗಳು ನಿಂತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Read Full Story

05:35 PM (IST) Apr 18

46 ಮನೆ ಮಾಲೀಕ ಜೊತೆ ಜೊತೆಯಲಿ ಧಾರಾವಾಹಿ ನಟ ಶಿವಾಜಿ ಜಾಧವ್;‌ ಮೈಸೂರು ಅರಮನೆಯ ಪೀಠೋಪಕರಣವೂ ಇದೆ!

Actor Shivaji Jadhav: ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ ಶಿವಾಜಿರಾವ್ ಜಾಧವ್ ಅವರು ಸುಮಾರು 45 ಮನೆಗಳ ಮಾಲೀಕರು. ಒಟ್ಟಾರೆಯಾಗಿ 4 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರಂತೆ. ಈ ಬಗ್ಗೆ ಅವರು ಕಲಾ ಮಾಧ್ಯಮ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

 

Read Full Story

05:35 PM (IST) Apr 18

ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ

KSRTC Pallakki AC Bus Mangaluru To Mantralaya ಭಕ್ತರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು-ಮಂತ್ರಾಲಯ ಮಾರ್ಗದ ನಡುವೆ ನೂತನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಕಾರ್ಯಾಚರಣೆ ಆರಂಭವಾಗಿದೆ.

Read Full Story

05:20 PM (IST) Apr 18

ಪತಿ ಶವಕ್ಕಾಗಿ ಮಹಿಳೆಯರ ಕಿತ್ತಾಟ; ಅನಾಥವಾಯ್ತು ಇಬ್ಬರು ಹೆಂಡ್ತಿಯರ ಮುದ್ದಿನ ಗಂಡನ ಹೆಣ

ಶಿವಮೊಗ್ಗದಲ್ಲಿ, ಹನುಮಂತಪ್ಪ ಎಂಬವರ ಮರಣದ ನಂತರ ಅವರ ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಗಲಾಟೆ ನಡೆದಿದೆ. ಈ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕೊನೆಗೆ ಪೊಲೀಸರು ಮತ್ತು ಗ್ರಾಮಸ್ಥರ ಸಂಧಾನದ ಮೂಲಕ ಅಂತ್ಯಸಂಸ್ಕಾರವನ್ನು ಮೃತರ ಹುಟ್ಟೂರಿನಲ್ಲಿ ನಡೆಸಲು ಒಪ್ಪಿಗೆಯಾಯಿತು.
Read Full Story

05:20 PM (IST) Apr 18

ಕೇರಳ ಬಾಲಕಿ ಆತ್ಮ*ಹತ್ಯೆ ಹಿನ್ನೆಲೆ - ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್, ಕಠಿಣ ಪೊಲೀಸ್ ಬಂದೋಬಸ್ತ್!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇರಳ ಮೂಲದ ಬಾಲಕಿಯ ಅಸಹಜ ಸಾವಿನ ಘಟನೆ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯಲ್ಲಿ ವಿಶೇಷವಾಗಿ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Read Full Story

05:18 PM (IST) Apr 18

ವಿಶ್ವಮಾನವ ಎಕ್ಸ್ ಪ್ರೆಸ್ ಗೆ ಎಲ್ಎಚ್ ಬಿ ಬೋಗಿಗಳ ಅಳವಡಿಕೆ, ಪ್ರಯಾಣಿಕರ ಹೊಸ ಪಯಣದ ರಹಸ್ಯ!

ಮೈಸೂರು-ಬೆಳಗಾವಿ ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಹಳೆಯ ಐಸಿಎಫ್ ಬೋಗಿಗಳನ್ನು ಆಧುನಿಕ, ಹೆಚ್ಚು ಸುರಕ್ಷಿತವಾದ ಎಲ್ಎಚ್‌ಬಿ ಬೋಗಿಗಳಾಗಿ ಬದಲಾಯಿಸಲಾಗುತ್ತಿದೆ. ಏಪ್ರಿಲ್ 26 ರಿಂದ ಜಾರಿಗೆ ಬರುವ ಈ ಹೊಸ ವ್ಯವಸ್ಥೆಯು 20 ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಧಾರಿತ ಪ್ರಯಾಣದ ಅನುಭವವನ್ನು ನೀಡಲಿದೆ.
Read Full Story

04:51 PM (IST) Apr 18

ಬೆಂಗಳೂರು - ಲಿವಿಂಗ್ ಇನ್‌ ಟುಗೆದರ್‌, ಮೋಜಿನ ಜೀವನ, ಬೀಗ ಹಾಕಿದ ಮನೆಯೇ ಟಾರ್ಗೆಟ್‌ ಮಂಡ್ಯ ರ್‍ಯಾಪಿಡೋ ಚಾಲಕನ ಕಳ್ಳತನ!

ಬೆಂಗಳೂರಿನಲ್ಲಿ ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ರ್‍ಯಾಪಿಡೋ ಚಾಲಕ ನಾಗರಾಜ್‌ನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಪ್ರೇಯಸಿಯೊಂದಿಗಿನ ಮೋಜಿನ ಜೀವನಕ್ಕಾಗಿ ಈ ಕೃತ್ಯ ಎಸಗುತ್ತಿದ್ದು, ಆತನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

04:41 PM (IST) Apr 18

ಚಂದನ್ ಶೆಟ್ಟಿ ಜೀವನದಲ್ಲಿ ಬ್ಯೂಟಿಫುಲ್ ಬಿರುಗಾಳಿ, 'ಬಿಗ್ ಬಾಸ್' ವಿನ್ನರ್‌ಗೆ ಸಿಕ್ಕೇ ಬಿಟ್ರು ಹೊಸ ಜೊತೆಗಾತಿ!

ಚಂದನ್ ಶೆಟ್ಟಿ ಇಷ್ಟು ದಿನ ಕನ್ನಡದಲ್ಲಿ ಸೂಪರ್ ಹಿಟ್​ರಾಪ್ ಹಾಡುಗಳನ್ನ ಕೊಟ್ಟಿದ್ದಾರೆ. ಚಂದನ್ ಬತ್ತಳಿಕೆಯಲ್ಲಿ ಬಂದ ಒಂದೊಂದು ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ. ಈಗ ಚಂದನ್ ಕನಸು ಮತ್ತಷ್ಟು ದೊಡ್ಡದಾಗಿದ್ದು, ಇಂಗ್ಲೀಷ್​​ನಲ್ಲಿ ರಾಪ್​ ಹಾಡೊಂದನ್ನ ರೆಡಿ ಮಾಡಿದ್ದಾರೆ. ಆ ಸಾಂಗ್​​ ‘ಡಯಾನಾ-ಮೈಟ್’

Read Full Story

04:32 PM (IST) Apr 18

ಅವಳು ನೆಟ್ಟಗಿಲ್ಲ, ನಂಗೂ ನೆಟ್ಟಗಿರೋಕೆ ಬಿಡ್ಲಿಲ್ಲ; ಲವ್ವರ್‌ ತಲೆ ಎತ್ತಿ ತಿರುಗದಂತೆ ಮಾಡಿದ - Sonu Srinivas Gowda

ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಶನ್‌ ಆಪ್ಶನ್‌ ಕೊಟ್ಟು ಅಲ್ಲಿಯೂ ಕೂಡ ಗಳಿಕೆ ಮಾಡುತ್ತಿರುವ ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪರ್ಧಿ Sonu Srinivas Gowda ಅವರು ಬಾಯ್‌ಫ್ರೆಂಡ್‌ ಮರಣದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ನಂಗೆ ಆಗಿದ್ದು ಒಂದು ಲವ್‌ ಅಲ್ಲ, ಎರಡು ಲವ್‌ ಎಂದು ಅವರು ಹೇಳಿದ್ದಾರೆ. 

 

Read Full Story

04:30 PM (IST) Apr 18

Shivamogga - ನಾನ್‌ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ

ಶಿವಮೊಗ್ಗ ಜಿಲ್ಲೆಯ ಚೆನ್ನಹಳ್ಳಿ ಗ್ರಾಮದಲ್ಲಿ, ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 21 ವರ್ಷದ ಸಚಿನ್ ಎಂಬ ಯುವಕ ಮೃತಪಟ್ಟಿದ್ದಾನೆ. ನಾನ್‌ವೆಜ್ ತಿನ್ನುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

04:22 PM (IST) Apr 18

ಲಾಸ್ ವೇಗಾಸ್‌ನಲ್ಲಿ ಯಶ್‌ ಅಬ್ಬರ - ‘ಟಾಕ್ಸಿಕ್’ಗೆ ಸ್ಟ್ಯಾಂಡಿಂಗ್ ಓವೇಶನ್ ಮಾತು

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಅಂದರೆ 1961ರವರೆಗೂ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಇತ್ತು. ಆ ಕಾಲಘಟ್ಟದ ಕಥೆ ಸಿನಿಮಾದ್ದು ಎಂಬ ಅಂಶ ರಿವೀಲ್‌ ಆಗಿದೆ. ಗೋವಾದಲ್ಲಿ ನಡೆಯುವ ಭೂಗತ ಚಟುವಟಿಕೆಗಳು..

Read Full Story

04:07 PM (IST) Apr 18

ಬಿಸಿಲಿಗೆ ಇಬ್ಬರು ಭಕ್ತರ ಸಾವು ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಅಂಜನಾದ್ರಿ ಬೆಟ್ಟಕ್ಕೆ ಪ್ರವೇಶಕ್ಕಿಲ್ಲ ಅವಕಾಶ!

ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚುತ್ತಿರುವ ಉರಿಬಿಸಿಲಿನಿಂದಾಗಿ ಜಿಲ್ಲಾಡಳಿತವು ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದೆ. ಇತ್ತೀಚೆಗೆ ಇಬ್ಬರು ಭಕ್ತರು ಬಿಸಿಲಿನ ತಾಪದಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಆರೋಗ್ಯದ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Read Full Story

03:54 PM (IST) Apr 18

Photos - ಬೇರೆ ಧರ್ಮದಲ್ಲಿ ಹುಟ್ಟಿದರೂ, ಮದುವೆ ಬಳಿಕ ಪತಿಯ ಧರ್ಮವನ್ನು ಪಾಲಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿಯರು

Actress List Who Are Following Husband Religion: ಕೆಲ ನಟಿಯರು ಬೇರೆ ಧರ್ಮದಲ್ಲಿ ಹುಟ್ಟಿದರೂ ಕೂಡ ಮದುವೆಯಾದ ಬಳಿಕ ಪತಿಯ ಧರ್ಮವನ್ನು, ಅಲ್ಲಿನ ಸಂಪ್ರದಾಯಗಳನ್ನು ತಪ್ಪದೆ ಪಾಲಿಸುತ್ತಿದ್ದಾರೆ. ಹಾಗಾದರೆ ಯಾರು ಅವರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

03:11 PM (IST) Apr 18

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಫ್ರಿಕಾದ 4 ಚೀತಾಗಳ ಆಗಮನ, 30 ದಿನ ಸೂಕ್ಷ್ಮ ನಿಗಾ

ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. ಈ ವನ್ಯಜೀವಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು 30 ದಿನಗಳ ಕಾಲ ವಿಶೇಷ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ.
Read Full Story

03:03 PM (IST) Apr 18

ಜನ್ಮಕೊಟ್ಟ ತಂದೆ-ತಾಯಿಗೆ ಸುಳ್ಳು ಹೇಳಿ IT Job ಬಿಟ್ರು, ಸಿನಿಮಾದಲ್ಲಿ ‌100 ಕೋಟಿ ರೂ ಗಳಿಸಿದ್ರು; ಆ ನಟ ಯಾರು?

Actor Pradeep Ranganathan: ಮಕ್ಕಳಿಗೆ ಉದ್ಯೋಗ ಇಲ್ಲ ಅಂದರೆ ಕುಟುಂಬಸ್ಥರು ದಂಗಾಗುತ್ತಾರೆ. ಆದರೆ ಇಲ್ಲೋರ್ವ ನಟ ಐಟಿ ಜಾಬ್‌ ಬಿಟ್ಟರೂ ಕೂಡ, ನೈಟ್‌ ಶಿಫ್ಟ್‌, WFH ಎಂದು ಸುಳ್ಳು ಹೇಳಿದ್ದರು. ಆದರೆ ಅವರ ಸಿನಿಮಾವು ನೂರು ಕೋಟಿ ರೂಪಾಯಿ ಕಮಾಯಿ ಮಾಡಿತು.

 

Read Full Story

03:03 PM (IST) Apr 18

ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್ ಸಾಮಾನ್ಯದವನಲ್ಲ! ಇವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಐಪಿಎಲ್‌ನಲ್ಲಿ ಮಿಂಚುತ್ತಿರುವ ರಜತ್ ಪಾಟಿದಾರ್ ಹೆಸರು ಈಗ ಎಲ್ಲೆಡೆ ಚರ್ಚೆಯಲ್ಲಿದೆ. ಅವರ ಆಟದ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಅವರ ಆಸ್ತಿಪಾಸ್ತಿ ಬಗ್ಗೆ ನಿಮಗೆಷ್ಟು ಗೊತ್ತು? ಪಾಟಿದಾರ್ ಅವರ ಲೈಫ್‌ಸ್ಟೈಲ್, ಕಾರ್ ಕಲೆಕ್ಷನ್, ಸಂಪಾದನೆ.. ಹೀಗೆ ಅವರ ಜೀವನದ ಸಂಪೂರ್ಣ ವಿವರ ಇಲ್ಲಿದೆ.
Read Full Story

02:30 PM (IST) Apr 18

IPL 2026 - ಕೆಕೆಆರ್ ಸತತ ಸೋಲಿಗೆ ನಾಯಕ ಅಜಿಂಕ್ಯ ರಹಾನೆಯಲ್ಲ, ಈತನೇ ನೇರ ಕಾರಣ!

ಬೆಂಗಳೂರು: ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಪಾಲಿಗೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವು ಮರಿಚಿಕೆಯಾಗಿದೆ. ಇದೀಗ ಅಜಿಂಕ್ಯ ರಹಾನೆ ಪಡೆ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿದೆ. ಈ ರೀತಿ ಸೋಲಲು ಆ ಒಬ್ಬ ಆಟಗಾರ ನೇರ ಕಾರಣ. ಯಾರದು ನೋಡೋಣ ಬನ್ನಿ.

Read Full Story

02:24 PM (IST) Apr 18

ಕಾಂಗ್ರೆಸ್‌ ವಿರುದ್ಧ ಮುಸ್ಲಿಂ ಸಂಘಟನೆಗಳ ಆಕ್ರೋಶ, ಜಂಟಿ ಹೇಳಿಕೆಯಲ್ಲಿ 'ಕೈ'ಗೆ ಎಚ್ಚರಿಕೆ, ಮುಂದಿನ ನಡೆ ಏನು?

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬೆಂಬಲಿಸಿದ ಮುಸ್ಲಿಂ ಸಮುದಾಯಕ್ಕೆ ಇದೀಗ ರಾಜಕೀಯ ಪ್ರಾತಿನಿಧ್ಯ ನೀಡದೆ ಅವಮಾನಿಸಲಾಗುತ್ತಿದೆ ಎಂದು ರಾಜ್ಯದ ವಿವಿಧ ಮುಸ್ಲಿಂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ತಾರತಮ್ಯ ನೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ರಾಜಕೀಯ ಹಿನ್ನಡೆಯಾಗಲಿದೆ.

Read Full Story

02:08 PM (IST) Apr 18

ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಅಭಾವದ ಆತಂಕ, ಬರಿದಾಗುತ್ತಿದೆ ಜೀವಜಲ!

ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 99 ಅಡಿಗೆ ಕುಸಿದಿದ್ದು, ಮಂಡ್ಯ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಆತಂಕ ಎದುರಾಗಿದೆ. ಒಳಹರಿವು ತೀವ್ರವಾಗಿ ಕಡಿಮೆಯಾಗಿದ್ದು, ಮುಂಗಾರು ಮಳೆ ವಿಳಂಬವಾದರೆ ಕಾವೇರಿ ಕಣಿವೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆಯಿದೆ.
Read Full Story

01:39 PM (IST) Apr 18

Suvarna News Impact - ದಯಾಮರಣ ಕೇಳಿದ್ದ ವೃದ್ಧೆಯ ಅಳಲಿಗೆ ಕರಗಿದ ಸಿಎಂ; ಮೆದಗಾಣೆ ಹಳ್ಳಿಗೆ ಬಂತು ಕರೆಂಟ್!

ಹನೂರು ತಾಲೂಕಿನ ಮೆದಗಾಣೆ ಗ್ರಾಮದ ವೃದ್ಧೆ ಕೆಂಪಮ್ಮ ಅವರು ವಿದ್ಯುತ್‌ಗಾಗಿ ಬರೆದ ದಯಾಮರಣ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಸುವರ್ಣ ನ್ಯೂಸ್ ವರದಿಯ ಫಲವಾಗಿ, ದಶಕಗಳಿಂದ ಕತ್ತಲೆಯಲ್ಲಿದ್ದ ಗ್ರಾಮಕ್ಕೆ ಸಮರೋಪಾದಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

Read Full Story

01:33 PM (IST) Apr 18

'ಇದು ಸೆ*ಕ್ಸ್ ಬಗ್ಗೆ ಅಲ್ಲ, ಪ್ರಬುದ್ಧರಿಗೆ ಒಂದು ಕಾಲ್ಪನಿಕ ಕಥೆ' ಎಂದು 'ಟಾಕ್ಸಿಕ್' ಸೀಕ್ರೆಟ್ ಬಿಚ್ಚಿಟ್ಟ ಅನುರಾಗ್ ಕಶ್ಯಪ್

ಗೀತು ಮೋಹನ್ ದಾಸ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಪ್ಯಾನ್-ಇಂಡಿಯಾ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಒಟ್ಟಾರೆಯಾಗಿ ಯಶ್ ಅವರ ಈ ಹೊಸ ಅವತಾರ ಬೆಳ್ಳಿತೆರೆಯ ಮೇಲೆ ಯಾವ ರೀತಿ ಧೂಳೆಬ್ಬಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read Full Story

01:20 PM (IST) Apr 18

'ನನ್ನ ಬಟ್ಟೆ ನಾನೇ ಬಿಚ್ಚಿಕೊಂಡು ಕೇಸ್ ಹಾಕ್ತೀನಿ' - ವಾಸ್ತು ತಜ್ಞನನ್ನೇ ಬೆದರಿಸಿ ಕಿಡ್ನಾಪ್ ಮಾಡಲು ಯತ್ನಿಸಿತೇ ಲತಾ ಗ್ಯಾಂಗ್?

ಬೆಂಗಳೂರಿನ ವಾಸ್ತು ತಜ್ಞ ಶಾಂತಕುಮಾರ್ ವಿರುದ್ಧ ಗರ್ಭಿಣಿಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಶಾಂತಕುಮಾರ್ ಅವರು ಆ ಮಹಿಳೆ 'ವಸೂಲಿ ಗ್ಯಾಂಗ್'ನ ಭಾಗವಾಗಿದ್ದು, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ, ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. 

Read Full Story

01:09 PM (IST) Apr 18

ಅಕ್ಷಯ ತೃತೀಯದಂದು ಮುಸ್ಲಿಂರ ಅಂಗಡಿಯಲ್ಲಿ ಚಿನ್ನ ಖರೀದಿಸಬೇಡಿ - ಹಿಂದೂಗಳಿಗೆ ಮುತಾಲಿಕ್ ಕರೆ, ಲವ್ ಜಿಹಾದ್, ಪೊಲೀಸರ ವಿರುದ್ಧ ಕಿಡಿ

ಕೊಪ್ಪಳದಲ್ಲಿ ಮಾತನಾಡಿದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಬಂಗಾರ ಖರೀದಿಸುವಂತೆ ಕರೆ. ಅಳವಂಡಿ ಲವ್ ಜಿಹಾದ್ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ ಅವರು, ಟಿಸಿಎಸ್ ಮತಾಂತರ ಪ್ರಕರಣದ ಬಗ್ಗೆ ಎನ್‌ಐಎ ತನಿಖೆಗೆ ಆಗ್ರಹ.

Read Full Story

01:07 PM (IST) Apr 18

ಸಾಗರದಲ್ಲಿ‌ ಸಿನಿಮಾ ಶೂಟಿಂಗ್, ಮಧ್ಯರಾತ್ರಿ ಆ ನಿರ್ಮಾಪಕ..; ಕರಾಳ ಮುಖ ಬಿಚ್ಚಿಟ್ಟ ಕಾಂತಾರ ಸಿನಿಮಾದ ವಸಂತಕ್ಕ!

Actress Prathima Naik: ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರತಿಮಾ ನಾಯಕ್ ಅವರು ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಹಂಚಿಕೊಂಡಿದ್ದಾರೆ. ಓರ್ವ ನಿರ್ಮಾಪಕ ರಾತ್ರಿ ಅನುಚಿತವಾಗಿ ವರ್ತಿಸಲು ರೆಡಿಯಾದ ಘಟನೆಯನ್ನು ಕನ್ನಡ ಪಿಚ್ಚರ್‌ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.

 

Read Full Story

12:53 PM (IST) Apr 18

ಈ ಸಾವಿಗೆ ಯಾರು ಹೊಣೆ? ಬಯಲಾಟ ನೋಡುವ ವೇಳೆ ಕುಸಿದು ಬಿದ್ದ ಬೋರ್ಡ್‌, ಬದುಕಿ ಬಾಳಬೇಕಾದ ಇಬ್ಬರು ಮಕ್ಕಳ ಸಾವು!

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದಲ್ಲಿ ನಡೆದ ಬಯಲಾಟ ಕಾರ್ಯಕ್ರಮದಲ್ಲಿ ಸಮುದಾಯ ಭವನದ ಸಿಮೆಂಟ್ ನಾಮಫಲಕ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ-ಮಗಳ ಕಾಲುಗಳು ತುಂಡಾಗುವುದು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story

12:18 PM (IST) Apr 18

ಬಿಗ್‌ ಬಾಸ್‌ನಿಂದ 2-3 ಸಲ ಆಫರ್‌ ಬಂದರೂ ‌ʻರಾಮಾಚಾರಿʼ ನಟ ರಿತ್ವಿಕ್ ಹೋಗದಿರುವ ಸೀಕ್ರೆಟ್ ಕೊನೆಗೂ ಬಯಲಾಯ್ತು!

‘ಬಿಗ್ ಬಾಸ್ ಕನ್ನಡ’ ಸೀಸನ್ 12 ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ. ಈ ಸೀಸನ್‌ನಲ್ಲಿ ರಿತ್ವಿಕ್ ಕೃಪಾಕರ್ ಸ್ಪರ್ಧಿಯಾಗಿ ಬರುತ್ತಾರೆ ಎಂಬ ಬಲವಾದ ವದಂತಿಗಳಿದ್ದವು. ಈ ಬಗ್ಗೆ ಮಾತನಾಡಿರುವ ಅವರು, "ನನಗೆ ಕೇವಲ ಈ ಸೀಸನ್ ಮಾತ್ರವಲ್ಲದೆ, ಸೀಸನ್ 10 ಮತ್ತು 11ಕ್ಕೆ ಕೂಡ ಕರೆ ಬಂದಿತ್ತು'.' ಎಂದಿದ್ದಾರೆ.

Read Full Story

12:11 PM (IST) Apr 18

Amruthadhaare ಗೌತಮ್​ ಹುಟ್ಟುಹಬ್ಬ - ವಯಸ್ಸೆಷ್ಟು? ತಂಗಿಯಾದವಳೇ ಪತ್ನಿಯಾದ ನಟನ ರೋಚಕ ಸ್ಟೋರಿ ಇಲ್ಲಿದೆ

ಅಮೃತಧಾರೆ ಸೀರಿಯಲ್ ಖ್ಯಾತಿಯ ಗೌತಮ್ ಪಾತ್ರಧಾರಿ, ನಟ ರಾಜೇಶ್ ನಟರಂಗ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಜೇಶ್, ಪ್ರಸ್ತುತ 'ಅಮೃತಧಾರೆ'ಯಲ್ಲಿ ಪತ್ನಿದ ಛಾಯಾ ಸಿಂಗ್ ಜೊತೆ ಹಿಂದೆ 'ರೌಡಿ ಅಳಿಯ' ಚಿತ್ರದಲ್ಲಿ  ನಟಿಸಿದ್ದರು.

Read Full Story

More Trending News