LIVE NOW
Published : Aug 28, 2026, 07:24 AM ISTUpdated : Aug 28, 2026, 10:21 AM IST

State News Live: ಬೆಂಗಳೂರು ಲಾಲ್‌ಬಾಗ್‌ ರೂವಾರಿ ಗುಸ್ತಾವ್ ಕ್ರುಂಬಿಗಲ್ ಸಮಾಧಿ ಧ್ವಂಸ - ಪರಂಪರೆ ಪ್ರೇಮಿಗಳ ಆಕ್ರೋಶ!

ಸಾರಾಂಶ

ಬೆಂಗಳೂರು (ಆ.28): ಮಂಗಳೂರನ್ನು ಕರ್ನಾಟಕದ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಬೇಕೆಂಬುದು 30 ವರ್ಷಗಳ ಕನ್ನಡಿಗರ ಹೋರಾಟ. ಅದರಂತೆ ಇದೀಗ ರೈಲ್ವೆ ಮಂಡಳಿಯು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆಮಂಗಳೂರನ್ನು ವರ್ಗಾವಣೆ ಅಧಿಸೂಚನೆ ಮಾಡುವ ಹೊರಡಿ ಸಿದ್ದು, ಕೇರಳದ ಒತ್ತಡಕ್ಕೆ ಮಣಿದು ಯಾವ ಬದಲಾ ವಣೆ ಮಾಡಿದರೂ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.ಕೇರಳಂನಲ್ಲಿ ಕರ್ನಾಟಕದ ಬೆಳವಣಿಗೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯದ ಯಾವ ರಾಜಕಾರಣಿಯೂ ಒಂದೇ ಒಂದು ಮಾತನ್ನೂ ಹೇಳದಿರುವುದು ಖಂಡನೀಯ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

Gustav Krumbiegel

10:21 AM (IST) Aug 28

ಬೆಂಗಳೂರು ಲಾಲ್‌ಬಾಗ್‌ ರೂವಾರಿ ಗುಸ್ತಾವ್ ಕ್ರುಂಬಿಗಲ್ ಸಮಾಧಿ ಧ್ವಂಸ - ಪರಂಪರೆ ಪ್ರೇಮಿಗಳ ಆಕ್ರೋಶ!

ಲಾಲ್‌ಬಾಗ್‌ಗೆ ಇಂದಿನ ರೂಪ ನೀಡಿದ ಗುಸ್ತಾವ್ ಕ್ರುಂಬಿಗಲ್ ಅವರ ಸಮಾಧಿ ಹೊಸೂರು ರಸ್ತೆ ಸ್ಮಶಾನದಲ್ಲಿ ತೀವ್ರವಾಗಿ ಜಖಂಗೊಂಡಿದೆ. ಈ ಘಟನೆಯ ಬಗ್ಗೆ 'ಹೆರಿಟೇಜ್ ಬೇಕು' ಸಂಘಟನೆಯು ತನಿಖೆಗೆ ಆಗ್ರಹಿಸಿದ್ದು, ತೋಟಗಾರಿಕೆ ಇಲಾಖೆ ಮತ್ತು ಪೊಲೀಸರಿಗೆ ಪತ್ರ ಬರೆದು ಸಮಾಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದೆ.

Read Full Story

10:01 AM (IST) Aug 28

'ಫೈಲ್ ನನ್ನ ಬಳಿಯೇ ಬರಬೇಕು ತಾನೇ?.. ಸಂಪುಟ ಬದಲಾವಣೆ ಚರ್ಚೆಗೆ ಖರ್ಗೆ ತೆರೆ - ಯಾವಾಗ ಏನು ಬೇಕಾದ್ರೂ ಆಗಬಹುದು ಎಂದಿದ್ದೇಕೆ ಹೆಬ್ಬಾಳ್ಕರ್?

ರಾಜ್ಯ ಸಚಿವ ಸಂಪುಟ ಬದಲಾವಣೆ ವದಂತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದು, ಯಾವುದೇ ಫೈಲ್ ತನ್ನ ಬಳಿ ಬರಬೇಕು ಎಂದು ಸ್ಪಷ್ಟಪಡಿಸಿದರು. ಇತ್ತ, ಮಾಜಿ ಸಚಿವೆ ಹೆಬ್ಬಾಳಕರ್, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದು, ಸಂಪುಟದಲ್ಲಿ ಮಹಿಳೆಯರಿಲ್ಲದಿದ್ದರೆ ಅದು ಅಪೂರ್ಣ ಎಂದಿದ್ದಾರೆ.

Read Full Story

09:36 AM (IST) Aug 28

Mangaluru To Palakkad train - ಮಂಗಳೂರು ಮರಳಿ ಪಾಲಕ್ಕಾಡ್‌ಗೆ ಬೇಡ; ಕೇರಳ ಲಾಭಿ ವಿರುದ್ಧ ಧ್ವನಿ ಎತ್ತಿದ ಕನ್ನಡಪರ ಸಂಘಟನೆಗಳು!

ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ 30 ವರ್ಷಗಳ ಹೋರಾಟಕ್ಕೆ ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಆದರೆ, ಕೇರಳದ ಒತ್ತಡಕ್ಕೆ ಮಣಿದು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿದರೆ ತೀವ್ರ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.
Read Full Story

07:52 AM (IST) Aug 28

ರೋಬೋಟ್‌ ವ್ಯಾಕ್ಯೂಮ್‌ನಿಂದ ಹೆಂಡತಿಯ ಅಕ್ರಮ ಸಂಬಂಧ ಬಯಲು! ₹15 ಲಕ್ಷ ಪರಿಹಾರ ಸಿಕ್ಕಿದ್ರೂ ಗಂಡ ಜೈಲಿಗೆ ಹೋಗಿದ್ದೇಕೆ?

ತೈವಾನ್‌ನಲ್ಲಿ ಪತ್ನಿಯ ಅಫೇರ್ ಬಗ್ಗೆ ಅನುಮಾನಗೊಂಡ ವ್ಯಕ್ತಿಯೊಬ್ಬ ರೋಬೋಟ್ ವ್ಯಾಕ್ಯೂಮ್‌ನ ಲೈವ್ ಕ್ಯಾಮೆರಾ ಬಳಸಿ ಆಕೆಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ. ಆ ದೃಶ್ಯಗಳಿಂದ ಸಿವಿಲ್ ಪ್ರಕರಣದಲ್ಲಿ ಪರಿಹಾರ ಪಡೆದರೂ, ಅನುಮತಿಯಿಲ್ಲದೆ ರೆಕಾರ್ಡ್ ಮಾಡಿದ ಆರೋಪದಲ್ಲಿ ಆತನಿಗೆ 5 ತಿಂಗಳ ಜೈಲು ಮತ್ತು ದಂಡ ವಿಧಿಸಲಾಗಿದೆ.

Read Full Story

07:26 AM (IST) Aug 28

ಎಲ್ಲಾ ತ್ಯಾಗಕ್ಕೆ ನಾಗೇಂದ್ರ ಸಿದ್ಧ, ಆತ ಪಕ್ಷನಿಷ್ಠ ನಾಯಕ: ಡಿಕೆಶಿ

ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದಾರೆ. ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

 

Read Full Story

07:25 AM (IST) Aug 28

65 ತೆರಿಗೆ ಸಂಗ್ರಾಹಕರು, ಗುಮಾಸ್ತರು, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ

ರಾಯಚೂರು ಜಿಲ್ಲಾ ಪಂಚಾಯತ್, ತೆರಿಗೆ ಸಂಗ್ರಾಹಕ ಮತ್ತು ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಒಟ್ಟು 65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

 

Read Full Story

07:25 AM (IST) Aug 28

ಇಂದು ಅರ್ಧ ಬೆಂಗಳೂರಿಗೆ ನೀರಿನ ಪೂರೈಕೆ ಸ್ಥಗಿತ

ಕಾವೇರಿ ನೀರು ಸರಬರಾಜು ಯೋಜನೆಯ ಮುಖ್ಯ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿಯಿಂದಾಗಿ ಆ.28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಲಮಂಡಳಿಯು ಸುಮಾರು 8 ಗಂಟೆಗಳ ಕಾಲ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಿದ್ದು, ಸಾರ್ವಜನಿಕರು ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಿದೆ.

 

Read Full Story

07:25 AM (IST) Aug 28

ತರಬೇತಿ ವಿಮಾನ ಪತನ : ಕನ್ನಡಿಗ ಸೇರಿ ಇಬ್ಬರು ಪೈಲಟ್‌ಗಳು ಸಾವು

ಕಾನ್ಪುರದ ಬಳಿ ತರಬೇತಿ ವಿಮಾನವೊಂದು ಪತನಗೊಂಡು ಕನ್ನಡಿಗ ಪೈಲಟ್ ಅಭಿಷೇಕ್ ಪೂಜಾರಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಗಾರ್ಗ್ ಏವಿಯೇಷನ್‌ಗೆ ಸೇರಿದ ಟೆಕ್ನಾಮ್ ಪಿ2006ಟಿ ವಿಮಾನವು ಟೇಕ್ ಆಫ್ ಆದ 20 ನಿಮಿಷಗಳಲ್ಲಿ ಈ ದುರ್ಘಟನೆ ಸಂಭವಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

 

Read Full Story

07:24 AM (IST) Aug 28

ಮೈಸೂರು ರೈಲ್ವೆ ವಿಭಾಗಕ್ಕೆ ಅ.1ಕ್ಕೆ ಮಂಗ್ಳೂರು ಸೇರ್ಪಡೆ; ರೈಲ್ವೆ ಮಂಡಳಿ ನಿರ್ಧಾರದಲ್ಲಿಲ್ಲ ಬದಲಾವಣೆ

ಕೇರಳದ ತೀವ್ರ ವಿರೋಧದ ನಡುವೆಯೂ, ರೈಲ್ವೆ ಮಂಡಳಿಯು ಮಂಗಳೂರನ್ನು ಮೈಸೂರು ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರ್ಪಡೆಗೊಳಿಸಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ನಿರ್ಧಾರವು ಆಡಳಿತಾತ್ಮಕ ಸುಧಾರಣೆಯಾಗಿದ್ದು, ಕರ್ನಾಟಕಕ್ಕೆ ಅನುಕೂಲಕರವಾಗಿದೆ ಎಂದು ಮಂಡಳಿ ಹೇಳಿದೆ.

 

Read Full Story

More Trending News