Published : Aug 28, 2026, 07:24 AM ISTUpdated : Aug 28, 2026, 11:00 PM IST

State News Live: Police - ಮರಳು ಲಾರಿಗೆ ಲಂಚ ಪಡೆದ ಪೊಲೀಸರು ಲೋಕಾಯುಕ್ತ ಬಲೆಗೆ; ಇಬ್ಬರ ಬಂಧನ, ಇಬ್ಬರು ಪರಾರಿ!

ಸಾರಾಂಶ

ಬೆಂಗಳೂರು (ಆ.28): ಮಂಗಳೂರನ್ನು ಕರ್ನಾಟಕದ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಬೇಕೆಂಬುದು 30 ವರ್ಷಗಳ ಕನ್ನಡಿಗರ ಹೋರಾಟ. ಅದರಂತೆ ಇದೀಗ ರೈಲ್ವೆ ಮಂಡಳಿಯು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆಮಂಗಳೂರನ್ನು ವರ್ಗಾವಣೆ ಅಧಿಸೂಚನೆ ಮಾಡುವ ಹೊರಡಿ ಸಿದ್ದು, ಕೇರಳದ ಒತ್ತಡಕ್ಕೆ ಮಣಿದು ಯಾವ ಬದಲಾ ವಣೆ ಮಾಡಿದರೂ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.ಕೇರಳಂನಲ್ಲಿ ಕರ್ನಾಟಕದ ಬೆಳವಣಿಗೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯದ ಯಾವ ರಾಜಕಾರಣಿಯೂ ಒಂದೇ ಒಂದು ಮಾತನ್ನೂ ಹೇಳದಿರುವುದು ಖಂಡನೀಯ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

Dharwad Police

11:00 PM (IST) Aug 28

Police - ಮರಳು ಲಾರಿಗೆ ಲಂಚ ಪಡೆದ ಪೊಲೀಸರು ಲೋಕಾಯುಕ್ತ ಬಲೆಗೆ; ಇಬ್ಬರ ಬಂಧನ, ಇಬ್ಬರು ಪರಾರಿ!

ಧಾರವಾಡದಲ್ಲಿ ಅಕ್ರಮ ಮರಳು ಲಾರಿ ಬಿಡಲು ₹30,000 ಲಂಚ ಪಡೆದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇಬ್ಬರು ಪೊಲೀಸರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ದಾಳಿಯ ಸುಳಿವು পেয়ে ಇತರೆ ಇಬ್ಬರು ಕಾನ್‌ಸ್ಟೇಬಲ್‌ಗಳು ಪರಾರಿಯಾಗಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Read Full Story

10:40 PM (IST) Aug 28

Viral News - ಮಗನಿಗಾಗಿ ತಾಯಿಯ ರೂಪ ತಳೆದ ತಂದೆ; ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಭಾವುಕ ಸ್ಟೋರಿ!

ಪತ್ನಿಯ ಅಗಲಿಕೆಯ ನಂತರ ಉತ್ತರ ಪ್ರದೇಶದ ಕುಲದೀಪ್ ಭಾರದ್ವಾಜ್ ತಮ್ಮ ಎರಡೂವರೆ ವರ್ಷದ ಮಗ ಸಾತ್ವಿಕ್‌ನನ್ನು ಒಬ್ಬಂಟಿಯಾಗಿ ಬೆಳೆಸುತ್ತಿದ್ದಾರೆ. ಮಗನಿಗೆ ತಂದೆಯಷ್ಟೇ ಅಲ್ಲದೆ ತಾಯಿಯ ಪ್ರೀತಿಯನ್ನೂ ನೀಡುತ್ತಿರುವ ಅವರ ಭಾವನಾತ್ಮಕ ಪಯಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರಿಗೆ ಸ್ಫೂರ್ತಿಯಾಗಿವೆ.
Read Full Story

09:05 PM (IST) Aug 28

Sourav Ganguly - ಸಚಿನ್, ದ್ರಾವಿಡ್, ಸೇವಾಗ್ ಹಾದಿಯಲ್ಲಿ ಮಕ್ಕಳಿಲ್ಲ; ಸೌರವ್ ಗಂಗೂಲಿ ಮಗಳ ಸಾಧನೆ ಏನು?

ಸಚಿನ್, ದ್ರಾವಿಡ್, ಸೆಹ್ವಾಗ್ ಅವರ ಮಕ್ಕಳು ಕ್ರಿಕೆಟ್‌ನಲ್ಲಿ ಮುಂದುವರಿದರೆ, ಸೌರವ್ ಗಂಗೂಲಿ ಮಗಳು ಸನಾ ಗಂಗೂಲಿ ಯಾವ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.

Read Full Story

07:02 PM (IST) Aug 28

Balen Sha - ನೇಪಾಳ್‌ಗೆ ಮಗ್ಗಲು ಮುಳ್ಳಾಯ್ತು ಚೀನಾದ ಮೇಲಿನ ಕುರುಡು ಪ್ರೀತಿ; ಸ್ನೇಹದ ಆಸೆಯಲ್ಲಿ ಬಾಲೆನ್ ಶಾ ತಮ್ಮವರಿಗೇ ಮಾಡಿದ್ರಾ ಅನ್ಯಾಯ?

ನೇಪಾಳ-ಚೀನಾ ಗಡಿಯ ರಸುವಾಗಧಿಯಲ್ಲಿ ಸಂಭವಿಸಿದ ಹಿಮನದಿ ಪ್ರವಾಹದಿಂದ 469ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಚೀನಾ ಮುಂಚಿತವಾಗಿ ಎಚ್ಚರಿಕೆ ನೀಡದ ಕಾರಣ ಈ ದುರಂತ ಸಂಭವಿಸಿದ್ದು, ಪ್ರಧಾನಿ ಬಾಲೆನ್ ಶಾ ಸರ್ಕಾರದ ಚೀನಾ ಪರ ನೀತಿ ಮತ್ತು ವೈಫಲ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯು ನೇಪಾಳದ ವಿದೇಶಾಂಗ ನೀತಿ ಮತ್ತು ನಾಗರಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
Read Full Story

06:43 PM (IST) Aug 28

B Nagendra Resign - ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಗಳಗಳನೇ ಅತ್ತ ಸಚಿವ ನಾಗೇಂದ್ರ!

ಸಚಿವ ಬಿ. ನಾಗೇಂದ್ರ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ, ಇದು ದಲಿತ ನಾಯಕನ ವಿರುದ್ಧದ ಷಡ್ಯಂತ್ರ ಎಂದು ಆರೋಪಿಸಿ ತಮ್ಮ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರ್ಕಾರಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ಸ್ವ-ಇಚ್ಛೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
Read Full Story

05:25 PM (IST) Aug 28

Raksha Bandhan - ಟಾಕ್ಸಿಕ್ ಹೈಪ್ ನಡುವೆಯೂ ತಂಗಿಗೆ ಸಮಯ ಕೊಟ್ಟ ಯಶ್ - ನಂದಿನಿ ಜೊತೆ ರಕ್ಷಾ ಬಂಧನ

ರಾಕಿಂಗ್ ಸ್ಟಾರ್ ಯಶ್‌ಗೆ ತಂಗಿ ನಂದಿನಿ ರಕ್ಷಾ ಬಂಧನದ ಪ್ರಯುಕ್ತ ರಾಖಿ ಕಟ್ಟಿದ್ದಾರೆ. ಅಣ್ಣ-ತಂಗಿಯ ಆತ್ಮೀಯ ಕ್ಷಣಗಳ ಫೋಟೋಗಳು ಹಾಗೂ ನಂದಿನಿಯ ಭಾವನಾತ್ಮಕ ಪೋಸ್ಟ್ ಇದೀಗ ವೈರಲ್ ಆಗಿದೆ.

Read Full Story

05:03 PM (IST) Aug 28

Egg Prices - ಒಂದು ಮೊಟ್ಟೆಗೆ ₹25? ಬೆಲೆ ಏರಿಕೆಯ ಹಿಂದಿದೆ ಎಥೆನಾಲ್‌ನ ದೊಡ್ಡ ಆಟ!

ಮೆಕ್ಕೆಜೋಳ ಮತ್ತು ಸೋಯಾಬೀನ್ ಹಿಂಡಿ ಬೆಲೆ ಏರಿಕೆಯಿಂದ ಕೋಳಿ ಆಹಾರ ದುಬಾರಿಯಾಗಿದೆ. ಎಥೆನಾಲ್‌ಗೆ ಹೆಚ್ಚುತ್ತಿರುವ ಮೆಕ್ಕೆಜೋಳ ಬೇಡಿಕೆಯ ನಡುವೆ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Read Full Story

04:46 PM (IST) Aug 28

'ಕಟ್ಕೊಂಡವರ ಖಾತೆಗೂ ಹೋಗಿದೆ, ಇಟ್ಕೊಂಡವರ ಖಾತೆಗೂ ಹೋಗಿದೆ - ವಾಲ್ಮೀಕಿ ಹಗರಣ, ಸಿಟಿ ರವಿ ಸ್ಫೋಟಕ ಹೇಳಿಕೆ!

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿ.ಟಿ. ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿಗಮದ ಹಣವು 'ಕಟ್ಟಿಕೊಂಡವರ' ಮತ್ತು 'ಇಟ್ಕೊಂಡವರ' ಇಬ್ಬರ ಖಾತೆಗೂ ಹೋಗಿದೆ ಎಂದು ಆರೋಪಿಸಿರುವ ಅವರು, ಎಸ್‌ಐಟಿ ತನಿಖೆ ಕೇವಲ ತಿಪ್ಪೆ ಸಾರಿಸುವ ಕೆಲಸ ಮಾಡಿದೆ ಎಂದರು.

Read Full Story

04:39 PM (IST) Aug 28

ಯಶ್ ‘ಟಾಕ್ಸಿಕ್’ ನೋಡಿ ವಾವ್ ಎಂದ ರಿಯಲ್ ಸ್ಟಾರ್ ಉಪೇಂದ್ರ - ಆದರೆ ನೆಟ್ಟಿಗರು ಹೇಳಿದ್ದೇ ಬೇರೆ!

ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ತೆರೆಕಂಡಿದೆ. ಸಿನಿಮಾ ಕುರಿತು ಪರ-ವಿರೋಧದ ಚರ್ಚೆ ಜೋರಾಗಿರುವ ನಡುವೆಯೇ, ರಿಯಲ್ ಸ್ಟಾರ್ ಉಪೇಂದ್ರ ‘ಟಾಕ್ಸಿಕ್’ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಇದೀಗ ಗಮನ ಸೆಳೆದಿದೆ.

Read Full Story

04:31 PM (IST) Aug 28

ಅಪರೂಪದ ಲಕ್ಷ್ಮೀನಾರಾಯಣ ಯೋಗ - ಈ 5 ರಾಶಿಗಳಿಗೆ ಹೊಸ ಉದ್ಯೋಗ, ಪ್ರಮೋಷನ್ ಪಕ್ಕಾ?

ಅಕ್ಟೋಬರ್ ತಿಂಗಳಲ್ಲಿ ಒಂದೇ ರಾಶಿಯಲ್ಲಿ ಎರಡು ಅಪರೂಪದ ಗ್ರಹ ಸಂಚಾರಗಳು ನಡೆಯಲಿವೆ. ಅಕ್ಟೋಬರ್ 6 ರಂದು ಶುಕ್ರ ಮತ್ತು ಅಕ್ಟೋಬರ್ 21 ರಂದು ಬುಧ ಗ್ರಹಗಳು ತುಲಾ ರಾಶಿಯಲ್ಲಿ ವಕ್ರಿಯಾಗಲಿವೆ. ಒಂದೇ ರಾಶಿಯಲ್ಲಿ ಶುಕ್ರ ಮತ್ತು ಬುಧ ಗ್ರಹಗಳ ಹಿಮ್ಮುಖ ಚಲನೆಯಿಂದ 'ಲಕ್ಷ್ಮೀನಾರಾಯಣ ಯೋಗ' ಉಂಟಾಗುತ್ತದೆ.

Read Full Story

04:03 PM (IST) Aug 28

PMJDY - ಜೀರೋ ಬ್ಯಾಲೆನ್ಸ್ ಇದ್ದರೂ ಜನ್ ಧನ್ ಖಾತೆಯಿಂದ 10 ಸಾವಿರ ರೂ. ಡ್ರಾ ಮಾಡಿ - ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಪ್ರಧಾನ ಮಂತ್ರಿ ಜನ ಧನ ಯೋಜನೆ (PMJDY) ಖಾತೆದಾರರು ತಮ್ಮ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ ₹10,000 ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆಯು ಉಚಿತ ಅಪಘಾತ ವಿಮೆ, ರುಪೇ ಡೆಬಿಟ್ ಕಾರ್ಡ್ ಮತ್ತು ಸರ್ಕಾರಿ ಯೋಜನೆಗಳ ನೇರ ಹಣ ರವಾನೆಯಂತಹ ಹಲವಾರು ಪ್ರಯೋಜನಗಳನ್ನು ಸಹ ನೀಡುತ್ತದೆ.
Read Full Story

02:41 PM (IST) Aug 28

ಜಾಗತಿಕ AI ಕ್ರಾಂತಿಯಲ್ಲಿ ಸಾಧನೆ - ಟೈಮ್ ನಿಯತಕಾಲಿಕೆಯ 100 ಪ್ರಭಾವಿಗಳ ಪಟ್ಟಿಯಲ್ಲಿ 9 ಭಾರತೀಯ ಮೂಲದ ದಿಗ್ಗಜರು!

'ಟೈಮ್' ನಿಯತಕಾಲಿಕೆಯು 2026ರ AI ಕ್ಷೇತ್ರದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 9 ಭಾರತೀಯ ಮೂಲದ ಸಾಧಕರು ಸ್ಥಾನ ಪಡೆದಿದ್ದಾರೆ. ಈ ಲೇಖನವು ಕಾರ್ಪೊರೇಟ್, ಆರೋಗ್ಯ, ನ್ಯಾಯಾಂಗ ಮತ್ತು ಪ್ರಾದೇಶಿಕ ಭಾಷಾ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟುಮಾಡುತ್ತಿರುವ ಈ ಪ್ರಮುಖರ ಕೊಡುಗೆಗಳನ್ನು ವಿವರಿಸುತ್ತದೆ.
Read Full Story

02:23 PM (IST) Aug 28

ಗೃಹಪ್ರವೇಶಕ್ಕೆ ಬಂದ ಅತಿಥಿಗಳಿಗೆ ಸರ್ಪ್ರೈಸ್! ಮನೆ ಮುಂದೆ ವಂದೇ ಮಾತರಂ ಪೂರ್ಣ ಗೀತೆಯ ಸೆಲ್ಫಿ ಸ್ಪಾಟ್ ಹಾಕಿಸಿದ ಶಿಕ್ಷಕಿ!

ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಅಂದ್ರೆ ಮನೆ ಅಲಂಕಾರ, ಮನೆಯ ಹೆಸರು, ಹೂವಿನ ಅಲಂಕಾರ, ಲೈಟಿಂಗ್ಸ್ ಇವೆಲ್ಲವೂ ಕಾಣಿಸುತ್ತವೆ. ಆದರೆ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆ ಗೃಹಪ್ರವೇಶ ಕಾರ್ಯಕ್ರಮವನ್ನ ವಿಭಿನ್ನವಾಗಿ ಮಾಡಿದ್ದಾರೆ. ಅವರ ಈ ವಿಶಿಷ್ಟ ಐಡಿಯಾ ಗಮನ ಸೆಳೆದಿದೆ.

Read Full Story

12:43 PM (IST) Aug 28

ಸೆ.10ಕ್ಕೆ ಮುಕ್ತಾಯವಾಗಲಿದೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ ಟೋಲ್‌ ಒಪ್ಪಂದ, ವಾಹನ ಸವಾರರಿಗೆ ಸಿಗುತ್ತಾ ರಿಲೀಫ್?

ಸೆಪ್ಟೆಂಬರ್ 10ಕ್ಕೆ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಪ್ಲಾಜಾಗಳ ಗುತ್ತಿಗೆ ಒಪ್ಪಂದ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಟೋಲ್ ಸಂಗ್ರಹವನ್ನು ನಿಲ್ಲಿಸುವುದು, ಮುಂದುವರಿಸುವುದು ಸೇರಿದಂತೆ ಹಲವು ಆಯ್ಕೆಗಳನ್ನು ಕೇಂದ್ರ ಸರ್ಕಾರ ಮತ್ತು ಎನ್‌ಹೆಚ್‌ಎಐ ಪರಿಶೀಲಿಸುತ್ತಿವೆ.

Read Full Story

12:11 PM (IST) Aug 28

ಉಚಿತ ಟೀ, ಸ್ನ್ಯಾಕ್ಸ್ ಜೊತೆ 3 ಹೊತ್ತು ಬಫೆ ಊಟ - ಬೆಂಗಳೂರಿನ ಗೂಗಲ್ ಅನಂತ ಬೇಸ್‌ಮೆಂಟ್ ವ್ಯವಸ್ಥೆಗೆ ಕ್ಯಾಬ್ ಚಾಲಕ ಮೆಚ್ಚುಗೆ

ಬೆಂಗಳೂರಿನ ಗೂಗಲ್ 'ಅನಂತ' ಕಚೇರಿಗೆ ಉದ್ಯೋಗಿಯನ್ನು ಡ್ರಾಪ್ ಮಾಡಲು ಹೋದ ಕ್ಯಾಬ್ ಚಾಲಕರೊಬ್ಬರು ಅಲ್ಲಿ ತಮಗೆ ದೊರೆತ ಸತ್ಕಾರದ ಬಗ್ಗೆ ಹಂಚಿಕೊಂಡಿದ್ದಾರೆ. ಚಾಲಕರಿಗೆ ಪ್ರತ್ಯೇಕ ಪಾರ್ಕಿಂಗ್, ಉಚಿತ ಉಪಹಾರ ಮತ್ತು ಬಫೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಗೂಗಲ್‌ನ ಸಂಸ್ಕೃತಿ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story

12:05 PM (IST) Aug 28

ಶಿವಮೊಗ್ಗ ತುಂಗಾ ನದಿ ಪ್ರಕರಣಕ್ಕೆ ಟ್ವಿಸ್ಟ್ - ಮಕ್ಕಳ ರಕ್ಷಣೆಗಾಗಿ ನದಿಗೆ ಹಾರಿದ ಮಹಿಳೆ!

ಶಿವಮೊಗ್ಗದಲ್ಲಿ ತಾಯಿ ಮತ್ತು ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಬಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇಬ್ಬರು ಮಕ್ಕಳು ಕಾಲು ಜಾರಿ ನದಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ತಾನು ಜಿಗಿದಿದ್ದಾಗಿ ತಾಯಿ ಭವಾನಿ ಹೇಳಿಕೆ ನೀಡಿದ್ದಾರೆ. ನಾಪತ್ತೆಯಾದ ಇಬ್ಬರು ಮಕ್ಕಳಿಗಾಗಿ ಅಗ್ನಿಶಾಮಕ ದಳದ ಶೋಧ ಕಾರ್ಯ ಮುಂದುವರೆದಿದೆ.
Read Full Story

11:21 AM (IST) Aug 28

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸಾಗರದಲ್ಲಿ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದ ಪ್ರತಿಭಟನಾಕಾರರು

ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ವಿರೋಧಿಸಿ ಸಾಗರದಲ್ಲಿ ಜಿಲ್ಲಾ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಿತು. ಈ ವರದಿಯು ಮಲೆನಾಡು ರೈತರಿಗೆ ಮರಣ ಶಾಸನವಾಗಲಿದ್ದು, ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ಮರು ಸಮೀಕ್ಷೆ ನಡೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
Read Full Story

10:47 AM (IST) Aug 28

ಕಾರ್ಕಳದ ಮಾಳದಲ್ಲಿ ಇತಿಹಾಸದ ಹೆಜ್ಜೆಗುರುತು, 5 ಅಪರೂಪದ ಜಿನ ಶಾಸನ ಪತ್ತೆ - 14ನೇ ಶತಮಾನದ ಐತಿಹಾಸಿಕ ರಹಸ್ಯ ಅನಾವರಣ!

ಕಾರ್ಕಳದ ಮಾಳ ಗ್ರಾಮದ ಐತಿಹಾಸಿಕ ಕೋಟೆ ಬಸದಿಯ ಜೀರ್ಣೋದ್ಧಾರ ಸಂದರ್ಭದಲ್ಲಿ ಐದು ಅಪರೂಪದ ಜಿನ ಶಾಸನಗಳು ಪತ್ತೆಯಾಗಿವೆ. 14 ರಿಂದ 19ನೇ ಶತಮಾನಕ್ಕೆ ಸೇರಿದ ಈ ಶಾಸನಗಳು, ಗಣಧರ ಪಾದ ಹಾಗೂ ತೀರ್ಥಂಕರರ ಪ್ರತಿಮೆಗಳ ಪ್ರತಿಷ್ಠಾಪನೆಯ ಐತಿಹಾಸಿಕ ಮಾಹಿತಿಯನ್ನು ಒದಗಿಸುತ್ತವೆ. ಈ ಆವಿಷ್ಕಾರದಿಂದ ಬಸದಿಯು 14-15ನೇ ಶತಮಾನದಷ್ಟು ಪ್ರಾಚೀನವಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Read Full Story

10:40 AM (IST) Aug 28

ಸೈಬರ್ ಖದೀಮರ ಪತ್ತೆಗೆ ಹೋಗಿದ್ದ ಆಗ್ನೇಯ ವಿಭಾಗದ ಇನ್ಸ್‌ಪೆಕ್ಟರ್ ರವಿ ದುರ್ಮರಣ - ಇಬ್ಬರು ಸಿಬ್ಬಂದಿಗೆ ಗಂಭೀರ ಗಾಯ!

ಸೈಬರ್ ಅಪರಾಧ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಸೆನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಬಿ. ರವಿ, ಬಸ್ ಅಪಘಾತದಲ್ಲಿ ದುರಂತವಾಗಿ ಮೃತಪಟ್ಟಿದ್ದಾರೆ. ಭೋಪಾಲ್‌ನಿಂದ ಇಂದೋರ್‌ಗೆ ಪ್ರಯಾಣಿಸುತ್ತಿದ್ದಾಗ ಬಸ್ ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಪರಿಣಾಮ ಈ ಘಟನೆ ನಡೆದಿದೆ.

Read Full Story

10:21 AM (IST) Aug 28

ಬೆಂಗಳೂರು ಲಾಲ್‌ಬಾಗ್‌ ರೂವಾರಿ ಗುಸ್ತಾವ್ ಕ್ರುಂಬಿಗಲ್ ಸಮಾಧಿ ಧ್ವಂಸ - ಪರಂಪರೆ ಪ್ರೇಮಿಗಳ ಆಕ್ರೋಶ!

ಲಾಲ್‌ಬಾಗ್‌ಗೆ ಇಂದಿನ ರೂಪ ನೀಡಿದ ಗುಸ್ತಾವ್ ಕ್ರುಂಬಿಗಲ್ ಅವರ ಸಮಾಧಿ ಹೊಸೂರು ರಸ್ತೆ ಸ್ಮಶಾನದಲ್ಲಿ ತೀವ್ರವಾಗಿ ಜಖಂಗೊಂಡಿದೆ. ಈ ಘಟನೆಯ ಬಗ್ಗೆ 'ಹೆರಿಟೇಜ್ ಬೇಕು' ಸಂಘಟನೆಯು ತನಿಖೆಗೆ ಆಗ್ರಹಿಸಿದ್ದು, ತೋಟಗಾರಿಕೆ ಇಲಾಖೆ ಮತ್ತು ಪೊಲೀಸರಿಗೆ ಪತ್ರ ಬರೆದು ಸಮಾಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದೆ.

Read Full Story

10:01 AM (IST) Aug 28

'ಫೈಲ್ ನನ್ನ ಬಳಿಯೇ ಬರಬೇಕು ತಾನೇ?.. ಸಂಪುಟ ಬದಲಾವಣೆ ಚರ್ಚೆಗೆ ಖರ್ಗೆ ತೆರೆ - ಯಾವಾಗ ಏನು ಬೇಕಾದ್ರೂ ಆಗಬಹುದು ಎಂದಿದ್ದೇಕೆ ಹೆಬ್ಬಾಳ್ಕರ್?

ರಾಜ್ಯ ಸಚಿವ ಸಂಪುಟ ಬದಲಾವಣೆ ವದಂತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದು, ಯಾವುದೇ ಫೈಲ್ ತನ್ನ ಬಳಿ ಬರಬೇಕು ಎಂದು ಸ್ಪಷ್ಟಪಡಿಸಿದರು. ಇತ್ತ, ಮಾಜಿ ಸಚಿವೆ ಹೆಬ್ಬಾಳಕರ್, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದು, ಸಂಪುಟದಲ್ಲಿ ಮಹಿಳೆಯರಿಲ್ಲದಿದ್ದರೆ ಅದು ಅಪೂರ್ಣ ಎಂದಿದ್ದಾರೆ.

Read Full Story

09:36 AM (IST) Aug 28

Mangaluru To Palakkad train - ಮಂಗಳೂರು ಮರಳಿ ಪಾಲಕ್ಕಾಡ್‌ಗೆ ಬೇಡ; ಕೇರಳ ಲಾಭಿ ವಿರುದ್ಧ ಧ್ವನಿ ಎತ್ತಿದ ಕನ್ನಡಪರ ಸಂಘಟನೆಗಳು!

ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ 30 ವರ್ಷಗಳ ಹೋರಾಟಕ್ಕೆ ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಆದರೆ, ಕೇರಳದ ಒತ್ತಡಕ್ಕೆ ಮಣಿದು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿದರೆ ತೀವ್ರ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.
Read Full Story

07:52 AM (IST) Aug 28

ರೋಬೋಟ್‌ ವ್ಯಾಕ್ಯೂಮ್‌ನಿಂದ ಹೆಂಡತಿಯ ಅಕ್ರಮ ಸಂಬಂಧ ಬಯಲು! ₹15 ಲಕ್ಷ ಪರಿಹಾರ ಸಿಕ್ಕಿದ್ರೂ ಗಂಡ ಜೈಲಿಗೆ ಹೋಗಿದ್ದೇಕೆ?

ತೈವಾನ್‌ನಲ್ಲಿ ಪತ್ನಿಯ ಅಫೇರ್ ಬಗ್ಗೆ ಅನುಮಾನಗೊಂಡ ವ್ಯಕ್ತಿಯೊಬ್ಬ ರೋಬೋಟ್ ವ್ಯಾಕ್ಯೂಮ್‌ನ ಲೈವ್ ಕ್ಯಾಮೆರಾ ಬಳಸಿ ಆಕೆಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ. ಆ ದೃಶ್ಯಗಳಿಂದ ಸಿವಿಲ್ ಪ್ರಕರಣದಲ್ಲಿ ಪರಿಹಾರ ಪಡೆದರೂ, ಅನುಮತಿಯಿಲ್ಲದೆ ರೆಕಾರ್ಡ್ ಮಾಡಿದ ಆರೋಪದಲ್ಲಿ ಆತನಿಗೆ 5 ತಿಂಗಳ ಜೈಲು ಮತ್ತು ದಂಡ ವಿಧಿಸಲಾಗಿದೆ.

Read Full Story

07:26 AM (IST) Aug 28

ಎಲ್ಲಾ ತ್ಯಾಗಕ್ಕೆ ನಾಗೇಂದ್ರ ಸಿದ್ಧ, ಆತ ಪಕ್ಷನಿಷ್ಠ ನಾಯಕ: ಡಿಕೆಶಿ

ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದಾರೆ. ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

 

Read Full Story

07:25 AM (IST) Aug 28

65 ತೆರಿಗೆ ಸಂಗ್ರಾಹಕರು, ಗುಮಾಸ್ತರು, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ

ರಾಯಚೂರು ಜಿಲ್ಲಾ ಪಂಚಾಯತ್, ತೆರಿಗೆ ಸಂಗ್ರಾಹಕ ಮತ್ತು ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಒಟ್ಟು 65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

 

Read Full Story

07:25 AM (IST) Aug 28

ಇಂದು ಅರ್ಧ ಬೆಂಗಳೂರಿಗೆ ನೀರಿನ ಪೂರೈಕೆ ಸ್ಥಗಿತ

ಕಾವೇರಿ ನೀರು ಸರಬರಾಜು ಯೋಜನೆಯ ಮುಖ್ಯ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿಯಿಂದಾಗಿ ಆ.28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಲಮಂಡಳಿಯು ಸುಮಾರು 8 ಗಂಟೆಗಳ ಕಾಲ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಿದ್ದು, ಸಾರ್ವಜನಿಕರು ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಿದೆ.

 

Read Full Story

07:25 AM (IST) Aug 28

ತರಬೇತಿ ವಿಮಾನ ಪತನ : ಕನ್ನಡಿಗ ಸೇರಿ ಇಬ್ಬರು ಪೈಲಟ್‌ಗಳು ಸಾವು

ಕಾನ್ಪುರದ ಬಳಿ ತರಬೇತಿ ವಿಮಾನವೊಂದು ಪತನಗೊಂಡು ಕನ್ನಡಿಗ ಪೈಲಟ್ ಅಭಿಷೇಕ್ ಪೂಜಾರಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಗಾರ್ಗ್ ಏವಿಯೇಷನ್‌ಗೆ ಸೇರಿದ ಟೆಕ್ನಾಮ್ ಪಿ2006ಟಿ ವಿಮಾನವು ಟೇಕ್ ಆಫ್ ಆದ 20 ನಿಮಿಷಗಳಲ್ಲಿ ಈ ದುರ್ಘಟನೆ ಸಂಭವಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

 

Read Full Story

07:24 AM (IST) Aug 28

ಮೈಸೂರು ರೈಲ್ವೆ ವಿಭಾಗಕ್ಕೆ ಅ.1ಕ್ಕೆ ಮಂಗ್ಳೂರು ಸೇರ್ಪಡೆ; ರೈಲ್ವೆ ಮಂಡಳಿ ನಿರ್ಧಾರದಲ್ಲಿಲ್ಲ ಬದಲಾವಣೆ

ಕೇರಳದ ತೀವ್ರ ವಿರೋಧದ ನಡುವೆಯೂ, ರೈಲ್ವೆ ಮಂಡಳಿಯು ಮಂಗಳೂರನ್ನು ಮೈಸೂರು ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರ್ಪಡೆಗೊಳಿಸಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ನಿರ್ಧಾರವು ಆಡಳಿತಾತ್ಮಕ ಸುಧಾರಣೆಯಾಗಿದ್ದು, ಕರ್ನಾಟಕಕ್ಕೆ ಅನುಕೂಲಕರವಾಗಿದೆ ಎಂದು ಮಂಡಳಿ ಹೇಳಿದೆ.

 

Read Full Story

More Trending News