Published : Jun 09, 2025, 07:44 AM ISTUpdated : Jun 10, 2025, 04:04 AM IST

Karnataka News Live: ಇಂದು ಸಿಎಂ ಸಿದ್ದು ದಿಲ್ಲಿಗೆ । ಸಂಪುಟಕ್ಕೆ ಮೇಜರ್‌ ಸರ್ಜರಿ? 8 ರಿಂದ 10 ಸಚಿವರಿಗೆ ಕೊಕ್? -

ಸಾರಾಂಶ

ಬೆಂಗಳೂರು (ಜೂ.09): ಸಿಲಿಕಾನ್ ಸಿಟಿ ಬೆಂಗಳೂರು ಸಂಡೇ ಮೂಡ್‌ನ ಮಧ್ಯೆ, ನೂತನ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ನಗರದ ಪೊಲೀಸ್ ಅಧಿಕಾರಿಗಳನ್ನು ಒಟ್ಟಿಗೆ ಕರೆದು ಸಭೆ ನಡೆಸುವ ಮೂಲಕ ಶಾಕ್ ನೀಡಿದ್ದಾರೆ. ಡಿಸಿಪಿ ಮಟ್ಟದಿಂದ ಹಿಡಿದು ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳವರೆಗೆ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಮಿಷನರ್ ಮಾಡಿ ಕಠಿಣ ಸಂದೇಶ ರವಾನಿಸಿದ್ದಾರೆ.

ಈ ಸಭೆಯಲ್ಲಿ ಪ್ರಮುಖ ಅಂಶಗಳಾಗಿ ಅಪರಾಧ ಪ್ರಕರಣಗಳ ಸ್ಥಿತಿ, ಸೈಬರ್ ಕ್ರೈಂ ನಿಯಂತ್ರಣ, ಮಾದಕ ವಸ್ತುಗಳ ಜಾಲ ವಿಸ್ಥಾರ, ಮತ್ತು ಇತ್ತೀಚಿನ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಅವ್ಯವಸ್ಥೆಯ ಬಗ್ಗೆ ವಿಮರ್ಶಾತ್ಮಕ ಚರ್ಚೆ ನಡೆಯಲಿದೆಯೆಂದು ಮೂಲಗಳು ತಿಳಿಸಿವೆ. ನೂತನ ಕಮಿಷನರ್ ಸೀಮಂತ್ ಕುಮಾರ್ ಅವರ ಈ ಮೊದಲ ಮ್ಯಾರಥಾನ್ ಮೀಟಿಂಗ್, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಿಗಿತವಾಗುವ ನಿರೀಕ್ಷೆಯ ಹೊರೆಯನ್ನು ಹೆಚ್ಚಿಸಿದೆ. 

ನಗರದಲ್ಲಿ ರೌಡಿ ಪ್ರಕರಣ, ಗ್ಯಾಂಬ್ಲಿಂಗ್, ಮಟ್ಕಾ, ಬೆಟ್ಟಿಂಗ್ ಕಂಟ್ರೋಲ್ ಮಾಡಬೇಕು. ಮುಖ್ಯವಾಗಿ ರಿಯಲ್ ಎಸ್ಟೇಟ್ ಸೆಟಲ್ ಮೆಂಟ್ ಆದರೆ ಕ್ರಮ ತೆಗೆದುಕೊಳ್ತೇನೆ ಎಂದು ಸೂಚನೆ ನೀಡಿದರು.

04:04 AM (IST) Jun 10

ಇಂದು ಸಿಎಂ ಸಿದ್ದು ದಿಲ್ಲಿಗೆ । ಸಂಪುಟಕ್ಕೆ ಮೇಜರ್‌ ಸರ್ಜರಿ? 8 ರಿಂದ 10 ಸಚಿವರಿಗೆ ಕೊಕ್? -

ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ಸರ್ಕಾರದ ಇಮೇಜ್‌ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ದಿಸೆಯಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್‌ ಗಾಂಧಿ ಚರ್ಚೆ ನಡೆಸಲಿದ್ದಾರೆ.

Read Full Story

11:13 PM (IST) Jun 09

ಕೇರಳ ತೀರದಲ್ಲಿ ಸಿಂಗಾಪುರ ಹಡಗಿಗೆ ಬೆಂಕಿ, 18 ಸಿಬ್ಬಂದಿ ರಕ್ಷಿಸಿದ ಭಾರತೀಯ ನೌಕಾಪಡೆ

ಶ್ರೀಲಂಕಾದಿಂದ ಮುಂಬೈಗೆ ಆಗಮಿಸುತ್ತಿದ್ದ ಸಿಂಗಾಪುರ ಮೂಲದ ಸರಕು ಹಡಗು ಕೇರಳ ತೀರದಲ್ಲಿ ಅಗ್ನಿ ದುರಂತಕ್ಕೆ ಗುರಿಯಾಗಿದೆ. ಸ್ಥಳಕ್ಕೆ ಧಾವಿಸಿದ ಭಾರತೀಯ ನೌಕಾಪಡೆ 22 ಸಿಬ್ಬಂದಿ ಪೈಕಿ 18 ಮಂದಿ ರಕ್ಷಿಸಿದ್ದಾರೆ. ನಾಲ್ಪರು ನಾಪತ್ತೆಯಾಗಿದ್ದಾರೆ.

Read Full Story

10:31 PM (IST) Jun 09

ಗುಡ್‌ನ್ಯೂಸ್‌ ಕೊಟ್ಟ Lakshmi Baramma Serial ನಟಿ ರಶ್ಮಿ ಪ್ರಭಾಕರ್!‌ ಶುಭಾಶಯ ತಿಳಿಸಿದ ಸೆಲೆಬ್ರಿಟಿಗಳು!

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ನಟಿಸಿದ್ದ ನಟಿ ರಶ್ಮಿ ಪ್ರಭಾಕರ್‌ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Read Full Story

10:30 PM (IST) Jun 09

ಶಾಸಕ ಲಕ್ಷ್ಮಣ ಸವದಿ ಸಂಚರಿಸುತ್ತಿದ್ದ ಕಾರು ಅಪಘಾತ, ಪಿಕ್ಅಪ್ ವಾಹನ ಡಿಕ್ಕಿ

ಶಾಸಕ ಲಕ್ಷ್ಮಣ ಸವದಿ ಸಂಚರಿಸುತ್ತಿದ್ದ ಕಾರಿಗೆ ಪಿಕ್ ಅಪ್ ವಾಹನ ಡಿಕ್ಕಿಯಾದ ಘಟನೆ ನಡೆದಿದೆ. ಮುಖಾಮುಖಿ ಡಿಕ್ಕಿಯಿಂದ ಶಾಸಕರ ಕಾರು ಜಖಂಗೊಂಡಿದೆ.

Read Full Story

10:27 PM (IST) Jun 09

ಭವಿಷ್ಯದಲ್ಲಿ ಭಾರತವು ಜಾಗತಿಕ ಉತ್ಪಾದನಾ ಹಬ್‌ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತದಲ್ಲಿ ಉತ್ಪಾದನಾ ವಲಯಕ್ಕೆ ಪೂರಕ ಪರಿಸರ, ಸಂಪನ್ಮೂಲ ಮತ್ತು ಸಶಕ್ತ ಯುವ ಸಮೂಹವಿದ್ದು, ಭವಿಷ್ಯದಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್‌ ಆಗಿ ಪರಿವರ್ತನೆ ಹೊಂದಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

Read Full Story

10:18 PM (IST) Jun 09

ಕಾಲ್ತುಳಿತ ಘಟನೆಯಿಂದ ಸಿಎಂ ಬಹಳ ನೊಂದಿದ್ದಾರೆ - ಸಚಿವ ಡಾ.ಎಂ.ಸಿ.ಸುಧಾಕರ್

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ, ನಮಗೆಲ್ಲಾ ಬಹಳ ದುಃಖವಾಗಿದೆ. ಮುಖ್ಯಮಂತ್ರಿಗಳಂತೂ ಬಹಳ ನೋವು ತಿಂದಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

Read Full Story

10:02 PM (IST) Jun 09

ಚಾಮರಾಜನಗರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಗಲಾಟೆಯಿಂದ ಅಡ್ಮಿಷನ್ ಶೂನ್ಯ - ವರದಿ ಬಳಿಕ 12 ವಿದ್ಯಾರ್ಥಿಗಳ ಹಾಜರಿ

ಅದು ಗಡಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ.ಇಬ್ಬರು ಶಿಕ್ಷಕರಿದ್ದರು,ಇವರಿಬ್ಬರ ಕಿತ್ತಾಟಕ್ಕೆ ಬೇಸತ್ತಿದ್ದ ಗ್ರಾಮಸ್ಥರು ಈ ಬಾರಿ ಮಕ್ಕಳನ್ನು ಅಡ್ಮಿಷನ್ ಮಾಡಲೂ ಹಿಂದೇಟು ಹಾಕಿದ್ದರು.

Read Full Story

09:58 PM (IST) Jun 09

ಭಾರತೀಯ ನೌಕಾಪಡೆ ಪೈಲೆಟ್ ಆಗಿ ಆಯ್ಕೆಯಾದ ಉಡುಪಿಯ ಕುವರಿ ಸೀಮಾ ತೆಂಡೂಲ್ಕರ್

ಉಡುಪಿಯ ಪೆರ್ಣಂಕಿಲ ಗ್ರಾಮದ ಹಳ್ಳಿ ಹುಡುಗಿ ಇದೀಗ ಭಾರತೀಯ ನೌಕಾಪಡೆಯ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ. ಎಂಜಿನಿಯರಿಂಗ್ ಪದವಿ ಪೂರೈಸಿರುವ ಸೀಮಾ ನೌಕಾಪಡೆಯ ಪೈಲೆಟ್ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Read Full Story

09:51 PM (IST) Jun 09

ಸಿಎಂ ಪಟಲಾಂ ಮಾಡಿದ ತಪ್ಪಿಗೆ ಅಮಾಯಕರ ಜೀವ ಹೋಗಿದೆ - ಕೇಂದ್ರ ಸಚಿವ ಸೋಮಣ್ಣ ಆರೋಪ

ಸಿಎಂ ಪಟಲಾಂ ಮಾಡಿದ ಎಡವಟ್ಟಿನಿಂದ ಅಮಾಯಕರ ಜೀವ ಹೋಗಿದೆ. ಸಿದ್ದರಾಮಯ್ಯ ಅವರಿಂದ ಇಂತಹ ದುರಾಡಳಿತ ನಿರೀಕ್ಷಿಸಿರಲಿಲ್ಲ. ಈಗಲಾದರೂ ಘಟನೆಯ ಹೊಣೆ ಹೊತ್ತುಕೊಳ್ಳಿ ಎಂದು ವಿ.ಸೋಮಣ್ಣ ಆಗ್ರಹಿಸಿದರು.

Read Full Story

09:37 PM (IST) Jun 09

9 ಸಾವಿರ ಬೇಕೋ, ನಾನು ಬೇಕೊ? ಆಫರ್​ ಕೊಟ್ಟ ಚೆಲುವೆ! ಯುವಕನ ಉತ್ತರಕ್ಕೆ ಶ್ಲಾಘನೆಗಳ ಮಹಾಪೂರ

ವಿದೇಶಿ ಯುವತಿಯೊಬ್ಬಳು 9 ಸಾವಿರ ರೂಪಾಯಿ ಅಥ್ವಾ ತನ್ನ ಜೊತೆ ಡೇಟಿಂಗ್​ ಆಫರ್​ ಕೊಟ್ಟಾಗ ಈ ಯುವಕ ಮಾಡಿದ್ದೇನು ನೋಡಿ! ಉತ್ತರ ಕೇಳಿ ಸುಸ್ತಾದ ಬೆಡಗಿ

Read Full Story

09:27 PM (IST) Jun 09

ಅಬ್ಬಬ್ಬಾ... ಮಹಿಳೆಯ ಪಿತ್ತಕೋಶದಿಂದ 861 ಕಲ್ಲು ಹೊರಕ್ಕೆ - ಮೈಸೂರು ವೈದ್ಯರ ಸಾಧನೆ

ನಗರದ ಕಾವೇರಿ ಹಾರ್ಟ್‌ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ 55 ವರ್ಷದ ಮಹಿಳೆಯೊಬ್ಬರ ಪಿತ್ತಕೋಶದಿಂದ 861 ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

Read Full Story

09:08 PM (IST) Jun 09

ಭಾರತೀಯ ಗಗನಯಾತ್ರಿ ಬಾಹ್ಯಾಕಾಶ ಯಾತ್ರೆ Axiom-4 ಉಡಾವಣೆ ದಿಢೀರ್ ರದ್ದು

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಕೈಗೊಳ್ಳಬೇಕಿದ್ದ ಬಾಹ್ಯಾಕಾಶ ಯಾತ್ರೆ ದಿಢೀರ್ ರದ್ದಾಗಿದೆ. Axiom-4 ಉಡಾವಣೆ ರದ್ದಾಗಿರುವ ಕುರಿತು ಇಸ್ರೋ ಸ್ಪಷ್ಟಪಡಿಸಿದೆ.

Read Full Story

08:45 PM (IST) Jun 09

Honeymoon case - ರಿಟರ್ನ್ ಟಿಕೆಟ್‌ ಮಾಡದೇ ಸುಳಿವು ನೀಡಿದ ಹಂತಕಿ! 'ಬಾ ನಲ್ಲೆ ಮಧುಚಂದ್ರಕೆ' ಪಾರ್ಟ್​-2

ಪತಿಯನ್ನು ಹನಿಮೂನ್​ಗೆ ಕರೆದೊಯ್ದು ಅಲ್ಲಿಯೇ ಆತನನ್ನು ಮುಗಿಸಿದ ಹಂತಕಿ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾದ ರೀತಿಯಲ್ಲಿಯೇ ಸಿಕ್ಕಿಬಿದ್ದಿದ್ದಾಳೆ! ಏನದು?

Read Full Story

08:23 PM (IST) Jun 09

ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಕಟ್ಟಿದ್ದು ಹ್ಯುಬ್ಲೋಟ್ ವಾಚ್, ಇದರ ಬೆಲೆ ಎಷ್ಟು ಗೊತ್ತಾ?

ಉದ್ಯಮಿ ವಿಜಯ್ ಮಲ್ಯ ಆಸ್ತಿಗಳೆಲ್ಲವು ಮುಟ್ಟುಗೋಲಾಗಿದೆ.  ವಿದೇಶಗಳಲ್ಲಿರುವ ಉದ್ಯಮಗಳಿಂದ ಕೋರ್ಟ್, ಕೇಸ್ ನಡೆಸುತ್ತಿದ್ದಾರೆ. ಆದರೆ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಕಟ್ಟಿದ ವಾಚ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕಾರಣ ಇದು ಲಿಮಿಟೆಡ್ ಎಡಿಶನ್ ಹ್ಯುಬ್ಲೋಟ್ ವಾಚ್, ಇದರ ಬೆಲೆ ಎಷ್ಟು ಗೊತ್ತಾ?

Read Full Story

07:51 PM (IST) Jun 09

ಮೆಟಾದಲ್ಲಿ ಕೋಟಿ ಸಂಬಳ ಪಡೆಯುತ್ತಿದ್ದ ವ್ಯಕ್ತಿ ಈಗ ಫುಡ್‌ ಡೆಲಿವರಿ ಬಾಯ್‌!

ಮೆಟಾವರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ 1.28 ಕೋಟಿ ರೂ. ವೇತನದ ಸಾಫ್ಟ್‌ವೇರ್ ಎಂಜಿನಿಯರ್ ಈಗ ಫುಡ್‌ ಡೆಲಿವರಿ ಮಾಡುತ್ತಿದ್ದಾರೆ. AI ಉದ್ಯೋಗ ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.
Read Full Story

07:38 PM (IST) Jun 09

ದಿನಕ್ಕೆ 7000 ಹೆಜ್ಜೆ ನಡಿಗೆ - ತೂಕ ಇಳಿಕೆ, ಶುಗರ್ ನಿಯಂತ್ರಣಕ್ಕೆ ಸೂಪರ್

ದಿನಾ 7,000 ಹೆಜ್ಜೆ ನಡೆಯೋದ್ರಿಂದ ಆಗೋ ಅದ್ಭುತ ಬದಲಾವಣೆಗಳ ಬಗ್ಗೆ ತಿಳ್ಕೊಳ್ಳಿ.

Read Full Story

07:36 PM (IST) Jun 09

ದಿನ 3ಜಿಬಿ ಡೇಟಾ, ಜಿಯೋಹಾಟ್‌ಸ್ಟಾರ್ ಸೇರಿ 17 ಒಟಿಟಿ ಉಚಿತ, ವಿಐ -ವಿವೋ V50e ಜಂಟಿ ಆಫರ್

ಪ್ರತಿ ದಿನ 3 ಜಿಬಿ ಡೇಟಾ ಉಚಿತ, ಜಿಯೋಹಾಟ್‌ಸ್ಟಾರ್ ಸೇರಿ 17 ಒಟಿಟಿ ಉಚಿತ, 350 ಲೈವ್ ಟಿವಿ ಸಬ್‌ಸ್ಕ್ರಿಪ್ಶನ್, ಅನ್‌ಲಿಮಿಟೆಡ್ ಕಾಲ್, 100 ಎಸ್ಎಂಎಸ್ ಸೇರಿದಂತೆ ಹಲವು ಆಫರ್ ಘೋಷಣೆಯಾಗಿದೆ. ಇದು ವಿವೋ V50e ಹಾಗೂ ವಿಐ ಜಂಟಿಯಾಗಿ ಘೋಷಿಸಿದ ಆಫರ್

Read Full Story

07:15 PM (IST) Jun 09

ಅಪ್ರಾಪ್ತ ವಿದ್ಯಾರ್ಥಿ ಜೊತೆ ಕ್ಲಾಸ್‌ರೂಮ್‌ನಲ್ಲೇ ಸೆ*ಕ್ಸ್‌, ಶಿಕ್ಷಕಿ ಅರೆಸ್ಟ್‌!

ಫ್ಲೋರಿಡಾದಲ್ಲಿ 27 ವರ್ಷದ ಶಿಕ್ಷಕಿಯೊಬ್ಬರು ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಾರೆ. ತಿಂಗಳುಗಟ್ಟಲೆ ನಡೆದ ಈ ಸಂಬಂಧವು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಶಿಕ್ಷಕಿಯನ್ನು ಬಂಧಿಸಲಾಗಿದೆ.
Read Full Story

06:52 PM (IST) Jun 09

ಕರ್ನಾಟಕದಲ್ಲಿ ಇದೇ ಮೊದಲು, ಮಂಗಳೂರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ, ಬಳಸಿದ ಕಸವೆಷ್ಟು?

ಮಂಗಳೂರಿನಲ್ಲಿ 1.70ಲಕ್ಷ ಕಿಲೋಗ್ರಾಂ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಕಡಿಮೆ ಸಾಂದ್ರತೆಯ ಪಾಲಿಥಿಲೀನ್  ಪ್ಲಾಸ್ಟಿಕ್ ಅನ್ನು ನಾಲ್ಕು MRF ಘಟಕಗಳಿಂದ ಸಂಗ್ರಹಿಸಿ, ತಲಪಾಡಿ–ನಂತೂರು ಮತ್ತು ಸುರತ್ಕಲ್–ಸಾಸ್ತಾನ ನಡುವಿನ ಸೇವಾ ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ.

Read Full Story

06:40 PM (IST) Jun 09

ಬಿಜೆಪಿ, ಮೋದಿಯಿಂದ ದೇಶ ಒಗ್ಗಟ್ಟಾಗಿಲ್ಲ - ಸಚಿವ ಎಚ್.ಸಿ.ಮಹದೇವಪ್ಪ

ಬಿಜೆಪಿ, ಮೋದಿಯಿಂದ ದೇಶ ಒಗ್ಗಟ್ಟಾಗಿಲ್ಲ. ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ದೇಶ ಒಗ್ಗಟ್ಟಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

Read Full Story

06:30 PM (IST) Jun 09

ಇದು ಮೆಘಾಲಯ ಅಲ್ಲ ಸಿಕ್ಕಿಂ ಹನಿಮೂನ್ ದುರಂತ, ನಾಪತ್ತೆಯಾಗಿ 11 ದಿನವಾದ್ರೂ ನವ ಜೋಡಿ ಸುಳಿವಿಲ್ಲ

ಸಿಕ್ಕಿಂಗೆ ಹನಿಮೂನ್ ತೆರಳಿದ ನವ ಜೋಡಿಯ ದುರಂತ ಕತೆ. ಮದುವೆಯಾದ ಕೆಲವೇ ದಿನಗಳಲ್ಲಿ ಸಿಕ್ಕಿಂ ತಲುಪಿದ ಈ ಜೋಡಿ ನಾಪತ್ತೆಯಾಗಿ 11 ದಿನಗಳು ಉರುಳಿದೆ. ಪೋಷಕರು, ಕುಟುಂಬಸ್ಥರು ಸಿಕ್ಕಿಂಗೆ ತೆರಳಿ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದಾರೆ.ಆದರೆ ಇದುವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಏನಿದು ಘಟನೆ?

Read Full Story

06:29 PM (IST) Jun 09

ಚಿಕ್ಕಮಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ - ಸಚಿವ ಸತೀಶ್‌ ಜಾರಕಿಹೊಳಿ ಭರವಸೆ

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಈ ಜಿಲ್ಲೆಯಲ್ಲಿ ಭಾರತದ ಭೂಪಟದಲ್ಲಿ ಗುರುತಿಸುವ ಕೆಲಸ ಮಾಡುವುದಾಗಿ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದರು.

Read Full Story

06:24 PM (IST) Jun 09

ಉದ್ಧದ ಚಾಕು ನುಂಗಿ ವಿಲವಿಲ ಒದ್ದಾಡಿದ ನಾಗರಹಾವು, ಬದುಕಿದ್ದೇ ಪವಾಡ!

ಕುಮಟಾದಲ್ಲಿ ನಾಗರಹಾವು ಒಂದು ಚಾಕುವನ್ನು ನುಂಗಿ ಒದ್ದಾಡುತ್ತಿತ್ತು. ಉರಗ ತಜ್ಞರ ಸಮಯಪ್ರಜ್ಞೆಯಿಂದ ಹಾವಿನ ಹೊಟ್ಟೆಯಿಂದ ಚಾಕುವನ್ನು ಹೊರತೆಗೆದು, ಹಾವಿಗೆ ಪವಾಡಸದೃಶ ರಕ್ಷಣೆ ನೀಡಲಾಯಿತು.
Read Full Story

06:08 PM (IST) Jun 09

ಟಾಟಾ ಮೋಟಾರ್ಸ್‌ನಿಂದ 30 ಹೊಸ ಉತ್ಪನ್ನ ಜೊತೆಗೆ EVಗೆ ಒತ್ತು, ಬರೋಬ್ಬರಿ 35000 ಕೋಟಿ ರೂ ಹೂಡಿಕೆ!

ಟಾಟಾ ಮೋಟಾರ್ಸ್  ₹33,000-₹35,000 ಕೋಟಿ ಹೂಡಿಕೆ ಮಾಡಲಿದೆ. ಈ ಹೂಡಿಕೆಯು 30 ಹೊಸ ಉತ್ಪನ್ನಗಳನ್ನು ಒಳಗೊಂಡಿದೆ, ಜೊತೆಗೆ EV ಗಳ ಮೇಲೆ ಗಮನ ಹರಿಸಲಾಗಿದೆ. ಕಂಪನಿಯು FY27 ರ ವೇಳೆಗೆ ಪಿವಿ ಮಾರುಕಟ್ಟೆಯಲ್ಲಿ 16% ಪಾಲನ್ನು ಮತ್ತು EV ಮಾರಾಟದಲ್ಲಿ 20% ಪಾಲನ್ನು ಗುರಿಯಾಗಿಸಿಕೊಂಡಿದೆ.

Read Full Story

06:01 PM (IST) Jun 09

ರಾಜ್ಯ ಸರ್ಕಾರದಿಂದ ತಂಡಕ್ಕೆ ಮುಜುಗರ, ಬೆಂಗಳೂರಿಗೆ ಗುಡ್‌ಬೈ ಹೇಳುತ್ತಾ ಆರ್‌ಸಿಬಿ ಫ್ರಾಂಚೈಸಿ?

ಐಪಿಎಲ್‌ ಟ್ರೋಫಿ ಗೆದ್ದ ಸಂಭ್ರಮದಲ್ಲಿ ನಡೆದ ಅವಘಡದಿಂದ ಆರ್‌ಸಿಬಿ ಮುಜುಗರಕ್ಕೆ ಒಳಗಾಗಿದೆ. ರಾಜ್ಯ ಸರ್ಕಾರದ ಕ್ರಮದಿಂದ ಬೇಸತ್ತ ಆರ್‌ಸಿಬಿ ತನ್ನ ನೆಲೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
Read Full Story

05:32 PM (IST) Jun 09

ಬೆಂಗಳೂರಿನಲ್ಲಿ ಬ್ರೈನ್ ಟ್ಯೂಮರ್‌ ಪ್ರಕರಣ ದಿನದಿಂದ ದಿನಕ್ಕೆ ಏರಿಕೆ! ವೈದ್ಯರಿಂದ ಬಹಿರಂಗ

ಬೆಂಗಳೂರಿನಲ್ಲಿ ಮೆದುಳಿನ ಗೆಡ್ಡೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇದು ಹೆಚ್ಚಿದ ಜಾಗೃತಿ ಮತ್ತು ಸುಧಾರಿತ ತಂತ್ರಜ್ಞಾನದಿಂದಾಗಿ. ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಸಾಧ್ಯ.
Read Full Story

04:48 PM (IST) Jun 09

ಕೆಆರ್‌ಎಸ್‌ ಅಣೆಕಟ್ಟಿನ ಬಳಿ 33 ಫೀಟ್‌ ಎತ್ತರದ ಕಾವೇರಿ ಕಂಚಿನ ಪ್ರತಿಮೆಗೆ ಟೆಂಡರ್‌ ಕರೆದ ರಾಜ್ಯ ಸರ್ಕಾರ!

ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ಬಳಿ 33 ಫೀಟ್‌ ಎತ್ತರದ ಕಾವೇರಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಟೆಂಡರ್‌ ಕರೆದಿದೆ. ಈ ಯೋಜನೆಯು ಪ್ರಸ್ತಾವಿತ ಎಂಟರ್‌ಟೇನ್‌ಮೆಂಟ್‌ ಪಾರ್ಕ್‌ನ ಭಾಗವಾಗಿದ್ದು, ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
Read Full Story

04:45 PM (IST) Jun 09

ಬಾಂಗ್ಲಾ ಶೇಕ್ ಹಸೀನಾ ವಿರೋಧಿ ವಿದ್ಯಾರ್ಥಿ ಪ್ರತಿಭಟನೆ ನಾಯಕನಲ್ಲಿ ಬಂಗಾಳದ ವೋಟರ್ ಐಡಿ

ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮೂಲಕ ಶೇಕ್ ಹಸೀನಾ ಸರ್ಕಾರವನ್ನು ಉರುಳಿಸಿದ ನಾಯಕ ನ್ಯೂಟನ್ ದಾಸ್, ಭಾರತದ ಪಶ್ಚಿಮ ಬಂಗಾಳದಲ್ಲಿ ಯಾರು ಅಧಿಕಾರಕ್ಕೆ ಬರಬೇಕು ಅನ್ನೋದನ್ನು ನಿರ್ಧರಿಸುತ್ತಾನೆ. ಇದು ನಿಜ, ಈತ ಬಾಂಗ್ಲಾದೇಶದ ಪ್ರಜೆ, ಆದರೆ ಪಶ್ಚಿಮ ಬಂಗಾಳದ ಮತದಾರರ ಗುರುತಿನ ಚೀಟಿಯೂ ಈತನಲ್ಲಿದೆ.

Read Full Story

04:39 PM (IST) Jun 09

ಟೀಂ ಇಂಡಿಯಾ ತವರಿನ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬಿಸಿಸಿಐ ತವರಿನ ಸರಣಿಯ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳ ಸ್ಥಳಗಳನ್ನು ಬದಲಾಯಿಸಲಾಗಿದೆ. ಮಹಿಳಾ ಕ್ರಿಕೆಟ್ ಪಂದ್ಯಗಳ ಸ್ಥಳಗಳಲ್ಲೂ ಬದಲಾವಣೆಗಳಾಗಿವೆ.
Read Full Story

04:12 PM (IST) Jun 09

ಹನಿಮೂನ್ ಹತ್ಯೆ ಪ್ರಕರಣ, ಮದುವೆಯಲ್ಲೇ ಸೂಚನೆ ನೀಡಿದ್ಲಾ ಸೋನಮ್, ವಿಡಿಯೋ ಸುಳಿವು

ಮೆಘಾಲಯದ ಹನಿಮೂನ್ ಸಂಭ್ರಮದಲ್ಲಿ ಹತ್ಯೆಯಾದ ಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಪತ್ನಿ ಸೋನಮ್ ಆಕೆಯ ಗೆಳೆಯ ಅರೆಸ್ಟ್ ಆಗಿದ್ದಾರೆ.ಆದರೆ ಕುಟುಂಬಸ್ಥರು ಸ್ವಲ್ಪ ಗಮನಿಸಿದರೆ ಈ ಹತ್ಯೆ ತಪ್ಪಿಸಬಹುದಿತ್ತು. 

Read Full Story

04:09 PM (IST) Jun 09

ಮುಖೇಶ್ ಅಂಬಾನಿ ಮಗಳು ಇಶಾ ಫಸ್ಟ್ ಜಾಬ್ ರಿವೀಲ್! ರಿಲಯನ್ಸ್ ರೀಟೇಲ್‌ಗೆ ಸಕ್ಸಸ್ ಸಿಕ್ಕಿದ್ದೇಗೆ?

ಇಶಾ ಅಂಬಾನಿ ಯಶಸ್ಸಿನ ಕಥೆ: ರಿಲಯನ್ಸ್ ಅಲ್ಲ, ಬೇರೆ ಕಂಪನಿಯಲ್ಲಿ ಕೆರಿಯರ್ ಶುರು ಮಾಡಿದ್ರು ಇಶಾ! ಭಾರತದ ಯುವ, ಯಶಸ್ವಿ ಉದ್ಯಮಿಯಾಗಿದ್ದು ಹೇಗೆ? ಇಡೀ ಕಥೆ, ಕೆರಿಯರ್-ವಿದ್ಯಾಭ್ಯಾಸದ ಕುತೂಹಲಕಾರಿ ಸಂಗತಿಗಳನ್ನು ಓದಿ.

Read Full Story

04:07 PM (IST) Jun 09

ಇಳಿಕೆಯ ಹಾದಿ ಹಿಡಿದ ಬಂಗಾರ, ಚಿನ್ನದ ಬೆಲೆ ಕುಸಿತಕ್ಕೆ ಕಾರಣವೇನು, ಎಷ್ಟಾಗಬಹುದು ಬೆಲೆ?

ಜಾಗತಿಕ ಆರ್ಥಿಕ ಚೇತರಿಕೆಯ ಸೂಚನೆಗಳ ನಡುವೆ ಭಾರತದಲ್ಲಿ ಚಿನ್ನದ ಬೆಲೆಗಳು ಕುಸಿದಿವೆ. ಅಮೆರಿಕದ ಬಲವಾದ ಆರ್ಥಿಕ ದತ್ತಾಂಶ ಮತ್ತು ಯುಎಸ್-ಚೀನಾ ವ್ಯಾಪಾರ ಮಾತುಕತೆಗಳ ಆಶಾವಾದದಿಂದಾಗಿ ಚಿನ್ನದ ಬೆಲೆ ಕುಸಿತ ಕಂಡಿದೆ.
Read Full Story

03:45 PM (IST) Jun 09

ಇದೇ ಮೊದಲು, ಇನ್ಫೋಸಿಸ್‌ ನಿಂದ ಹೊಸ ನಗದು ಪ್ರೋತ್ಸಾಹ ಯೋಜನೆ! ಲೇ ಆಫ್‌ ಕಥೆಯೇನು?

ಇನ್ಫೋಸಿಸ್ ಲ್ಯಾಟರಲ್ ನೇಮಕಾತಿಯಲ್ಲಿ ಉದ್ಯೋಗಿಗಳ ಭಾಗವಹಿಸುವಿಕೆಗೆ ನಗದು ಪ್ರೋತ್ಸಾಹ ಘೋಷಿಸಿದೆ. ಪ್ರತಿ ಸಂದರ್ಶನಕ್ಕೆ ರೂ.700 ನೀಡಲಾಗುತ್ತದೆ. ಆದರೆ, ತರಬೇತಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಸುದ್ದಿಯೂ ಇದೆ.
Read Full Story

03:44 PM (IST) Jun 09

ಮಂತ್ರಿ ದೌಲತ್ತು ತೋರಿದ ದರ್ಶನಾಪುರ - ಕಾಲ್ತುಳಿತ ಸಂತ್ರಸ್ತ ಶಿವಲಿಂಗ ಕುಟುಂಬಕ್ಕೆ ಅವಮಾನ

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ಮೃತಪಟ್ಟ ಯಾದಗಿರಿಯ ಶಿವಲಿಂಗ ಕುಟುಂಬಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಡಿಸಿ ಕಚೇರಿಯಲ್ಲಿ 30 ನಿಮಿಷ ನಿಲ್ಲಿಸಿ ಪರಿಹಾರ ನೀಡಿದ್ದಾರೆ. ಇತರೆಡೆ ಸಂತ್ರಸ್ತರ ಮನೆಗೇ ತೆರಳಿ ಪರಿಹಾರ ನೀಡಿದ್ದರೆ, ಯಾದಗಿರಿಯಲ್ಲಿ ಮಾತ್ರ ಸಂತ್ರಸ್ತ ಕುಟುಂಬಕ್ಕೆ ಅಗೌರವ ತೋರಿದ್ದಾರೆ.

Read Full Story

03:29 PM (IST) Jun 09

70 ವರ್ಷ ಲೀವ್ ಇನ್ ರಿಲೇಶನ್‌ಶಿಪ್ ಬಳಿಕ 90 ಹರೆಯದ ಸಂಗಾತಿ ವರಿಸಿದ 95ರ ತಾತ

ಲೀವ್ ಇನ್ ರಿಲೇಶನ್‌ಶಿಪ್ ಯುವ ಸಮೂಹದ ಟ್ರೆಂಡ್ ಆಗಿ ಬದಲಾಗಿದೆ. ಆದರೆ ಈ ಟ್ರೆಂಡ್ ಅಲ್ಲ ಯೋಚನೆ ಮಾಡುವ ಮೊದಲೇ ಇವರಿಬ್ಬರು ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಬರೋಬ್ಬರಿ 70 ವರ್ಷ ಬಳಿಕ ಇದೀಗ ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಿದೆ. ಗಂಡಿನ ವಯಸ್ಸು 95 ಹಾಗೂ ವಧು ವಯಸ್ಸು 90.

Read Full Story

03:27 PM (IST) Jun 09

ಮೋದಿ ಸೂಚನೆ ಬೆನ್ನಲ್ಲೇ ವೇಗ ಪಡೆದುಕೊಂಡ ಮೈಸೂರು-ಚೆನ್ನೈ ಬುಲೆಟ್ ರೈಲು ಯೋಜನೆ, ಮಾರ್ಕಿಂಗ್‌ ಶುರು!

ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು ಯೋಜನೆಯನ್ನು ಕೇಂದ್ರ ಸರ್ಕಾರ ಚುರುಕುಗೊಳಿಸಿದೆ. ಈ ಯೋಜನೆಯು ಮೂರು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಮತ್ತು ಗಂಟೆಗೆ 350 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.
Read Full Story

03:25 PM (IST) Jun 09

ಅಣ್ಣಾವ್ರ ಮನೆಯಲ್ಲಿ ಭಕ್ತನಾಗಿ ಧನ್ಯನಾದೆ… ಗಾಜನೂರಿನಲ್ಲಿ ರಾಜೇಶ್ ನಟರಂಗ

ಅಮೃತಧಾರೆಯಲ್ಲಿ ಗೌತಮ್ ದಿವಾನ್ ಆಗಿ ಮಿಂಚುತ್ತಿರುವ ನಟ ರಾಜೇಶ್ ನಟರಂಗ ಇತ್ತೀಚಿಗೆ ಗಾಜನೂರಿನಲ್ಲಿನ ಅಣ್ಣಾವ್ರ ಮನೆಗೆ ಭೇಟಿ ನೀಡಿ ಧನ್ಯತಾ ಭಾವವನ್ನು ಅನುಭವಿಸಿದ್ದಾರೆ.

Read Full Story

03:04 PM (IST) Jun 09

ಬೆಂಗಳೂರು, ಸ್ಯಾಟಲೈಟ್‌ ಟೌನ್‌ಗೆ RRTS ಕಾರಿಡಾರ್‌? ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಿದ NCRTC

ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು NCRTC ಬೆಂಗಳೂರಿನಿಂದ ಆರಂಭವಾಗುವ ನಾಲ್ಕು ಅರೆ-ಹೈ-ಸ್ಪೀಡ್ ನಮೋ ಭಾರತ್ ಕಾರಿಡಾರ್‌ಗಳನ್ನು ಪ್ರಸ್ತಾಪಿಸಿದೆ. ಈ ಕಾರಿಡಾರ್‌ಗಳು ಹೊಸಕೋಟೆ, ಕೋಲಾರ, ಮೈಸೂರು, ತುಮಕೂರು, ಹೊಸೂರು, ಕೃಷ್ಣಗಿರಿ ಮತ್ತು ಧರ್ಮಪುರಿಯನ್ನು ಸಂಪರ್ಕಿಸುತ್ತವೆ.
Read Full Story

02:47 PM (IST) Jun 09

NEET PG 2025 - ಪರೀಕ್ಷಾ ದಿನಾಂಕ ಬದಲಾವಣೆ, ಆಗಸ್ಟ್ 3ಕ್ಕೆ ಒಂದೇ ಪಾಳಿಯಲ್ಲಿ ಪರೀಕ್ಷೆ

ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) NEET PG 2025 ಪರೀಕ್ಷೆಯನ್ನು ಆಗಸ್ಟ್ 3, 2025 ಕ್ಕೆ ಮುಂದೂಡಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಒಂದೇ ಶಿಫ್ಟ್‌ನಲ್ಲಿ ಪರೀಕ್ಷೆ ನಡೆಯಲಿದೆ.
Read Full Story

02:36 PM (IST) Jun 09

ಕಹೋ ನಾ ಪ್ಯಾರ್ ಹೈ ಬೆಡಗಿ ಅಮೀಶಾ ಪಟೇಲ್ ಡ್ರೆಸ್‌ಕೋಡ್; ಯಂಗ್ ಲುಕ್‌ಗೆ ಫಿದಾ ಆಗೋದು ಫಿಕ್ಸ್!

50ರ ಪ್ರಾಯದಲ್ಲೂ ಅಮೀಷಾ ಪಟೇಲ್ ಯುವತಿಯಂತೆ ಕಾಣುತ್ತಾರೆ. ಅವರ ಸ್ಟೈಲಿಶ್ ವೆಸ್ಟರ್ನ್ ಉಡುಪುಗಳಿಂದ ಸ್ಫೂರ್ತಿ ಪಡೆದು ನೀವೂ ಯಂಗ್ ಮತ್ತು ಗ್ಲಾಮರಸ್ ಆಗಿ ಕಾಣಬಹುದು. ರೆಡ್ ಗೌನ್ ನಿಂದ ಹಿಡಿದು ಶಾರ್ಟ್ಸ್ ವರೆಗೆ, ಅಮೀಷಾ ಅವರ ಪ್ರತಿಯೊಂದು ಲುಕ್ ನಿಂದಲೂ ಸ್ಟೈಲ್ ಟಿಪ್ಸ್ ಪಡೆಯಿರಿ.
Read Full Story

More Trending News