Published : May 09, 2026, 07:00 AM ISTUpdated : May 09, 2026, 11:16 PM IST

Karnataka News Live: ಪ್ರತಿ ದಿನ ಲೈಬ್ರರಿಯಲ್ಲಿ ಅಧ್ಯಯನ, IFS ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದ ರೈತನ ಮಗ

ಸಾರಾಂಶ

ಕೊಪ್ಪಳ: ಹೊಸ ಪಕ್ಷ ಕಟ್ಟುವ ಕುರಿತು ಈಗಲೇ ಏನು ಹೇಳಲು ಆಗದು, ರಾಜ್ಯಾದ್ಯಂತ ಸುತ್ತಾಟ ನಡೆಸಿ ಜನರ ಅಭಿಪ್ರಾಯ ಪಡೆದ ನಂತರ ಹೊಸ ಪಕ್ಷ ಕಟ್ಟುವ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಯಾರಾದರೂ ಸಿಎಂ ಆಗಲಿ ನಮಗೆ ಗೊತ್ತಿಲ್ಲ. ಆದರೆ, ಉತ್ತಮ ಆಡಳಿತ ಕೊಡಲಿ ಎಂದರು.

ಪಂಚಮಸಾಲಿ ಸಮುದಾಯದ ಎರಡೂ ಟ್ರಸ್ಟ್‌ಗಳಲ್ಲಿ ಭ್ರಷ್ಟರೇ ಇದ್ದಾರೆ. ಟ್ರಸ್ಟ್ ರಾಜಕೀಯೇತರ ಇರಬೇಕು. ರಾಜಕೀಯದಿಂದ ಕೂಡಿದ್ದರೆ ಹೀಗೆಯೇ ಆಗುವುದು. ಕೂಡಲಸಂಗಮ ಮತ್ತು ಹರಿಹರ ಪಂಚಮಸಾಲಿ ಟ್ರಸ್ಟ್‌ಗಳು ರದ್ದಾಗಬೇಕು ಎಂದರು.

ಐಪಿಎಲ್ ಟಿಕೆಟ್ ಕೇಳಿದ್ದರಿಂದ ಬೆಂಗಳೂರಿಂದ ಗುಜರಾತಿಗೆ ಫೈನಲ್ ಪಂದ್ಯ ಕಿತ್ತುಕೊಂಡು ಹೋಯಿತು. ತಮ್ಮ ಭಾಗದ ಸಮಸ್ಯೆ ಕೇಳದವರು ಐಪಿಎಲ್ ಟಿಕೆಟ್ ಕೇಳುತ್ತಾರೆ. ತಮ್ಮ ಕುಟುಂಬದವರಿಗೆ ಎಸಿ ಕುರ್ಚಿ ಕೇಳುತ್ತಾರೆ ಅಂದರೆ ಏನರ್ಥ? ಎಂದು ಕಿಡಿಕಾರಿದರು.

11:16 PM (IST) May 09

ಪ್ರತಿ ದಿನ ಲೈಬ್ರರಿಯಲ್ಲಿ ಅಧ್ಯಯನ, IFS ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದ ರೈತನ ಮಗ

ಕರ್ನಾಟಕದ ಸವದಿ ಗ್ರಾಮದ ಯುವಕನ ಸಾಧನೆಗೆ ದೇಶವೆ ಸಲಾಂ ಹೇಳಿದೆ. ಪ್ರತಿ ದಿನ ಲೈಬ್ರರಿಗೆ ತೆರಳಿ ಅಧ್ಯಯನ ಮಾಡುತ್ತಾ ಐಎಫ್ ಪರೀಕ್ಷೆ ಬರೆದ ರೈತನ ಮಗ, ಇದೀಗ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ.

Read Full Story

10:27 PM (IST) May 09

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್, ನಾಳೆ 2 ಗಂಟೆ ಸಂಚಾರ ಸ್ಥಗಿತ ಕುರಿತು ಮಹತ್ವದ ಪ್ರಕಟಣೆ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಮೆಟ್ರೋ ಸಂಚಾರ ಸ್ಥಗಿತ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದೆ. ಬಿಎಂಆರ್‌ಸಿಎಲ್ ಪ್ರಯಾಣಿಕರಿಗಾಗಿ ಹೊರಡಿಸಿದ ಹೊಸ ಆದೇಶ ಏನು?

Read Full Story

07:38 PM (IST) May 09

ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಕೋಲಾದ ವಿಶೇಷ ಕರಿ ಇಶಾಡ್ ಮಾವು, ರುಚಿಗೆ ಸಾಟಿಯೇ ಇಲ್ಲ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಬೆಳೆಯುವ ಕರಿ ಇಶಾಡ್ ವಿಶೇಷ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯಾವುದೇ ರಾಸಾಯನಿಕ ಬಳಸದ ಈ ಮಾವು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹೀಗಾಗಿ ಭಾರಿ ಬೇಡಿಕೆ ಇದೆ.

Read Full Story

07:38 PM (IST) May 09

ಉತ್ತರ ಕನ್ನಡದ ಆಗಸದಲ್ಲಿ ನಿಗೂಢ ವಿಮಾನ ಹಾರಾಟ, ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟನೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಕಡಿಮೆ ಎತ್ತರದ ವಿಮಾನ ಹಾರಾಟವು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಇದು ಖನಿಜ ಅನ್ವೇಷಣೆಗಾಗಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ನಡೆಸುತ್ತಿರುವ ವೈಜ್ಞಾನಿಕ ಸಮೀಕ್ಷೆಯಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
Read Full Story

07:15 PM (IST) May 09

ದೊಡ್ಮನೆ ಕುಡಿ ವಿನಯ್ ಮಾಚಿಸ್‌ನಿಂದ ಹಿಡಿದು ಪೃಥ್ವಿ‌ಅಂಬಾರ್ ಬುಲ್ ಡಾಗ್ ನಂದಗೋಕುಲದವರೆಗೆ - ಸ್ಯಾಂಡಲ್‌ವುಡ್‌ ಧಮಾಕಾ!

ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಅವರ ಹೊಸ ಚಿತ್ರ 'ಮಾಚಿಸ್' ಘೋಷಣೆಯಾಗಿದ್ದು, ಪೃಥ್ವಿ ಅಂಬಾರ್ ನಿರ್ದೇಶನದ 'ಬುಲ್‌ಡಾಗ್' ಚಿತ್ರೀಕರಣ ಪೂರ್ಣಗೊಳಿಸಿದೆ. ಇದರೊಂದಿಗೆ 'ಚಿಕ್ಕವರು ಕೋಣರಲ್ಲ' ಎಂಬ ಮಕ್ಕಳ ಚಿತ್ರ ಹಾಗೂ 'ನಂದಗೋಕುಲ' ಧಾರಾವಾಹಿಯ ಹೊಸ ಪ್ರಸಂಗಗಳು ಕನ್ನಡ ಮನರಂಜನಾ ಲೋಕದಲ್ಲಿ ಸದ್ದು ಮಾಡುತ್ತಿವೆ.
Read Full Story

06:28 PM (IST) May 09

ಶಾರದಾಂಬೆ To ಧರ್ಮಸ್ಥಳಕ್ಕೆ ಶಿಫ್ಟ್ - ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೋರಾಯ್ತು ಆಣೆ-ಪ್ರಮಾಣ!

ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಬಳಿಕ ಶಾರದಾಂಬೆ ನೆಲದಲ್ಲಿ ಆಣೆ-ಪ್ರಮಾಣದ ರಾಜಕೀಯ ಜೋರಾಗಿದೆ. ಇತ್ತ ಮತಚೋರಿ ಆಗಿದ್ರೆ ನೀನೇ ಶಿಕ್ಷೆ ಕೊಡು ಅಂತ ಮಾಜಿ ಶಾಸಕ ರಾಜೇಗೌಡ ದೇವಾಲಯ ಸುತ್ತುತ್ತಾ..

Read Full Story

06:14 PM (IST) May 09

ಶೂಟಿಂಗ್ ಮೊದಲು ರಂಜನಿ 'ಡಿ ಡಿ ಢಿಕ್ಕಿ' ಅಂತ ಪರ್ಸನಲ್ ವಿಚಾರ ಕೇಳಿದ್ದರು - ನಟಿ ಮೇಘನಾ ಗಾಂವ್ಕರ್‌

ಈ ಪಾತ್ರವನ್ನು ನಾನು ಒಪ್ಪಿಕೊಂಡ ಮೇಲೆ ಶೂಟಿಂಗ್‌ಗೂ ಮೊದಲು ರಂಜನಿ ಅವರು ಖುಷಿಯಲ್ಲಿದ್ದಾಗ ಹೇಗಿರ್ತೀನಿ, ನನ್ನ ಹತ್ರ ತುಂಬ ಪರ್ಸನಲ್‌ ವಿಚಾರಗಳನ್ನು ಕೇಳಿದ್ರು ಎಂದರು ಮೇಘನಾ ಗಾಂವ್ಕರ್‌.

Read Full Story

05:30 PM (IST) May 09

ದೊಡ್ಮನೆ ಕುಡಿಗೆ ದುನಿಯಾ ವಿಜಯ್ ಕೊಟ್ರು ಮಾಸ್ ಸಿನಿಮಾ - ಸಿಟಿಲೈಟ್ಸ್ ಬ್ಯಾಡ್ ಗರ್ಲ್ಸ್!

ದುನಿಯಾ ವಿಜಯ್ ಎರಡನೇ ಮಗಳು ಮೋನಿಷಾ ವಿಜಯ್ ಕುಮಾರ್​ ಚೊಚ್ಚಲ ಸಿನಿಮಾ ಇದು. ಹಾಗೇ ವಿಜಯ್ ನಿರ್ದೇಶನದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರೋ ಚಿತ್ರವೂ ಹೌದು.

Read Full Story

02:04 PM (IST) May 09

ಮೂಡಿಗೆರೆಯಲ್ಲಿ ರಾತ್ರೋರಾತ್ರಿ ಮಾಯವಾದ ಜೋಡೆತ್ತು! ಬೇಸಾಯದ ಎತ್ತುಗಳನ್ನು ಹುಡುಕಿಕೊಡಿ, ಪೊಲೀಸರ ಮೊರೆ ಹೋದ ರೈತ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಪ್ಲಿ ಗ್ರಾಮದಲ್ಲಿ ರೈತರೊಬ್ಬರು ಸಾಕಿದ್ದ ಜೋಡೆತ್ತುಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ. 15 ವರ್ಷಗಳಿಂದ ಬೇಸಾಯಕ್ಕೆ ಆಧಾರವಾಗಿದ್ದ ಎತ್ತುಗಳನ್ನು ಕಳೆದುಕೊಂಡು ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಗೋಹತ್ಯೆಗಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
Read Full Story

12:59 PM (IST) May 09

Sirsi - ಯಕ್ಷಗಾನ ನಡೆಸುವ ಜಾಗದ ವಿಚಾರ; ಚಪ್ಪಲಿ, ಪೊರಕೆಯಲ್ಲಿ ಹೊಡೆದಾಡಿಕೊಂಡ ಶಿರಸಿಯ ದಾಯಾದಿಗಳು!

Sirsi Family Dispute: ಖಾಸಗಿ ಜಮೀನಿನಲ್ಲಿ ಯಕ್ಷಗಾನ ಮಾಡುವ ಬಗ್ಗೆ ದಾಯಾದಿಗಳು ಜಗಳ ಆಡಿಕೊಂಡಿದ್ದಾರೆ. ಚಪ್ಪಲಿಯಲ್ಲಿ, ಕೋಲಿನಲ್ಲಿ ಹೊಡೆದುಕೊಳ್ಳುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

 

Read Full Story

12:54 PM (IST) May 09

ಚಿಕ್ಕಮಗಳೂರು - ಮುತ್ತೋಡಿ ಅರಣ್ಯದಲ್ಲಿ ಹುಲಿ ಗಣನೆಗೆ ಅಳವಡಿಸಿದ್ದ ಕ್ಯಾಮೆರಾ ಕಳ್ಳತನ, ಅರಣ್ಯ ಇಲಾಖೆಗೆ ಹೊಡೆತ

ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯದಲ್ಲಿ ಹುಲಿ ಗಣನೆಗೆ ಅಳವಡಿಸಿದ್ದ ಕ್ಯಾಮೆರಾಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆಯು ಅರಣ್ಯ ಇಲಾಖೆಯ ಕಾರ್ಯವೈಖರಿ ಮತ್ತು ಕಾಡುಪ್ರಾಣಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Read Full Story

12:34 PM (IST) May 09

ಬೆಂಗಳೂರು - ಸಂಸಾರ ತ್ಯಜಿಸಿದ ಮಹಿಳೆ ಜತೆ ಚಿತ್ರದುರ್ಗ ಯುವಕನ ಲಿವ್-ಇನ್, ಪ್ರೇಮಕಥೆಯಲ್ಲಿ ಅನುಮಾನದ ಸಾವು!

ಬೆಂಗಳೂರಿನ ಶ್ರೀಗಂಧನಗರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಚಿತ್ರದುರ್ಗ ಮೂಲದ ಯುವಕ ತಿಪ್ಪೇಸ್ವಾಮಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ವಾಸಿಸುತ್ತಿದ್ದ ಆತನ ಸಾವಿಗೆ ಆಕೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

12:22 PM (IST) May 09

Appe Midi Pickle - ಅಪ್ಪೇಮಿಡಿ ಉಪ್ಪಿನಕಾಯಿ ಹೀಗೆ ಮಾಡಿದ್ರೆ 3 ವರ್ಷವಾದ್ರೂ ಹಾಳಾಗಲ್ಲ; ರುಚಿಯೋ ರುಚಿ

Appe Midi Pickle Recipe: ಮಲೆನಾಡಿನ ಅಪ್ಪೆಮಿಡಿ ಉಪ್ಪಿನಕಾಯಿ ಎನ್ನುವುದು ಸಿಕ್ಕಾಪಟ್ಟೆ ಫೇಮಸ್. ಇನ್ನೇನು ಮಾವಿನಕಾಯಿ ಸೀಸನ್‌ ಬಂತು ಎಂದಕೂಡಲೇ ಅಪ್ಪೇಮಿಡಿ ಹುಡುಕಾಟ ಶುರು ಆಗುತ್ತದೆ. ಅಪ್ಪೇಮಿಡಿಯಿಂದ ಉಪ್ಪಿನಕಾಯಿ ಮಾಡಿಕೊಂಡು, ವರ್ಷಾನುಗಟ್ಟಲೇ ತಿನ್ನುತ್ತಾರೆ.

Read Full Story

12:10 PM (IST) May 09

IPL Final match shift row - ಶಾಸಕರಿಗೆ ಕೊಡೋದೇ 2 ಫ್ರೀ ಟಿಕೆಟ್‌ ಅಷ್ಟೇ - ಲಾಭಕ್ಕಾಗಿ ಐಪಿಎಲ್ ಫೈನಲ್ ಶಿಫ್ಟ್ - ಪರಂ

ಶಾಸಕರು ಟಿಕೆಟ್‌ ಕೇಳಿದ್ದರಿಂದ ಐಪಿಎಲ್‌ ಫೈನಲ್‌ ಪಂದ್ಯವನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನಿರಾಕರಿಸಿದ್ದಾರೆ. ಹೆಚ್ಚಿನ ಲಾಭಕ್ಕಾಗಿ ಅಹಮದಾಬಾದ್‌ಗೆ ಪಂದ್ಯ ಸ್ಥಳಾಂತರಿಸಲಾಗಿದೆ ಎಂದರು.

Read Full Story

11:58 AM (IST) May 09

BSY ಅಭಿಮಾನೋತ್ಸವಕ್ಕೆ 112 ಅಡಿ ಉದ್ದ, 40 ಅಡಿ ಅಗಲದ ವೇದಿಕೆ! ಚಿತ್ರದುರ್ಗದಲ್ಲಿ ನಡೆಯುತ್ತಿರೋದೇನು?

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 50 ವರ್ಷದ ರಾಜಕೀಯ ಬದುಕಿನ ನೆನಪಿಗಾಗಿ ಚಿತ್ರದುರ್ಗದಲ್ಲಿ ಬೃಹತ್ ಅಭಿಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಜನರಿಗೆ ಆಸನದ ವ್ಯವಸ್ಥೆ, ಬೃಹತ್ ವೇದಿಕೆ, ಸಾವಿರಾರು ಜನರಿಂದ ಅಡುಗೆ ಭಾರೀ ವ್ಯವಸ್ಥೆ ಮಾಡಲಾಗಿದೆ.

Read Full Story

11:38 AM (IST) May 09

ಪುದುಚೇರಿ ಪ್ರವಾಸ ಹೊರಟ ಡಿಸಿಎಂ ಶನೇಶ್ವರನ ದರ್ಶನ, ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ, ಏನಂದ್ರು ಡಿಕೆಶಿ?

ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುದುಚೇರಿಯ ತಿರುನಲ್ಲಾರ್ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಧಾರ್ಮಿಕ ಪ್ರವಾಸದ ನಡುವೆಯೇ, ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್‌ಗೆ ಬಂದಿದ್ದಾರೆ ಎಂಬ ರಾಜಕೀಯ ವದಂತಿಗಳನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
Read Full Story

11:33 AM (IST) May 09

BSY old Ambassador car - ಬಿಎಸ್‌ವೈ ಅಭಿಮಾನೋತ್ಸವ, ಪ್ರಮುಖ ಆಕರ್ಷಣೆ ಆಗಿರುವ ಅಂಬಾಸಿಡರ್ ಕಾರಿನ ಹಿಂದಿನ ಕಥೆಯೇನು?

ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದಲ್ಲಿ, ಅವರ ರಾಜಕೀಯ ಜೀವನದ ಆರಂಭದಲ್ಲಿ ಬಳಸಿದ CKR 45 ನಂಬರಿನ ಅಂಬಾಸಿಡರ್ ಕಾರು ಪ್ರಮುಖ ಆಕರ್ಷಣೆಯಾಗಿದೆ. ಈ ಕಾರು ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪನವರಷ್ಟೇ ಪ್ರಮುಖ ಪಾತ್ರ ವಹಿಸಿದೆ ಎಂದು ಬಿ.ವೈ. ವಿಜಯೇಂದ್ರ ಸ್ಮರಿಸಿಕೊಂಡರು.
Read Full Story

11:13 AM (IST) May 09

ಬೆಂಗಳೂರಿನ ಘನತೆಗೆ 'ವರದಕ್ಷಿಣೆ' ಕಪ್ಪುಚುಕ್ಕೆ - ಮೆಟ್ರೋ ನಗರಗಳ ಒಟ್ಟು ಕೇಸ್‌ಗಳಲ್ಲಿ ಶೇ. 87ರಷ್ಟು ಪಾಲು ಸಿಲಿಕಾನ್ ಸಿಟಿಯದ್ದೇ!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2024ರ ವರದಿಯ ಪ್ರಕಾರ, ದೇಶದ ಮೆಟ್ರೋ ನಗರಗಳ ಪೈಕಿ ಬೆಂಗಳೂರು ಅತಿ ಹೆಚ್ಚು ವರದಕ್ಷಿಣೆ ಪ್ರಕರಣಗಳನ್ನು ಹೊಂದಿದೆ. ಕೇವಲ ವರದಕ್ಷಿಣೆ ಮಾತ್ರವಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯ ಕೇಸ್‌ಗಳಲ್ಲೂ ಬೆಂಗಳೂರು ಮುಂದಿದೆ.

Read Full Story

11:09 AM (IST) May 09

ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ಬಸ್; ಒಂದು ದಿನದ ಟ್ರಿಪ್‌ಗೆ ಬೆಸ್ಟ್ ಆಯ್ಕೆ

ಬೆಂಗಳೂರಿನಿಂದ ಹಂಪಿಗೆ ಪ್ರವಾಸ ಯೋಜಿಸುತ್ತಿರುವವರಿಗೆ ಕೆಎಸ್‌ಆರ್‌ಟಿಸಿ ನೇರ ಬಸ್ ಸೌಲಭ್ಯವನ್ನು ಒದಗಿಸಿದೆ. ರಾತ್ರಿ ಬೆಂಗಳೂರಿನಿಂದ ಹೊರಡುವ ಈ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್, ಮರುದಿನ ಬೆಳಗ್ಗೆ ಹಂಪಿ ತಲುಪಲಿದ್ದು, ಅದರ ಸಮಯ, ದರ ಮತ್ತು ಬುಕ್ಕಿಂಗ್ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

Read Full Story

11:03 AM (IST) May 09

ಚಿತ್ರದುರ್ಗದಲ್ಲಿ BSY ಅಭಿಮಾನೋತ್ಸವ - ಕಾರ್ಯಕ್ರಮ ಬರುವ ವಾಹನ ಪಾರ್ಕಿಂಗ್ ಸ್ಥಳಗಳಿಗೆ ನಾಡಿನ ನದಿಗಳ ಹೆಸರು!

ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ 'ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ವಾಹನ ನಿಲುಗಡೆ ಸ್ಥಳಗಳಿಗೆ ಕಾವೇರಿ, ವೇದಾವತಿ, ಭದ್ರಾ, ತುಂಗಾ ಎಂಬ ನದಿಗಳ ಹೆಸರಿಡಲಾಗಿದೆ.

Read Full Story

10:49 AM (IST) May 09

ಚಿತ್ರದುರ್ಗದಲ್ಲಿ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಬರುವ 10 ಲಕ್ಷ ಜನರಿಗೆ ಊಟದ ವ್ಯವಸ್ಥೆ! ಊಟದ ಮೇನುವಿನಲ್ಲಿ ಏನಿದೆ?

ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಟೊಮೆಟೋ ಬಾತ್, ಮೊಸರನ್ನ ಹಾಗೂ ಮೈಸೂರು ಪಾಕ್ ಒಳಗೊಂಡ ಸರಳ ಊಟದ ವ್ಯವಸ್ಥೆ ಮಾಡಲಾಗಿದ್ದು, 5 ನಗರಗಳ ಬಾಣಸಿಗರು ಇದನ್ನು ನಿರ್ವಹಿಸುತ್ತಿದ್ದಾರೆ.
Read Full Story

10:37 AM (IST) May 09

ಬಿಟ್‌ಕಾಯಿನ್ ಹಗರಣದಲ್ಲಿ ಮಹತ್ವದ ಬೆಳವಣಿಗೆ, ತಡರಾತ್ರಿ ಪ್ರಮುಖ ಆರೋಪಿ ಶ್ರೀಕಿ ಸೇರಿ ಇಬ್ಬರ ಬಂಧನ

ರಾಜ್ಯದ ಬಹುಕೋಟಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್‌ ‘ಶ್ರೀಕಿ’ ಸೇರಿದಂತೆ ಮೂವರನ್ನು ಬಂಧಿಸಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು. ಈ ಬಂಧನದಿಂದಾಗಿ ಪ್ರಕರಣದ ತನಿಖೆಯು ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.
Read Full Story

10:14 AM (IST) May 09

ರಾಜಕೀಯ ಪ್ರಭಾವ ಬಳಸಿ ಐಪಿಎಲ್‌ ಫೈನಲ್ ಶಿಫ್ಟ್‌ - ಬಿಸಿಸಿಐ ಹೇಳಿಕೆಯೇ ಬೋಗಸ್ ಎಂದ ಡಿಕೆಶಿ!

ಐಪಿಎಲ್‌ ಫೈನಲ್‌ ಪಂದ್ಯವನ್ನು ರಾಜಕೀಯ ಪ್ರಭಾವ ಬಳಸಿ ಬೆಂಗಳೂರಿನಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬಿಸಿಸಿಐ ಸುಳ್ಳು ಹೇಳುತ್ತಿದ್ದು, ಗುಜರಾತ್‌ಗೆ ಆರ್ಥಿಕ ಲಾಭ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ. 

Read Full Story

09:59 AM (IST) May 09

ವಿಜಯನಗರ - ತಾಯಿಯನ್ನು ಚಿಕಿತ್ಸೆಗೆ ಕರೆತಂದ ಅಪ್ರಾಪ್ತೆಯ ಮೇಲೆ ಅತ್ಯಾ*ಚಾರವೆಸಗಿದ ಆಸ್ಪತ್ರೆ ನೌಕರ!

ವಿಜಯನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ, ಗ್ರೂಪ್ ‘ಡಿ’ ನೌಕರನೊಬ್ಬ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಾಯಿಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದ ಬಾಲಕಿಯನ್ನು ನಂಬಿಸಿ, ಕ್ವಾರ್ಟರ್ಸ್‌ಗೆ ಕರೆದೊಯ್ದು ಈ ಕೃತ್ಯ ಎಸಗಿದ್ದು, ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
Read Full Story

09:53 AM (IST) May 09

ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಸುಳಿವು ನೀಡಿದ ದಿನೇಶ್ ಗುಂಡೂರಾವ್, ಹೇಳಿದ್ದೇನು?

ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವ ತೀರ್ಮಾನವಿದೆ. ಕೇರಳದಲ್ಲಿ ಸರ್ಕಾರ ರಚನೆಯಾದ ನಂತರ ವರಿಷ್ಠರು ಕರ್ನಾಟಕದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.
Read Full Story

09:41 AM (IST) May 09

Amruthadhaare Serial - ಜಯದೇವ್ ಜೈಲಿಂದ ಹೊರಬರುವಂತೆ ಮಾಡಿದ ಗೌತಮ್‌ ಮನೇಲಿರೋ ಅಸಲಿ ವಿಲನ್;‌ ಯಾರದು?

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ನನ್ನು ದಿಯಾ ಜೈಲಿಗೆ ಹಾಕಿಸಿದ್ದಳು. ಈಗ ಅವನಿಗೆ ಜಾಮೀನು ಸಿಕ್ಕಿದ್ದು, ಹೊರಗಡೆ ಬಂದಿದ್ದಾನೆ. ಇದರ ಹಿಂದೆ ಇದ್ದೋರು ಯಾರು?

 

Read Full Story

09:05 AM (IST) May 09

BCCI Warns - ಐಪಿಎಲ್ ವೇಳೆ ಹನಿಟ್ರ್ಯಾಪ್ ಬಗ್ಗೆ ಆಟಗಾರರಿಗೆ ಬಿಸಿಸಿಐ ನೀಡಿದ ಗುಪ್ತ ಎಚ್ಚರಿಕೆ ಏನು?

ಐಪಿಎಲ್‌ ವೇಳೆ ಸಂಭವನೀಯ ಹನಿಟ್ರ್ಯಾಪ್‌ ಮತ್ತು ಭದ್ರತಾ ಅಪಾಯಗಳ ಬಗ್ಗೆ ಬಿಸಿಸಿಐ ಆಟಗಾರರಿಗೆ ಎಚ್ಚರಿಕೆ ನೀಡಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಎಲ್ಲಾ 10 ಫ್ರಾಂಚೈಸಿಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ತಂಡದ ಮಾಲೀಕರಿಗೂ ಪಂದ್ಯದ ವೇಳೆ ಆಟಗಾರರೊಂದಿಗೆ ಸಂವಹನ ನಡೆಸದಂತೆ ಸೂಚನೆ

Read Full Story

09:00 AM (IST) May 09

ಮೂಲ್ಕಿ, ಸುಳ್ಯ, ಬಂಟ್ವಾಳ, ಪುತ್ತೂರಿನಲ್ಲಿ ಮಳೆ - ಕೆರೆಗಳಾದ ರಸ್ತೆಗಳು, ಕೃತಕ ನೆರೆ ಸೃಷ್ಟಿ

ಮೂಲ್ಕಿ, ಸುಳ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮೂಲ್ಕಿ ತಾಲೂಕಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದ್ದು, ವಾಹನ ಸಂಚಾರಕ್ಕೆ ಮತ್ತು ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ.

Read Full Story

08:55 AM (IST) May 09

ಬೆಂಗಳೂರು - ತಡರಾತ್ರಿ ಹೊಟೇಲ್ ನಲ್ಲಿ ಅಗ್ನಿ ದುರಂತ, ಗಾಢ ನಿದ್ರೆಯಲ್ಲಿದ್ದ ಓರ್ವ ಉಸಿರುಗಟ್ಟಿ ಸಾವು

ಬೆಂಗಳೂರಿನಲ್ಲಿ ತಡರಾತ್ರಿ ಎರಡು ಪ್ರತ್ಯೇಕ ಅಗ್ನಿ ಅವಘಡಗಳು ಸಂಭವಿಸಿವೆ. ನಾಗರಬಾವಿ ಬಳಿಯ ಹೊಟೇಲ್‌ನಲ್ಲಿ ನಡೆದ ದುರಂತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು ನಾಲ್ವರು ಗಾಯಗೊಂಡರೆ, ಕೆ.ಆರ್ ಪುರಂ ಬಳಿಯ ಬೈಕ್ ಶೋರೂಂನಲ್ಲಿ 20 ಹೊಸ ಬೈಕ್‌ಗಳು ಸುಟ್ಟು ಕರಕಲಾಗಿವೆ.
Read Full Story

08:46 AM (IST) May 09

ಸಿಪಿಐ ವೀರಣ್ಣ ದೊಡ್ಡಮನಿ ಲೋಕಾಯುಕ್ತ ಬಲೆಗೆ - 1 ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್!

Corruption" ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಿಪಿಐ ವೀರಣ್ಣ ಎಸ್‌. ದೊಡ್ಡಮನಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

Read Full Story

08:24 AM (IST) May 09

ಹುಬ್ಬಳ್ಳಿ ಮೇಲ್ಸೇತುವೆ ಸಂಚಾರಕ್ಕೆ ಯಾವಾಗ ಮುಕ್ತ; ಇಲ್ಲಿಗೆ ಕಾಮಗಾರಿಯ ಲೇಟೆಸ್ಟ್ ಮಾಹಿತಿ

ಹುಬ್ಬಳ್ಳಿಯ ಬಹುನಿರೀಕ್ಷಿತ ಮೇಲ್ಸೇತುವೆ ಕಾಮಗಾರಿಯು ಶೇ.70ರಷ್ಟು ಪೂರ್ಣಗೊಂಡಿದ್ದು, ಡಿಸೆಂಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಶಾಸಕ ಮಹೇಶ ಟೆಂಗಿನಕಾಯಿ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 

Read Full Story

08:02 AM (IST) May 09

Karnataka temperature - ಮಳೆಯಿಂದಾಗಿ ತಾಪಮಾನ 3-5°C ಇಳಿಕೆ! ರಾಜ್ಯದ ಬಹುತೇಕ ಕಡೆ ಈಗ 40 ಡಿಗ್ರಿಗಿಂತ ಕಮ್ಮಿ!

ಉತ್ತರ ಒಳನಾಡು ಮತ್ತು ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದ್ದು, ತಾಪಮಾನದಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಕಲಬುರಗಿಯಂತಹ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಇಳಿದಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಇದು ನಿರಾಳತೆ ತಂದಿದೆ.
Read Full Story

07:57 AM (IST) May 09

ಸೂರ್ಯಕಾಂತಿ ರೈತರಿಗೆ ಸಿಹಿಸುದ್ದಿ ನೀಡಿದ ಸರ್ಕಾರ; ಫಿಕ್ಸ್ ಆಯ್ತು ಪ್ರತಿ ಕ್ವಿಂಟಾಲ್‌ ದರ

ಸಚಿವ ಶಿವಾನಂದ ಪಾಟೀಲ ಅವರು 2025-26ನೇ ಸಾಲಿನ ಹಿಂಗಾರು ಹಂಗಾಮಿನ ಸೂರ್ಯಕಾಂತಿಯನ್ನು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ ₹7,721 ದರದಲ್ಲಿ ಖರೀದಿಸಲು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯದ 11 ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ನಿರ್ದೇಶನ ನೀಡಿದ್ದು, ನೋಂದಣಿ ಮತ್ತು ಖರೀದಿ ಪ್ರಕ್ರಿಯೆಗೆ ನಿರ್ದಿಷ್ಟ ಸಂಸ್ಥೆಗಳನ್ನು ನೇಮಕ ಮಾಡಲಾಗಿದೆ.
Read Full Story

07:43 AM (IST) May 09

Umesh Meti Kodimath visit - ಕೋಡಿಮಠ ಶ್ರೀಗಳಗೆ ಬೆಳ್ಳಿ ಕೀರಿಟ ಅರ್ಪಿಸಿದ ಶಾಸಕ ಉಮೇಶ್ ಮೇಟಿ

ಬಾಗಲಕೋಟೆ ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕ ಉಮೇಶ್ ಮೇಟಿ, ಅರಸೀಕೆರೆಯ ಹಾರನಹಳ್ಳಿ ಕೋಡಿಮಠಕ್ಕೆ ಭೇಟಿ ನೀಡಿದರು. ಅವರು ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರಿಗೆ ಬೆಳ್ಳಿ ಕಿರೀಟ ಅರ್ಪಿಸಿ, ಗಂಟೆಗೂ ಹೆಚ್ಚು ಕಾಲ ಗೋಪ್ಯ ಸಮಾಲೋಚನೆ ನಡೆಸಿದರು.
Read Full Story

07:18 AM (IST) May 09

ಚಾಮರಾಜನಗರ - ಸಲೂನ್‌ಗೆ ಬಂದ ಮಂಗಕ್ಕೆ ಹೇರ್‌ ಕಟ್ ಮಾಡಿಸಿದ ಕ್ಷೌರಿಕ!

ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಸಲೂನ್‌ ಒಂದಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ಕೋತಿಗೆ, ಅದರ ಮಾಲೀಕ ದೇವರಾಜ್ ತಮಾಷೆಗಾಗಿ ಹೇರ್‌ ಸ್ಟೈಲ್ ಮಾಡಿದ್ದಾರೆ. ಮನುಷ್ಯರಂತೆ ತಲೆಬಗ್ಗಿಸಿ ಕುಳಿತು ಕೋತಿ ಸಹಕರಿಸಿದ್ದು, ಈ ಅಪರೂಪದ ಘಟನೆಯನ್ನು ಗ್ರಾಹಕರೊಬ್ಬರು ವೀಡಿಯೋ ಮಾಡಿದ್ದಾರೆ.
Read Full Story

More Trending News