LIVE NOW
Published : Feb 06, 2026, 06:36 AM ISTUpdated : Feb 06, 2026, 09:24 AM IST

karnataka news live: ಬಳ್ಳಾರಿಯ ಆಂಜನೇಯ ದೇಗುಲದಲ್ಲಿ ಮಾಂಸದ ಚೀಲ ಪತ್ತೆ, ನಾಯಿಗಳ ತಂದುಹಾಕಿದ್ದೋ? ಶಾಂತಿ ಕದಡುವ ಸಂಚೋ?

ಸಾರಾಂಶ

ಬೆಂಗಳೂರು ರಾಜ್ಯ ಕಾಂಗ್ರೆಸ್‌ನಲ್ಲಿನ ಗೊಂದಲ ಬಗೆಹರಿಸಿ ಎಂಬ ಶಾಸಕರ ಕೂಗಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯತಮ್ಮ 17ನೇ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಾರೆ.  ಅವರು ಗುರುವಾರ ಇಡೀ ದಿನ ಗೃಹ ಇಲಾಖೆ ಸೇರಿ ವಿವಿಧ 10 ಇಲಾಖೆಗಳ ಸಚಿವರು, ಉನ್ನತ ಅಧಿಕಾರಿಗಳ ಜತೆ ಬಜೆಟ್ ಪೂರ್ವಭಾವಿ ಚರ್ಚೆ ನಡೆಸಿದರು. ಇದರೊಂದಿಗೆ ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಅಧಿಕೃತ ತಯಾರಿ ಆರಂಭಿಸಿದರು. ಶುಕ್ರವಾರವೂ ಈ ಸಭೆಗಳು ಮುಂದುವರಿಯಲಿವೆ.

Ballari Suspicious Meat Bag Found in Anjaneya Temple Premises

09:24 AM (IST) Feb 06

ಬಳ್ಳಾರಿಯ ಆಂಜನೇಯ ದೇಗುಲದಲ್ಲಿ ಮಾಂಸದ ಚೀಲ ಪತ್ತೆ, ನಾಯಿಗಳ ತಂದುಹಾಕಿದ್ದೋ? ಶಾಂತಿ ಕದಡುವ ಸಂಚೋ?

ಬಳ್ಳಾರಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಗರದ ಆಂಜನೇಯ ದೇಗುಲದ ಆವರಣದಲ್ಲಿ ಮಾಂಸದ ಚೀಲ ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಶಾಕಿಂಗ್ ವರದಿ ಇಲ್ಲಿದೆ.

Read Full Story

09:22 AM (IST) Feb 06

20 ವರ್ಷದ ಮಗನ ಮುಂದೆ 2ನೇ ಮದುವೆಗೆ ನಟ ಧನುಷ್‌ ರೆಡಿ; ಇವೆಂಟ್‌ನಲ್ಲಿ ಸತ್ಯ ಹೇಳಲಾಗದೆ ಜಾರಿಕೊಂಡ ನಟಿ!

Actress Mrunal Thakur: ಬಹುಭಾಷಾ ನಟಿ ಮೃಣಾಲ್‌ ಠಾಕೂರ್‌ ಹಾಗೂ ತಮಿಳು ನಟ ಧನುಷ್‌ ನಡುವಿನ ರಿಲೇಶನ್‌ಶಿಪ್‌, ಮದುವೆ ಸುದ್ದಿ ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಧನುಷ್‌ ಕಾರಣಕ್ಕೆ ಮೃಣಾಲ್‌ ನಾಚಿಕೊಂಡ ಘಟನೆ ಸಿನಿಮಾ ಈವೆಂಟ್‌ ಒಂದರಲ್ಲಿ ನಡೆದಿದೆ.

 

Read Full Story

08:53 AM (IST) Feb 06

ನಿಜವಾದ ಪ್ರೇಮಿ ಪ್ರೇಯಸಿಯನ್ನು ಬ್ಲಾಕ್‌ಮೇಲ್‌ ಮಾಡಲ್ಲ - ಹೈಕೋರ್ಟ್‌, ಏನಿದು ಪ್ರಕರಣ?

A True Lover Never Blackmail ಪ್ರೇಯಸಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋಗಳನ್ನು ಬಳಸಿ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದ ಆರೋಪಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ನಿಜವಾದ ಪ್ರೇಮಿ ತನ್ನ ಪ್ರೇಯಸಿಗೆ ಬ್ಲ್ಯಾಕ್‌ಮೇಲ್‌ ಮಾಡುವುದಿಲ್ಲ ಎಂದು ನ್ಯಾಯಪೀಠ ಕಟುವಾಗಿ ಅಭಿಪ್ರಾಯಪಟ್ಟಿದೆ.

Read Full Story

08:36 AM (IST) Feb 06

ನನ್ನ ಸಮಾಧಿ ಅಗೆಯುವುದು ಕಾಂಗ್ರೆಸ್‌ಗೆ ಎಂದೂ ಅಸಾಧ್ಯ - ಮೋದಿ

‘ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಬಗ್ಗೆ ಮಾತನಾಡುವವರು ಮೋದಿಯ ಸಮಾಧಿ ತೋಡುತ್ತೇವೆ ಎಂಬ ಘೋಷಣೆ ಕೂಗುತ್ತಿದ್ದಾರೆ. ಇದು ಚುನಾವಣಾ ಸೋಲುಗಳ ಬಗ್ಗೆ ಅವರ ಹತಾಶೆ ಎತ್ತಿ ತೋರಿಸುತ್ತದೆ.

Read Full Story

08:28 AM (IST) Feb 06

ಅಲ್ಪಸಂಖ್ಯಾತರ ಸಾಲಕ್ಕೆ ಬಡ್ಡಿ ಮನ್ನಾ ಮಾಡಿದ ಸರ್ಕಾರ!

ಕರ್ನಾಟಕ ಸಂಪುಟ ಸಭೆಯು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲಗಳಿಗೆ ಬಡ್ಡಿ ಮನ್ನಾ ಮಾಡಲು ಒಟಿಎಸ್ ಯೋಜನೆಗೆ ಅನುಮೋದನೆ ನೀಡಿದೆ. ಇದರೊಂದಿಗೆ, ಒತ್ತುವರಿಯಾದ ದೇವಸ್ಥಾನಗಳ ಜಾಗ ತೆರವು, ಸಾರಥಿ ಯೋಜನೆಯಡಿ ಇ-ವಾಹನ ಖರೀದಿ ಹಾಗೂ ಹಲವು ಜಿಲ್ಲೆಗಳಲ್ಲಿ ಅರಣ್ಯೀಕರಣ ಯೋಜನೆಗಳಿಗೂ ಒಪ್ಪಿಗೆ ಸೂಚಿಸಿದೆ.

Read Full Story

08:26 AM (IST) Feb 06

ರಷ್ಯಾದ ಆಗಸದಲ್ಲಿ ಒಮ್ಮೆಲೆ 4 ಚಂದ್ರನ ದರ್ಶನ!

ಚಂದ್ರನಿರುವ ಹಾಗೂ ಇಲ್ಲದ ರಾತ್ರಿಗಳು ಸಾಮಾನ್ಯ. ಆದರೆ ರಷ್ಯಾದಲ್ಲಿ ಒಮ್ಮೆಲೆ 4 ಚಂದ್ರಗಳು ಕಾಣಿಸಿಕೊಂಡ ಘಟನೆಯೊಂದು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ. ಇದೇನಿದು ಆಗಸದಲ್ಲಿ ಹೊಸ ಕೌತುಕ ಎಂದು ಒಮ್ಮೆಲೆ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಪಟ್ಟಿದ್ದಾರೆ.

Read Full Story

07:57 AM (IST) Feb 06

ಸುಚಿತ್ರಾ ಶಿವಮೊಗ್ಗ ಬಂದ ಮೇಲೆ...? ಕಮಲಾಕರ ಭಟ್ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ಮನೆ ಬಾಡಿಗೆ ನೀಡಿದ್ದ ಮಾಲೀಕ

ಖ್ಯಾತ ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ಎಂಬ ಮಹಿಳೆಯೊಂದಿಗಿನ ಅನೈತಿಕ ಸಂಬಂಧ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಸಂಬಂಧಕ್ಕಾಗಿ ಭಟ್ಟರು ಸುಚಿತ್ರಾಗೆ ಐಷಾರಾಮಿ ಕಾರು, ಬಂಗಲೆ ಕೊಡಿಸಿದ್ದು, ನಡೆದ ಕೊಲೆ ಘಟನೆಯನ್ನು ಆಕೆಯ ಪುತ್ರಿಯೇ ಬಿಚ್ಚಿಟ್ಟಿದ್ದಾಳೆ.
Read Full Story

07:44 AM (IST) Feb 06

ಅಧಿಕಾರಿಗಳಿಗೆ ಲಂಚ ನೀಡಲು ಹಣವಿಲ್ಲದೇ ತಾನು ಬೆಳೆದ ಮೂಲಂಗಿಯನ್ನೇ ತಂದ ಮಧುಗಿರಿ ರೈತ

ಜಮೀನಿಗೆ ರಸ್ತೆ ನಿರ್ಮಿಸಲು ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ರೈತರೊಬ್ಬರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ತಾನು ಬೆಳೆದ ಮೂಲಂಗಿಯನ್ನೇ  ತಾಲೂಕು ಕಚೇರಿಗೆ ತೆಗೆದುಕೊಂಡು ಬಂದ ರೈತ ಪ್ರಸನ್ನಕುಮಾರ್  ನನ್ನ ಬಳಿ ಹಣವಿಲ್ಲ, ಬೆಳೆದ ಮೂಲಂಗಿಯನ್ನು ಅಧಿಕಾರಿಗಳಿಗೆ ಕೊಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು

Read Full Story

07:44 AM (IST) Feb 06

ಉರಿ, ಧುರಂಧರ್‌ದಂತಹ ಸಿನಿಮಾಗಳು ದೇಶದಲ್ಲಿ ಚಿತ್ರ ದ್ವೇಷ ಹರುಡುತ್ತವೆ - ಪ್ರೊ. ಮನು ಚಕ್ರವರ್ತಿ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ವಿಮರ್ಶಕ ಪ್ರೊ. ಮನು ಚಕ್ರವರ್ತಿ ಅವರು ದೇಶಪ್ರೇಮ ಕೆಲವರ ಪೇಟೆಂಟ್ ಆಗಿದ್ದು, 'ಉರಿ'ಯಂತಹ ಚಿತ್ರಗಳು ದ್ವೇಷ ಹರಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.  

Read Full Story

07:27 AM (IST) Feb 06

ಮಾಲೂರು ಕಾಂಗ್ರೆಸ್‌ ಶಾಸಕ ನಂಜೇಗೌಡ 250 ಮತ ಪಡೆದು ಗೆಲುವು

2023ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಅಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆವರಣದಲ್ಲಿಯೇ ಮರು ಮತ ಎಣಿಕೆ ಫಲಿತಾಂಶ ಪ್ರಕಟವಾಗಿದೆ. ಗುರುವಾರ ಹಾಲ್‌ನಲ್ಲಿಯೇ ತೆರೆದ ಪೀಠ ನಂಜೇಗೌಡ ಆಯ್ಕೆಯನ್ನು ಸಿಂಧುಗೊಳಿಸಿದೆ.

Read Full Story

07:25 AM (IST) Feb 06

ಪುನೀತ್ ಕೆರೆಹಳ್ಳಿಯ ರೀಲ್ಸ್ ಹುಚ್ಚಾಟ - ಹೈಕೋರ್ಟ್ ಖಡಕ್ ಎಚ್ಚರಿಕೆ

ಮಯನ್ಮಾರ್ ನಿರಾಶ್ರಿತನ ಮೇಲಿನ ಹಲ್ಲೆ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಚಾಟಿ ಬೀಸಿದೆ. ರೀಲ್ಸ್ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳಿಗಾಗಿ ಪೊಲೀಸರನ್ನು ನಿಂದಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ.

Read Full Story

07:17 AM (IST) Feb 06

ಆ್ಯಂಥ್ರೋಪಿಕ್‌ ಎಐನಿಂದ ವಿಶ್ವ ಟೆಕ್‌ ಲೋಕದಲ್ಲಿ ಬಿರುಗಾಳಿ!

ಹೆಚ್ಚುತ್ತಿರುವ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌- ಎಐ (ಕೃತಕ ಬುದ್ಧಿಮತ್ತೆ) ಬಳಕೆಯಿಂದ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಇರುವ ಹೊತ್ತಿನಲ್ಲಿ ಭಾರತ ಸೇರಿದಂತೆ ಜಾಗತಿಕ ಐಟಿ ಕ್ಷೇತ್ರಕ್ಕೆ ಅಮೆರಿಕದ ಆ್ಯಂಥ್ರೋಪಿಕ್‌ ಅಭಿವೃದ್ಧಿಪಡಿಸಿರುವ ಎಐ ಟೂಲ್‌ ಒಂದು ಭಾರೀ ಶಾಕ್‌ ನೀಡಿದೆ.

Read Full Story

07:04 AM (IST) Feb 06

ಕೇರಳ ಅಸೆಂಬ್ಲಿಯಲ್ಲೂ ಈಗ ‘ಗೋ ರಾಮ್‌ ಜಿ’ ನಿರ್ಣಯ

ಮನರೇಗಾದ ಬದಲು ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ‘ಜಿ ರಾಮ್‌ ಜಿ’ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ.ಇದರೊಂದಿಗೆ ಇಂಥ ನಿರ್ಣಯ ಅಂಗೀಕರಿಸಿದ 4ನೇ ರಾಜ್ಯವಾಗಿ ಹೊರಹೊಮ್ಮಿದೆ

Read Full Story

06:47 AM (IST) Feb 06

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌

 ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳ ಮೇಲೆ ಹದ್ದಿನ ಕಣ್ಣಿಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, 67.26 ಕೋಟಿ ರು. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ‘ಸೋಷಿಯಲ್‌ ಮೀಡಿಯಾ ಅನಾಲಿಟಿಕ್ಸ್‌ ಸಲ್ಯೂಷನ್ ತಂತ್ರಾಂಶ’ ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

Read Full Story

More Trending News