ಉಪ್ಪಿನಂಗಡಿ: ಹಾಸನದಿಂದ ಕೇರಳಕ್ಕೆ ಕಂಟೈನರ್ ವಾಹನದಲ್ಲಿ ಅತ್ಯಂತ ಅಮಾನವೀಯವಾಗಿ ತುಂಬಿ ಸಾಗಿಸುತ್ತಿದ್ದ 20 ಜಾನುವಾರುಗಳನ್ನು ಕಡಬ ಪೊಲೀಸರು ರಕ್ಷಿಸಿ, ಒಬ್ಬನನ್ನು ವಶಕ್ಕೆ ಪಡೆಡುಕೊಂಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೊಸೂರು ಗ್ರಾಮದ ಇರ್ಪಾನ್ ವಶಕ್ಕೆ ಪಡೆಯಲಾಗಿದೆ. ವಾಹನ ಚಾಲಕ ನಯಾಝ್ ಪರಾರಿ ಆಗಿದ್ದಾನೆ. ಲಾರಿ ಮಾಲೀಕ ಅಬ್ದುಲ್ ರಹಿಮಾನ್ ವಿರುದ್ದ ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಗ್ಗೆ ಜಾನುವಾರು ಸಾಗಿಸುತ್ತಿರುವ ಮಾಹಿತಿ ತಿಳಿದು ಪೊಲೀಸರು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಕಂಟೈನರ್ ಒಳಗಡೆ ಅಮಾನವೀಯ ರೀತಿಯಲ್ಲಿ ತುಂಬಿಸಲಾಗಿದ್ದ 20 ಜಾನುವಾರುಗಳು ಪತ್ತೆಯಾಗಿವೆ.
11:20 PM (IST) Apr 04
ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಸಂಘಟನೆ ಅಪಪ್ರಚಾರ, ಕೇಸರಿ ಶಾಲು ಹಾಕಿ ಕೃತ್ಯ, ಸಂಘಟಕ ವಶಕ್ಕೆ ಪಡೆಯಲಾಗಿದೆ. ಬಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇದೀಗ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.
11:19 PM (IST) Apr 04
How to keep fresh coconut from spoiling: ಇಂದು ಗಡಿಬಿಡಿಯ ಜೀವನದಲ್ಲಿದ್ದೇವೆ, ತೆಂಗಿನಕಾಯಿ ತುರಿಯನ್ನು ಹೇಗೆ ಜಾಸ್ತಿ ದಿನ ಇಡಬಹುದು? ಹಾಳಾಗದಂತೆ ಹೇಗೆ ತಡೆಯಬಹುದು ಎಂದು ಅನೇಕರಿಗೆ ಸಂದೇಹ ಇರುತ್ತದೆ. ಇದಕ್ಕೆ ಉತ್ತಮವಾದ ಪರಿಹಾರ ಇಲ್ಲಿದೆ, ಈ ವಿಧಾನಗಳನ್ನು ಅನುಸರಿಸಿ.
10:50 PM (IST) Apr 04
LPG: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಭಾರತ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ದೇಶದ ಕೋಟ್ಯಂತರ ಬಡ ಕುಟುಂಬಗಳ, ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಇದು ಮಹತ್ವದ ಬದಲಾವಣೆ ತಂದಿದೆ. ಹೊಗೆ-ಮುಕ್ತ ಅಡುಗೆಮನೆ ಒದಗಿಸುವುದು, ಶುದ್ಧ ಇಂಧನವಾದ ಎಲ್ಪಿಜಿಗೆ ಸಂಪರ್ಕ ಕಲ್ಪಿಸುವುದಾಗಿದೆ.
10:37 PM (IST) Apr 04
ಸಿದ್ದೇಶ್ವರ ಜಾತ್ರೆಯಲ್ಲಿ ಆರ್ಸಿಬಿ ಅಭಿಮಾನಿಗಳ ಹವಾ, ಟ್ರೋಫಿ ಮೂಲಕ ಪುಷ್ಪಾರ್ಷನೆ ಮಾಡಲಾಗಿದೆ. ಈ ಬಾರಿಯೂ ಆರ್ಸಿಬಿ ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಪ್ರಾರ್ಥಿಸಿದ್ದಾರೆ.
09:45 PM (IST) Apr 04
ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯ ಹಿನ್ನಲೆ, ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ. ಪಂದ್ಯಕ್ಕೆ ಆಗಮಿಸುವ ಹಾಗೂ ಪಂದ್ಯ ಮುಗಿದ ಬಳಿಕ ಮನೆಗೆ ತೆರಳುವ ಅಭಿಮಾನಿಳಿಗೆ BMTC ಕೊಡುಗೆ ಏನು?
09:03 PM (IST) Apr 04
ಜಾಮೀನು ಕೊಡಲು ಹಣಕ್ಕೆ ಬೇಡಿಕೆ ಇಟ್ಟ ಇಬ್ಬರು ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ, ಅಟ್ರಾಸಿಟಿ ಪ್ರಕರಣದಲ್ಲಿ ಜಾಮೀನು ಕೊಡಿಸಲು ಹಣಕ್ಕೆ ಬೇಡಿಕೆ ಇಡುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ
08:46 PM (IST) Apr 04
Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಮಾತ್ರ ಬದಲಾಗಿಲ್ಲ, ಭಾಗ್ಯ ಬದುಕನ್ನು ಇನ್ನಷ್ಟು ಹಾಳು ಮಾಡಬೇಕು, ಭಾಗ್ಯ-ಆದಿ ದೂರ ಆಗಬೇಕು ಎಂದು ಅವನು ಪ್ಲ್ಯಾನ್ ಮಾಡಿದ್ದಾನೆ. ಈಗ ಶ್ರೇಷ್ಠ ಅವನಿಗೆ ಗುಡ್ನ್ಯೂಸ್ ಕೊಟ್ಟಿದ್ದಾಳೆ.
08:35 PM (IST) Apr 04
ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ, ಜಿಮ್ಗೆ ಬರುತ್ತಿದ್ದ ಹಿಂದೂ ಹುಡುಗಿಯರ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ ಮುಲ್ಲಾ ಪ್ರಕರಣ ಕುರಿತು ಮುತಾಲಿಕ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.
07:27 PM (IST) Apr 04
ಭಾರತೀಯ ವಾಯುಪಡೆಗಾಗಿ 1,000 ಕೆಜಿ ತೂಕದ ಅತ್ಯಾಧುನಿಕ ವೈಮಾನಿಕ ಬಾಂಬುಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲು ರಕ್ಷಣಾ ಸಚಿವಾಲಯವು 'Make-II' ಯೋಜನೆಯಡಿ ಮುಂದಾಗಿದೆ. ಅಮೆರಿಕದ 'Mk-84' ಮಾದರಿಗೆ ಸಮಾನವಾದ ಈ ಬಾಂಬುಗಳನ್ನು, ಕನಿಷ್ಠ 50% ಸ್ವದೇಶಿ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ.
06:10 PM (IST) Apr 04
06:08 PM (IST) Apr 04
3 ಕೋಟಿ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ, ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಸೆಲೆಬ್ರೆಟಿಗಳ ಕಾರು ಎಂದೇ ಗುರುತಿಸಿಕೊಂಡಿದೆ. ಆದರೆ ಬೆಂಗಳೂರಲ್ಲಿ ಹಾಗಲ್ಲ.
06:03 PM (IST) Apr 04
Director S Mahendar On Daughter Gowri Shruti: ಕನ್ನಡದ ಅನೇಕ ಕೌಂಟುಬಿಕ ಸಿನಿಮಾಗಳ ನಿರ್ದೇಶಕ ಎಸ್ ಮಹೇಂದರ್ ಹಾಗೂ ಶ್ರುತಿ ಅವರ ದಾಂಪತ್ಯ ಮುರಿದಿದೆ. ಆದರೆ ಇವರ ಮಗಳು ಗೌರಿ ಮಾತ್ರ ತಂದೆ-ತಾಯಿ ಜೊತೆಗೆ ಅದೇ ಬಾಂಧವ್ಯ ಹೊಂದಿದ್ದಾರೆ.
05:43 PM (IST) Apr 04
Company Layoffs: ಇಂದು ಕಂಪೆನಿಗಳು ಲೇಆಫ್ ಮಾಡುತ್ತಿವೆ. ಕಷ್ಟಪಟ್ಟು ಓದಿ, ಕಂಪೆನಿಯಲ್ಲಿ ಕೆಲಸ ಮಾಡೋಣ, ಸೆಟಲ್ ಆಗೋಣ ಎಂದುಕೊಂಡರೆ ತುಂಬ ಕಷ್ಟ. ಯಾವಾಗ ಯಾರು ಲೇಆಫ್ ಆಗುತ್ತಾರೆ ಎಂದು ಹೇಳಲಾಗದು. ಈ ಬಗ್ಗೆ ಗೀತರಚನೆಕಾರ ಕವಿರಾಜ್ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
05:28 PM (IST) Apr 04
ಬೆಂಗಳೂರಲ್ಲಿ ಯುವಕ ವಿಜಯ್ ಕೊಲೆ ಕೇಸ್ನಲ್ಲಿ ಟ್ವಿಸ್ಟ್, ಪ್ರಕರಣದ ಹಿಂದಿನ ಯವತಿ ವಿಷ್ಯ ಬೆಳಕಿಗೆ, ಆರಂಭದಲ್ಲಿ ಕ್ಷುಲಕ್ಕ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಅಸಲಿ ವಿಚಾರ ಬೇರೇನೆ ಇದೆ.
05:25 PM (IST) Apr 04
Bhumika Basavaraj: ಸಾಮಾನ್ಯವಾಗಿ ಕುಟುಂಬದಲ್ಲಿ, ರಕ್ತ ಸಂಬಂಧದಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಇದರ ಹೊರತಾಗಿ ಒಳ್ಳೆಯ ಸ್ನೇಹ ಸಂಬಂಧ ಕೂಡ ಇರುವುದು. ಈಗ ಕನ್ನಡ ಯುಟ್ಯೂಬರ್, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಭೂಮಿಕಾ ಬಸವರಾಜ್ ಅವರು ತನ್ನ ಗೆಳತಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ.
05:18 PM (IST) Apr 04
04:46 PM (IST) Apr 04
ಆರ್ಸಿಬಿ ಇನ್ಸೈಡರ್ ವಿಡಿಯೋದಲ್ಲಿ, ಮಿಸ್ಟರ್ ನಾಗ್ಸ್ ಜೊತೆಗಿನ ತಮಾಷೆಯ ಸಂಭಾಷಣೆಯ ವೇಳೆ ವಿರಾಟ್ ಕೊಹ್ಲಿ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
04:28 PM (IST) Apr 04
ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ನಂತರ ಅನುಭವಿಸಿದ ನೋವಿನಿಂದ ಹೊರಬಂದಿದ್ದಾರೆ. ಮುಂದಿನ ವರ್ಷ ಮದುವೆಯಾಗಲು ಯೋಜಿಸಿದ್ದು, ಈಗಾಗಲೇ ಹುಡುಗಿಯರನ್ನು ನೋಡಿರುವುದಾಗಿ ಮತ್ತು ಈ ಬಾರಿ ತರಾತುರಿ ಮಾಡದೆ ಪೋಷಕರ ಒಪ್ಪಿಗೆಯೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ.
04:18 PM (IST) Apr 04
ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ ಆದೇಶದಂತೆ ರಾಜ್ಯ ಸರ್ಕಾರವು ಡಿವೈಎಸ್ಪಿ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯು ಎಎಸ್ಪಿ ಹುದ್ದೆಯ ಮುಂಬಡ್ತಿ ವಿಚಾರವಾಗಿ ನೇರ ನೇಮಕಾತಿ ಮತ್ತು ಮುಂಬಡ್ತಿ ಅಧಿಕಾರಿಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪಿಆರ್ ಅಧಿಕಾರಿಗಳು ಇದು ಅವೈಜ್ಞಾನಿಕವೆಂದು ವಾದಿಸಿದರೆ, ಡಿಆರ್ ಅಧಿಕಾರಿಗಳು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
04:00 PM (IST) Apr 04
03:27 PM (IST) Apr 04
03:09 PM (IST) Apr 04
ಕನ್ನಡ ಧಾರಾವಾಹಿಗಳಲ್ಲಿ ಪುರುಷರನ್ನು ಶತದಡ್ಡರೆಂದು ಚಿತ್ರಿಸುವುದು ಸಾಮಾನ್ಯವಾಗಿದೆ. 'ಬ್ರಹ್ಮಗಂಟು' ಮತ್ತು 'ಶ್ರಾವಣಿ ಸುಬ್ರಹ್ಮಣ್ಯ'ದಂತಹ ಸೀರಿಯಲ್ಗಳಲ್ಲಿ, ನಾಯಕರು ವೇಷ ಬದಲಿಸಿ ಬಂದ ತಮ್ಮ ಪತ್ನಿಯರನ್ನು ಗುರುತಿಸಲು ವಿಫಲರಾಗುತ್ತಾರೆ. ಈ ಚಿತ್ರಣವು ಪುರುಷ ವೀಕ್ಷಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ
01:44 PM (IST) Apr 04
01:26 PM (IST) Apr 04
ಎಸ್ಎಸ್ಎಲ್ಸಿ ತೃತೀಯ ಭಾಷಾ ಗ್ರೇಡಿಂಗ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಿರುದ್ಧ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ದೈನಂದಿನ ಆಡಳಿತದಲ್ಲಿ ಮೂಗು ತೂರಿಸುವ ಹಕ್ಕಿಲ್ಲವೆಂದು ಹೇಳಿದ್ದಾರೆ.
01:24 PM (IST) Apr 04
01:12 PM (IST) Apr 04
ಆಯುರ್ವೇದದಲ್ಲಿ ನೆಲ್ಲಿಕಾಯಿಗೆ (Amla) ವಿಶೇಷ ಸ್ಥಾನವಿದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ರಾಮಬಾಣ. ಪ್ರತಿದಿನ ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನಲು ಸಾಧ್ಯವಾಗದವರು, ಅದನ್ನು ಚಟ್ನಿ ರೂಪದಲ್ಲಿ ಬಳಸಬಹುದು. ಇದರ ಸ್ಪೆಷಾಲಿಟಿ ತಿಳಿದುಕೊಳ್ಳಿ..
01:10 PM (IST) Apr 04
ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ನಿರ್ಮಿಸಲಾದ ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಾರ್ವಜನಿಕ ಬಳಕೆಗೆ ಸಿದ್ಧವಾಗಿದೆ. ಈ ಮೇಲ್ಸೇತುವೆಯು ಹೆಚ್ಎಸ್ಆರ್ ಲೇಔಟ್ನಿಂದ ಜಯದೇವ ಆಸ್ಪತ್ರೆಯವರೆಗಿನ ಸಂಚಾರ ದಟ್ಟಣೆಯನ್ನು ಶೇ. 80ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.
12:18 PM (IST) Apr 04
12:18 PM (IST) Apr 04
11:38 AM (IST) Apr 04
ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಡರಾತ್ರಿವರೆಗೆ ಕಾಂಗ್ರೆಸ್ ನಾಯಕರು ಮತ್ತು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಗೆಲುವಿಗೆ ರಣತಂತ್ರ ಹೆಣೆದರು.
11:16 AM (IST) Apr 04
Kitchen Cooling Tips: ಬೇಸಿಗೆಯಲ್ಲಿ ಅಡುಗೆಮನೆಯನ್ನು ತಂಪಾಗಿರಿಸಲು ಕೆಲವು ಸರಳ ಉಪಾಯಗಳಿವೆ. ಕೆಲ ವಿಧಾನಗಳು ಬೇಸಿಗೆಯಲ್ಲಿ ನಿಮ್ಮ ಅಡುಗೆಮನೆಯ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
11:11 AM (IST) Apr 04
11:07 AM (IST) Apr 04
ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್ಗೆ ನೋಟಾ ಮತ ನೀಡುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತಾರಕ್ಷಣೆ ವೇದಿಕೆ ಕರೆ ನೀಡಿದೆ.
10:31 AM (IST) Apr 04
ಗೌತಮ್ ಮತ್ತು ಭೂಮಿಕಾ ಅವರು ಜೈದೇವ್ನ ಸಂಚನ್ನು ವಿಫಲಗೊಳಿಸಿ ಮಲ್ಲಿ ಮತ್ತು ಸುನೀಲ್ ಮದುವೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಜೈದೇವ್ ನಿರ್ದೇಶಕರ ಸಂಬಂಧಿ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
10:17 AM (IST) Apr 04
ಮದುವೆಯಾಗುತ್ತಿಲ್ಲವೆಂದು ಮನನೊಂದು ಚಿಕ್ಕಮಗಳೂರಿನಲ್ಲಿ ಕುರಿಗಾಹಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ವೈಯಕ್ತಿಕ ಕಾರಣಗಳಿಂದ ಕಾರ್ಮಿಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಎರಡೂ ಘಟನೆಗಳ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
10:12 AM (IST) Apr 04
09:47 AM (IST) Apr 04
ಕರ್ನಾಟಕ ಆರೋಗ್ಯ ಇಲಾಖೆಯು 40 ವರ್ಷ ಮೇಲ್ಪಟ್ಟವರಿಗೆ ಉಚಿತ ದೃಷ್ಟಿ ತಪಾಸಣೆ ಮತ್ತು ಓದುವ ಕನ್ನಡಕ ನೀಡಲು 'ರಿಸ್ಟೋರಿಂಗ್ ವಿಷನ್' ಸಂಸ್ಥೆಯೊಂದಿಗೆ ಒಪ್ಪಂದ. ಮೊದಲ ಹಂತದಲ್ಲಿ ಯಾದಗಿರಿ ಜಿಲ್ಲೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ತಪಾಸಣೆ ನಡೆಸಲಿದ್ದಾರೆ.
09:46 AM (IST) Apr 04
ಈಗಿನ ಕಾಲದಲ್ಲಿ ತರಕಾರಿಗಳಲ್ಲಿ ಕಲಬೆರಕೆ, ಕೆಮಿಕಲ್ ಮತ್ತು ಕೀಟನಾಶಕಗಳ ಬಳಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ, ಜನ ಮತ್ತೆ ಮನೆಯಲ್ಲೇ ಬೆಳೆದ ಆರ್ಗ್ಯಾನಿಕ್ ತರಕಾರಿಗಳತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ. ಒಂದು ಪುಟ್ಟ ತರಕಾರಿ ತೋಟ ನಿಮಗೆ ತಾಜಾ ಮತ್ತು ಪೌಷ್ಟಿಕ ತರಕಾರಿಗಳನ್ನು ನೀಡುತ್ತದೆ.
09:26 AM (IST) Apr 04
09:23 AM (IST) Apr 04