ಬೆಂಗಳೂರು (ಜೂ.27): ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ನಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿರುವ ಮಾತು ಸಾಕಷ್ಟು ಕುತೂಹಲ ಮೂಡಿಸಿದೆ. ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಭಾರೀ ಬದಲಾವಣೆ ಆಗುವುದು ನಿಶ್ಚಿತ. ಅದರ ಸುಳಿಗಾಳಿ ಈಗ ಬೀಸಲು ಆರಂಭಿಸಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಈಗ ಮೂರು ಪವರ್ ಸೆಂಟರ್ಗಳಿವೆ, ಹೀಗಾಗಿ ಸಿಎಂ ಸಿದ್ಧರಾಮಯ್ಯ ಮೊದಲ ಅವಧಿಯ ಸಿಎಂ ಆಗಿದ್ದ ರೀತಿಯಲ್ಲಿ ಇಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯದಲ್ಲಿ ಕಾಂಗ್ರೆಸ್ ಹಾಗೂ ಸರ್ಕಾರದಲ್ಲಿ ಆಗಬಹುದಾದದ ಬದಲಾವಣೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
11:26 PM (IST) Jun 27
ಜಿಲ್ಲೆಯ ಕಾಂಗ್ರೆಸ್ನಲ್ಲಿ ಎದ್ದಿರುವ ಬಿರುಗಾಳಿ, ಬಿರುಕಿನ ಕುರಿತಂತೆ ಜಿಲ್ಲೆಗೆ ರಾಜ್ಯ ಕಾಂಗ್ರೆಸ್ ನಾಯಕರ ವಿಶೇಷ ತಂಡ ಕಳುಹಿಸಿ ಸತ್ಯಾಸತ್ಯತೆ ತನಿಖೆ ನಡೆಸುವ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರಂತೆ.
11:24 PM (IST) Jun 27
ಬಿಹಾರದಲ್ಲಿ 20 ವರ್ಷದ ಮಗನ ಪೋಷಕರಾಗಿದ್ದಾರಾ ಸನ್ನಿ ಲಿಯೋನ್ ಹಾಗೂ ಇಮ್ರಾನ್ ಹಶ್ಮಿ? ಇಂತದೊದ್ದ ಚರ್ಚೆ ಶುರುವಾಗಲು ಕಾರಣ ಬಿಹಾರದ ವಿದ್ಯಾರ್ಥಿಯ ರೋಚಕ ಘಟನೆ.
11:02 PM (IST) Jun 27
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಭೇಟಿ ನೀಡಿದರು.
10:42 PM (IST) Jun 27
ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಮೊಬೈಲ್ ಆ್ಯಪ್ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ ನೀಡುವ ಮೂಲಕ ದೇಶದಲ್ಲೇ ಕ್ರಾಂತಿಗೆ ನಾಂದಿ ಹಾಡಿದೆ.
09:48 PM (IST) Jun 27
ಕರ್ನಾಟಕದ ಹಲವು ಜಿಲ್ಲೆಗಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಕಳೆದ ಕೆಲ ದಿನಗಳಿಂದ ಕೆಲ ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಇದೀಗ ಮಳೆ ಮುಂದುವರಿದ ಕಾರಣ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
09:10 PM (IST) Jun 27
ಮಾಜಿ ಸಚಿವ, ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಸ್ಕೂಟರ್ ಸ್ಕಿಡ್ ಆಗಿ ಗಾಯಗೊಂಡಿದ್ದಾರೆ. ಬೈಕ್ ರ್ಯಾಲಿ ವೇಳೆ ಮಾಜಿ ಸಚಿವರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
09:07 PM (IST) Jun 27
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಇಲ್ಲ, ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
08:43 PM (IST) Jun 27
ನೆಟ್ಫ್ಲಿಕ್ಸ್ ಸೇರಿದಂತೆ 19 ಒಟಿಟಿ ಪ್ಲಾಟ್ಫಾರ್ಮ್, 120 ಜಿಬಿ ಡೇಟಾ ಸೇರಿದಂತೆ ಹತ್ತು ಹಲವು ಸೌಲಭ್ಯದ ವಿಐ ಮ್ಯಾಕ್ಸ್ ಫ್ಯಾಮಿಲಿ ಪ್ಲಾನ್ ಘೋಷಣೆಯಾಗಿದೆ. ಈ ಪ್ಲಾನ್ ಸೌಲಭ್ಯವೇನು?
08:14 PM (IST) Jun 27
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಅವರ ಬಳಿ ಶ್ವೇತಪತ್ರ ಇಲ್ಲ, ಬ್ಲ್ಯಾಕ್ಪೇಪರ್ ಇದೆ. ರಾಜ್ಯ ಸರ್ಕಾರ ಪ್ರತಿ ವ್ಯಕ್ತಿ ಮೇಲೆ ಹೆಚ್ಚುವರಿಯಾಗಿ ₹1 ಲಕ್ಷ ಸಾಲ ಹೊರಿಸುತ್ತಿದೆ. ಇದಕ್ಕಿಂತ ದೊಡ್ಡ ಶ್ವೇತಪತ್ರ ಬೇಕಾ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
08:08 PM (IST) Jun 27
ಪ್ರಿಯಾಂಕಾ ಚೋಪ್ರಾ ಮಿಸ್ ವರ್ಲ್ಡ್ ಕಿರೀಟ ಪಡೆದಿದ್ದು ಆಕೆಯ ಸೌಂದರ್ಯದಿಂದ ಅಲ್ಲ, ನನ್ನ ಸಲಹೆಯಿಂದ ಎಂದು ಯುಕ್ತಾ ಹೇಳಿದ್ದಾಳೆ. ಈ ಮೂಲಕ ಯುಕ್ತಾ ಹಾಗೂ ಪ್ರಿಯಾಂಕಾ ಚೋಪ್ರಾ ನಡುವಿನ ಮಿಸ್ ವರ್ಲ್ಡ್ ಜಗಳ ಶುರುವಾಗಿದೆ.
08:04 PM (IST) Jun 27
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತಾಡಲು ಸ್ವಾತಂತ್ರವಿದೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಯೋ ಗೊತ್ತಿಲ್ಲ. ಇರುವಷ್ಟು ದಿನ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡೋಣ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
07:43 PM (IST) Jun 27
ಸೊಸೆ ನಾಪತ್ತೆಯಾಗಿದ್ದಾಳೆ ಎಂದು ಗಂಡನ ಮನೆಯವರು ಹೇಳಿದ 2 ತಿಂಗಳಲ್ಲಿ ಆಕೆಯ ಮೃತದೇಹ 10 ಅಡಿ ಆಳದಲ್ಲಿ ಹೂತಿಟ್ಟ ಘಟನೆಗೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸೊಸೆಯನ್ನು ಹತ್ಯೆ ಮಾಡುವ ಮೊದಲು ಆಕೆಯಯನ್ನು ಸ್ವತಃ ಮಾವನೇ ಹರಿದು ಮುಕ್ಕಿದ. ಈ ಕೃತ್ಯಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದಳು.
07:06 PM (IST) Jun 27
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ ನಡೆಸುವಂತೆ ಜೆಡಿಎಸ್ ಪಕ್ಷದ ಮುಖಂಡರು ಸೂಚನೆ ನೀಡದ ಹಿನ್ನೆಲೆಯಲ್ಲಿ ನಾನು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದರು.
07:03 PM (IST) Jun 27
ಏಲಿಯನ್ ಇದೆಯಾ? ಇದ್ದರೆ ಎಲ್ಲಿ ವಾಸ? ಈ ಪ್ರಶ್ನೆಗಳಿಗೆ ಉತ್ತರ ಹುಡುಕು ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.ಇದರ ನಡುವೆ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇದೇ ಮೊದಲ ಬಾರಿ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದೆ.
07:01 PM (IST) Jun 27
ಕಾನ್ಪುರದ ಶಿವ ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
06:58 PM (IST) Jun 27
ಮಧುಮೇಹ ಸಮಸ್ಯೆ ಎನ್ನುವುದು ಸರ್ವೇ ಸಾಮಾನ್ಯ ಆಗಿರುವ ಈ ದಿನಗಳಲ್ಲಿ ಕುಳಿತಲ್ಲಿಯೇ 10 ನಿಮಿಷ ಹಿಮ್ಮಡಿಯ ವ್ಯಾಯಾಮ ಹೇಳಿದ್ದಾರೆ ಇವರು. ಅವರ ಅನುಭವ ಕೇಳಿ...
06:55 PM (IST) Jun 27
ಕಳೆದ ವರ್ಷ ಬೆಂಗಳೂರಿನಲ್ಲಿ ಆರಂಭಗೊಂಡ ಕಾವೇರಿ ಪೂಜೆ ಕಾರ್ಯಕ್ರಮದ ಕೃಪೆಯಿಂದ ಬಹುತೇಕ ರಾಜ್ಯದ ಪ್ರಮುಖ ಜಲಾಶಯಗಳು ಶೇ.85ರಷ್ಟು ಭರ್ತಿಯಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
06:44 PM (IST) Jun 27
ಪರಿಸರ ಪ್ರಜ್ಞೆ ಮತ್ತು ಕಾಳಜಿಯೊಂದಿಗೆ ಕಾನೂನಾತ್ಮಕವಾಗಿ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ ನಿರ್ಮಿಸುವುದಾಗಿ ಬೆಂವಿವಿ ಕುಲಪತಿ ಡಾ.ಜಯಕರ ಸ್ಪಷ್ಟಪಡಿಸಿದರು.
06:03 PM (IST) Jun 27
ಪತ್ನಿ ಪಬ್ಜಿ ಆಟದಲ್ಲಿ ಪ್ರೀತಿ ಶುರುವಾಗಿದೆ. ಇದನ್ನು ಅರಿತ ಗಂಡ, ಪತ್ನಿಯ ಪಬ್ಜಿ ಆಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾನೆ. ನಮ್ಮ ನಡುವೆ ಬಂದ್ರೆ 55 ಪೀಸ್ ಮಾಡ್ತೀನಿ ಎಂದು ಗಂಡನ ಬೆದರಿಸಿದ್ದಾಳೆ.ಇಷ್ಟೇ ಅಲ್ಲ ಮಕ್ಕಳು, ಪತಿ ಬಿಟ್ಟು ಪರಾರಿಯಾಗಿದ್ದಾಳೆ.
05:51 PM (IST) Jun 27
05:05 PM (IST) Jun 27
ನೋಯ್ಡಾದ ವೃದ್ಧಾಶ್ರಮವೊಂದರಲ್ಲಿ ವೃದ್ಧರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಹಣ ಪಡೆದರೂ ಸರಿಯಾದ ಸೌಲಭ್ಯಗಳನ್ನು ನೀಡದೆ, ವೃದ್ಧರನ್ನು ಕಟ್ಟಿಹಾಕಿ, ಕೊಠಡಿಗಳಲ್ಲಿ ಬಂಧಿಸಿರುವುದು ಬೆಚ್ಚಿಬೀಳಿಸುವ ಸಂಗತಿ.
04:54 PM (IST) Jun 27
ಅಂಬೇಡ್ಕರ್ ಸಂವಿಧಾನದಲ್ಲಿ ಇಲ್ಲದ ಜ್ಯಾತ್ಯಾತೀತ, ಸಮಾಜವಾದಿ ಪದವನ್ನು ತುರ್ತು ಪರಿಸ್ಥಿತಿ ವೇಳೆ ಇಂದಿರಾ ಗಾಂಧಿ ಸೇರಿಸಿದ್ದರು. ಇದನ್ನು ಕಿತ್ತು ಹಾಕಬೇಕು ಅನ್ನೋ RSS ದತ್ತಾತ್ರೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
04:41 PM (IST) Jun 27
04:25 PM (IST) Jun 27
ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ. ಆದರೆ ಇತ್ತೀಚೆಗೆ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಟ್ರೆಂಡ್ ಆಗುತ್ತಿದೆ. ಏನಿದು ಡಜಿಟಲ್ ಡ್ರೈವಿಂಗ್ ಲೈಸೆನ್ಸ್? ಇದನ್ನು ಪಡೆಯುವುದು ಹೇಗೆ? ಪ್ರಯೋಜನವೇನು?
03:31 PM (IST) Jun 27
03:19 PM (IST) Jun 27
ಭಾರತ ಬಿಟ್ಟು ಬೇರೆ ದೇಶಗಳಿಗೆ ವಲಸೆ ಹೋಗುತ್ತಿರುವ ಶ್ರೀಮಂತರು, ಉದ್ಯಮಿಗಳ ಸಂಖ್ಯೆ ಅಚ್ಚರಿಕೆ ಕಾರಣವಾಗಿದೆ. ಈ ವರ್ಷ ಬರೋಬ್ಬರಿ 3,500 ಶ್ರೀಮಂತರು ಭಾರತ ತೊರೆದು ಬೇರೆ ದೇಶಗಳಲ್ಲಿ ನೆಲೆಸಲು ತೆರಳುತ್ತಿದ್ದಾರೆ. ಇದರಿಂದ ಭಾರತಕ್ಕೆ ಬರೋಬ್ಬರಿ 26 ಬಿಲಿಯನ್ ಡಾಲರ್ ನಷ್ಟವಾಗುತ್ತಿದೆ.
03:10 PM (IST) Jun 27
ಚಿತ್ರ ವಿಚಿತ್ರ ಪ್ರಾಣಿಗಳ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.
02:49 PM (IST) Jun 27
02:33 PM (IST) Jun 27
ಐಐಟಿ ಬಾಂಬೆ ಕ್ಯಾಂಪಸ್ನಲ್ಲಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ವಾಸವಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
02:31 PM (IST) Jun 27
02:10 PM (IST) Jun 27
ಹೊಸ ಕಾಯ್ದೆಗಳ ಮೂಲಕ ವಿಚಾರಗಳನ್ನು ಡೈವರ್ಟ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಇಂದಿರಾ ಗಾಂಧಿಯವರನ್ನು ಹಿಟ್ಲರ್ಗೆ ಹೋಲಿಸಿದ್ದಕ್ಕೆ ಕೇಸ್ ಹಾಕುವುದಾಗಿ ಹೇಳುತ್ತಿರುವುದು ಸರ್ವಾಧಿಕಾರಿ ಧೋರಣೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
01:14 PM (IST) Jun 27
01:00 PM (IST) Jun 27
12:55 PM (IST) Jun 27
ವಿನಾಶಕಾರಿ ತಂತ್ರಜ್ಞಾನ ರೂಪಿಸುವಲ್ಲಿ ಸದಾ ಮುಂದಿರುವ ಚೀನಾ ಇದೀಗ ಸೊಳ್ಳೆ ಗಾತ್ರದ ರೊಬೋಟ್ ಒಂದನ್ನು ರೂಪಿಸಿದೆ. ಇದು ಎಷ್ಟು ಖತರ್ನಾಕ್ ಇದೆ ಎನ್ನುವ ವಿಷಯ ಇಲ್ಲಿದೆ ನೋಡಿ. ಇದರ ವಿಡಿಯೋ ಕೂಡ ವೈರಲ್ ಆಗಿದೆ.
12:50 PM (IST) Jun 27
ಪಂಜಾಬ್ನ ಬಟಾಲಾದಲ್ಲಿ ಕ್ರಿಮಿನಲ್ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿಯಾ ಅವರ ತಾಯಿ ಹರ್ಜಿತ್ ಕೌರ್ ಮತ್ತು ಅವರ ಚಾಲಕ ಕರಣ್ ವೀರ್ ಸಿಂಗ್ ಗುಂಡಿಕ್ಕಿ ಹತ್ಯೆಗೀಡಾಗಿದ್ದಾರೆ.
12:44 PM (IST) Jun 27
ವಸತಿ ಹಂಚಿಕೆ ವಿವಾದದಲ್ಲಿ ತಮ್ಮ ವಿರುದ್ಧದ ಆರೋಪಗಳ ಕುರಿತು ಮುಖ್ಯಮಂತ್ರಿಗಳಿಗೆ ಸ್ಪಷ್ಟನೆ ನೀಡಿರುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
12:30 PM (IST) Jun 27
ದಾವಣಗೆರೆಯಲ್ಲಿ 25 ವರ್ಷದ ಅಳಿಯ 55 ವರ್ಷದ ಅತ್ತೆಯೊಂದಿಗೆ ಓಡಿಹೋಗಿರುವ ಘಟನೆ ನಡೆದಿದೆ. ಮದುವೆಯಾಗಿ ಕೇವಲ ಎರಡು ತಿಂಗಳಿಗೆ ಈ ಘಟನೆ ನಡೆದಿದ್ದು, ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
12:02 PM (IST) Jun 27
ಜೀವನದಲ್ಲಿ ಎಲ್ಲವನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ರಶ್ಮಿಕಾ ವಿವರಿಸಿದ್ದಾರೆ. "ಕೆಲವು ವಿಷಯಗಳು ನಮ್ಮ ಕೈ ಮೀರಿರುತ್ತವೆ, ಅವುಗಳನ್ನು ಬದಲಾಯಿಸಲು ಯತ್ನಿಸಿ ಸಮಯ ವ್ಯರ್ಥ ಮಾಡುವುದು ಬೇಡ.
12:00 PM (IST) Jun 27
11:58 AM (IST) Jun 27
ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಷಣ ಕಾರಣ ಎಂದು ಸಿಸಿಎಫ್ ಹೀರಾಲಾಲ್ ಖಚಿತಪಡಿಸಿದ್ದಾರೆ. ತಾಯಿ ಹುಲಿ ಮತ್ತು ನಾಲ್ಕು ಮರಿಗಳು ವಿಷಪೂರಿತ ಹಸುವಿನ ಮಾಂಸ ಸೇವಿಸಿ ಮೃತಪಟ್ಟಿವೆ.