ಬೆಂಗಳೂರು (ಜು.26): ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ದೊರೆಯದ್ದರಿಂದ ರೈತರು ಕಂಗಾಲಾಗಿದ್ದು, ಗೊಬ್ಬರಕ್ಕಾಗಿ ಕೃಷಿ ಚಟುವಟಿಕೆ ಬಿಟ್ಟು ಅಂಗಡಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಗದಗ, ಹಾವೇರಿ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಅಭಾವ ಸೃಷ್ಟಿ ಯಾಗಿದ್ದು,ಶುಕ್ರವಾರ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಇನ್ನೂ ಕೆಲವು ಕಡೆ ಪೊಲೀಸ್ ಭದ್ರತೆಯಲ್ಲಿ ಗೊಬ್ಬರ ವಿತರಿಸಲಾಗಿದೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
11:22 PM (IST) Jul 26
10:43 PM (IST) Jul 26
ನಿಸಾನ್ ಮ್ಯಾಗ್ನೈಟ್ ಕಾರು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಗಿದೆ. ವಿಶೇಷ ಅಂದರೆ ಮ್ಯಾಗ್ನೈಟ್ ಕಾರು ಸುರಕ್ಷತಾ ರೇಟಿಂಗ್ನಲ್ಲಿ 5 ಸ್ಟಾರ್ ಪಡೆದುಕೊಂಡಿದೆ. ಇದರ ಬೆಲೆ, ಫೀಚರ್ಸ್ ಏನು?
10:05 PM (IST) Jul 26
09:48 PM (IST) Jul 26
ಆಟವಾಡುತ್ತಿದ್ದ ವೇಳೆ ಸಾಗಿ ಬಂದ ನಾಗರ ಹಾವನ್ನು ಮಗು ಆಟಿಕೆ ಎಂದು ತಿಳಿದು ಕೈಯಲ್ಲಿ ಹಿಡಿದು ಕಚ್ಚಿದೆ. ಇದರ ಪರಿಣಾಮ ಅಸ್ವಸ್ಥಗೊಂಡಿದ್ದ 1 ವರ್ಷದ ಮಗು ಆಸ್ಪತ್ರೆಯಲ್ಲಿ ಚೇತರಿಕೆ ಕಂಡಿದ್ದರೆ, ವಿಷ ಸರ್ಪ ಸತ್ತಿದೆ.
09:09 PM (IST) Jul 26
ಡಿಸಿಎಂ ಡಿಕೆ ಶಿವಕುಮಾರ್ ಕೋಡಿ ಶ್ರೀಗಳ ಭೇಟಿ ಮಾಡಿದ್ದಾರೆ. ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ಡಿಕೆಶಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ನಾನು ಏನು ಪ್ರಾರ್ಥನೆ ಬೇಕೋ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
08:32 PM (IST) Jul 26
ಧರ್ಮಸ್ಥಳ ತೆಲೆಬುರುಡೆ ಪ್ರಕರಣದ ವಿಚಾರಣೆ ತೀವ್ರಗೊಂಡಿದೆ. ಎಸ್ಐಟಿ ಅಧಿಕಾರಿಗಳು ದೂರು ನೀಡಿದ್ದ ಮುಸುಕುಧಾರಿ ವ್ಯಕ್ತಿಯನ್ನು ಸತತ 8 ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ.ಇಂದಿನ ವಿಚಾರಣೆ ಅಂತ್ಯಗೊಂಡ ಬೆನ್ನಲ್ಲೇ ಮುಸುಕುಧಾರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
08:05 PM (IST) Jul 26
ಪ್ರವಾಹ, ಭೂಕುಸಿತ, ಭೂಕಂಪ ಸೇರಿ ಹಲವು ವಿಕೋಪಗಳಿಂದ ಜನರು ಹೈರಾಣಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಭೂಮಿಯ ಸರ್ವನಾಶಕ್ಕೆ ಏಲಿಯನ್ ಟೊಂಕ ಕಟ್ಟಿ ನಿಂತಿದೆಯಾ? ಹೌದು ಎನ್ನುತ್ತಿದೆ ವಿಜ್ಞಾನಿಗಳ ವರದಿ. ನವೆಂಬರ್ನಲ್ಲಿ ಏಲಿಯನ್ ಬಾಹ್ಯಾಕಾಶ ನೌಕೆ ಭೂಮಿ ಮೇಲೆ ದಾಳಿ ಮಾಡಲಿದೆ ಎಂದು ಅಧ್ಯಯನ ವರದಿ ಹೇಳಿದೆ.
07:08 PM (IST) Jul 26
ಕ್ಯಾಪ್ಟನ್ ಯಶಿಕಾ ತ್ಯಾಗಿ ರೋಚಕ ಪಯಣ ಎಲ್ಲರಿಗೂ ಸ್ಪೂರ್ತಿಯಾಗಿದೆ. ಪುಟ್ಟ ಮಗುವನ್ನು ಬೆನ್ನ ಮೇಲೆ ಹೊತ್ತು, ಗರ್ಭಿಣಿಯಾಗಿದ್ದ ಕ್ಯಾಪ್ಟನ್ ಯಶಿಕಾ ತ್ಯಾಗಿ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಸೇವೆ ಸಲ್ಲಿಸಿದ್ದರು. ಕಾರ್ಗಿಲ್ ವಿಜಯ್ ದಿವಸದ ಈ ದಿನ ಹೆಮ್ಮೆಯ ಸೇನಾಧಿಕಾರಿ ಯಶಿಕಾ ರೋಚಕ ಪಯಣ ಇಲ್ಲಿದೆ.
06:19 PM (IST) Jul 26
06:18 PM (IST) Jul 26
ಬೆಂಗಳೂರಿನಲ್ಲಿ ಮಹೀಂದ್ರ ಹೊಸ 3XO REVX ಕಾರು ಬಿಡುಗಡೆ ಮಾಡಿದೆ. ಹೊಸ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆ ಅತ್ಯಾಕರ್ಷಕ ಕಾರಿನ ಬೆಲೆ ಎಷ್ಟು?
05:52 PM (IST) Jul 26
05:32 PM (IST) Jul 26
ಸಚಿವ ಎಂಬಿ ಪಾಟೀಲ್ ಸಿಎಂ ಪುತ್ರ ಡಾ. ಯತೀಂದ್ರ ಅವರ 'ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ಗಿಂತ ಸಿದ್ದರಾಮಯ್ಯ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ' ಎಂಬ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
05:16 PM (IST) Jul 26
ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ ಯುವತಿ ಅಸ್ವಸ್ಥಗೊಂಡು ಕುಸಿದು ಬಿದ್ದ ಯುವತಿಯನ್ನು ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿದೆ. ಆದರೆ ದುರಂತ ಅಂದರೆ ಯುವತಿನ್ನು ಆಸ್ಪತ್ರೆ ಸಾಗಿಸುವ ನಡುವೆ ಆ್ಯಂಬುಲೆನ್ಸ್ನಲ್ಲಿ ಸಾಮೂಹಿಕ ಅತ್ಯಾ*ರ ನಡೆಸಲಾಗಿದೆ.
04:42 PM (IST) Jul 26
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ದೂರು ನೀಡಿದ ಮುಸುಕುಧಾರಿ ವ್ಯಕ್ತಿಯನ್ನು ಕಳೆದ 5 ಗಂಟೆಗಳಿಂದ ಸತತ ವಿಚಾರಣೆ ನಡೆಸಲಾಗುತ್ತಿದೆ. ಎಸ್ಐಟಿ ತಂಡ ಮಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ಇದೀಗ ತನಿಖೆ ತೀವ್ರಗೊಂಡಿದೆ.
04:05 PM (IST) Jul 26
ಫ್ರೆಂಡ್ಶಿಪ್ ಇದೆ ಎಂದ ಮಾತ್ರಕ್ಕೆ ಅದು ನಿಮಗೆ ದೈಹಿಕ ಸಂಪರ್ಕಕ್ಕೆ ಕೊಟ್ಟ ಅನುಮತಿಯಲ್ಲ ಎಂದು ಹೈಕೋರ್ಟ್ ಅತ್ಯಾ*ರ ಆರೋಪಿ/ ಜಾಮೀನು ನಿರಾಕರಿಸಿದ ಘಟನೆ ನಡೆದಿದೆ.
03:56 PM (IST) Jul 26
03:19 PM (IST) Jul 26
01:53 PM (IST) Jul 26
01:33 PM (IST) Jul 26
Indian Railways: ಈ ರೈಲುಗಳು ಗೋವಾದ ವಾಸೋ-ಡ-ಗಾಮಾದಿಂದ ವೇಲಂಕಣಿಗೆ ಮತ್ತು ವಾಪಸ್ ಸಂಚರಿಸಲಿದ್ದು, ಆಗಸ್ಟ್ 27 ರಿಂದ ಸೆಪ್ಟೆಂಬರ್ 8 ರವರೆಗೆ ಕಾರ್ಯನಿರ್ವಹಿಸುತ್ತವೆ. ಜಾತ್ರೆಗೆ ತೆರಳುವ ಭಕ್ತರಿಗೆ ಈ ರೈಲುಗಳು ಅನುಕೂಲಕರವಾಗಲಿವೆ.
01:26 PM (IST) Jul 26
12:20 PM (IST) Jul 26
ಮಹದಾಯಿ ವಿಚಾರವಾಗಿ ತಮ್ಮ ವಿರುದ್ಧ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12:08 PM (IST) Jul 26
ನಾಲ್ವಡಿ ಕೃಷ್ಣರಾಜ ಒಡೆಯರ್ಗಿಂತ ಸಿದ್ದರಾಮಯ್ಯ ಮೈಸೂರನ್ನು ಹೆಚ್ಚು ಅಭಿವೃದ್ಧಿಪಡಿಸಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಎಚ್.ವಿಶ್ವನಾಥ್ ತೀವ್ರವಾಗಿ ಖಂಡಿಸಿದ್ದಾರೆ. ಸಿದ್ದರಾಮಯ್ಯ ಕುಟುಂಬದಲ್ಲಿ ಅಹಂಕಾರ ವಂಶವಾಹಿಯಾಗಿ ಬಂದಿದೆ ಎಂದು ಆರೋಪಿಸಿದ್ದಾರೆ.
11:51 AM (IST) Jul 26
ಆಗ ಕಾರ್ಗಿಲ್, ಲಡಾಕ್ ಜಿಲ್ಲೆಯ ತಾಲೂಕು ಅಗಿತ್ತು. ಕಾಶ್ಮೀರದಿಂದ 200 ಕಿ.ಮೀ. ದೂರದಲ್ಲಿ ಇರುವ ಕಾರ್ಗಿಲ್ ಮೂಲಕ ರಾಷ್ಟ್ರೀಯ ಹೆದ್ದಾರಿ 1 ಹಾದು ಹೋಗುತ್ತಿತ್ತು.
11:33 AM (IST) Jul 26
ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಅವರ ಹಠಾತ್ ಮರಣದ ನಂತರ ಸೋನಾ ಕಾಮ್ಸ್ಟರ್ನಲ್ಲಿ ಕೌಟುಂಬಿಕ ವಿವಾದ ಭುಗಿಲೆದ್ದಿದೆ. ಸಂಜಯ್ ಅವರ ತಾಯಿ ರಾಣಿ ಕಪೂರ್, ಸೊಸೆ ಪ್ರಿಯಾ ಸಚ್ದೇವ್ ಕಪೂರ್ ಅವರನ್ನು ಮಂಡಳಿಗೆ ನೇಮಕ ಮಾಡಿದ್ದನ್ನು ಪ್ರಶ್ನಿಸಿದ್ದಾರೆ.
11:00 AM (IST) Jul 26
10:35 AM (IST) Jul 26
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (SIT) ಮಂಗಳೂರಿಗೆ ಆಗಮಿಸಿದೆ. ತನಿಖಾಧಿಕಾರಿಗಳು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ.
09:41 AM (IST) Jul 26
ಕೊರೋನಾ ಕಾಲದಲ್ಲಿ ರೋಗ ನಿರೋಧಕತೆ ಹೆಚ್ಚಿಸಲು ಶುರುವಾದ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ ನ್ಯೂಟ್ರಿ ಮೊರಿಂಗಾ ಎಂಬ ಬ್ರ್ಯಾಂಡ್ ಹುಟ್ಟಿಕೊಂಡಿದೆ.
08:59 AM (IST) Jul 26
ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚುವುದಕ್ಕೆ ಗ್ಯಾರಂಟಿ ಯೋಜನೆ ಕಾರಣ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
08:51 AM (IST) Jul 26
ಸೆಪ್ಟೆಂಬರ್ ಕ್ರಾಂತಿ ಹೇಳಿಕೆಗೆ ಈಗಲೂ ಬದ್ಧ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.
08:40 AM (IST) Jul 26
ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಳ್ಳಲಾದ ಮತ್ತು ಇಎಸ್ಪಿಎನ್ ಕ್ರಿಕ್ಇನ್ಫೋ ಪಡೆದುಕೊಂಡ ವರದಿಯಲ್ಲಿ ಆರ್ಸಿಬಿ ವಿರುದ್ಧ ದೋಷಾರೋಪಣೆ ಮಾಡಲಾಗಿದೆ.
08:34 AM (IST) Jul 26
ಯುಎಲ್ಪಿಜಿಎಂ ಕ್ಷಿಪಣಿ ಕಾರ್ಯಕ್ರಮದ ಮೂಲಕ ಮೂರು ಆವೃತ್ತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲ ಆವೃತ್ತಿಯು ಮಾದರಿ ಕ್ಷಿಪಣಿಯಾಗಿದ್ದು, ಈ ಮೂರು ಆವೃತ್ತಿಗಳನ್ನು ವಿಭಿನ್ನ ಯುದ್ಧ ಸನ್ನಿವೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.
08:32 AM (IST) Jul 26
1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸಾಧಿಸಿದ ಜಯದ ನೆನಪಿಗೆ ಆಚರಿಸಲಾಗುವ ‘ಕಾರ್ಗಿಲ್ ವಿಜಯ ದಿವಸ’ದ ನಿಮಿತ್ತ ಶನಿವಾರ ಸೇನೆಯು 3 ಯೋಜನೆಗಳ ಉದ್ಘಾಟನೆಗೆ ಸಜ್ಜಾಗಿದೆ.
08:21 AM (IST) Jul 26
ತಾವೇ ನೇಮಿಸಿದ ಉಪರಾಷ್ಟ್ರಪತಿಯನ್ನು ಬಿಜೆಪಿ ವರಿಷ್ಠರು ರಾತ್ರೋರಾತ್ರಿ ಕಿತ್ತೊಗೆದಿದ್ದು ಏಕೆ? ಜಗದೀಪ್ ಧನಕರ್ ದಿಢೀರ್ ರಾಜೀನಾಮೆ ರಹಸ್ಯ
08:05 AM (IST) Jul 26
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿ.ದಯಾನಂದ್ ಸೇರಿ ಐವರು ಪೊಲೀಸ್ ಅಧಿಕಾರಿಗಳಿಗೆ ವಿಧಿಸಲಾಗಿದ್ದ ಅಮಾನತು ಆದೇಶ ಹಿಂಪಡೆಯುವ ಕುರಿತು ರಾಜ್ಯ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
07:50 AM (IST) Jul 26
ಗುಂಪು ಹತ್ಯೆ ಕೃತ್ಯಗಳ ಸಂಬಂಧ ಎಫ್ಐಆರ್ ದಾಖಲಿಸುವ ಮುನ್ನ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆಯುವಂತೆ ಸೂಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಸುತ್ತೋಲೆ ಹೊರಡಿಸಿದ್ದಾರೆ.
07:46 AM (IST) Jul 26
ಕರ್ನಾಟಕಕ್ಕೆ ರಸಗೊಬ್ಬರ ಪೂರೈಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ.
07:46 AM (IST) Jul 26
ರಾಜ್ಯದಲ್ಲಿ ಯೂರಿಯಾ ಗೊಬ್ಬರದ ತೀವ್ರ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗದಗ, ಹಾವೇರಿ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಕೆಲವೆಡೆ ಪೊಲೀಸ್ ಭದ್ರತೆಯಲ್ಲಿ ಗೊಬ್ಬರ ವಿತರಣೆ ಮಾಡಲಾಗಿದೆ.
07:45 AM (IST) Jul 26
ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆ ಬಗ್ಗೆ ಅನುಮಾನಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
07:45 AM (IST) Jul 26
ಯೆಮನ್ ದೇಶದಲ್ಲಿ ಕೇರಳದ ನಿಮಿಷ ಪ್ರಿಯಾ ಎಂಬ ನರ್ಸ್ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದ್ದು, ಈ ಪ್ರಕ್ರಿಯೆಯ ಹಿಂದೆ ಕನ್ನಡಿಗ ಡಾ.ಮೌಲಾ ಷರೀಫ್ ಅವರ ಪ್ರಯತ್ನ, ಸುದೀರ್ಘ ಹೋರಾಟವಿದೆ.
07:44 AM (IST) Jul 26
ಅಭಿವೃದ್ಧಿ ಮಾಡಿರುವುದಕ್ಕಾಗಿಯೇ ಸಾಧನಾ ಸಮಾವೇಶ ಮಾಡಿದ್ದು. ಸುಮ್ಮನೇ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.