ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ ಮಾನವೀಯ ದೃಷ್ಟಿಯಿಂದ ದಲಿತರಿಗೆ ಅವಕಾಶ ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ. ಅಧಿಕಾರ ಹಂಚಿಕೆ ವಿಷಯದ ಬಗ್ಗೆ ನಾನೇನೂ ಮಾತನಾಡುವುದಕ್ಕೆ ಹೋಗುವುದಿಲ್ಲ. ಅದೆಲ್ಲವೂ ನಮ್ಮ ಹೈಕಮಾಂಡ್ಗೆ ಬಿಟ್ಟ ವಿಚಾರ. ಆದರೆ, ಸಿಎಂ ಬದಲಾವಣೆ ಸಂದರ್ಭ ಬಂದಲ್ಲಿ ದಲಿತರಿಗೆ ಒಂದು ಅವಕಾಶ ನೀಡಬೇಕು. ದಲಿತ ಸಮುದಾಯಗಳ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಬೆಳಗಾವಿ ಅಧಿವೇಶನದ ವೇಳೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸ್ವಾಭಾವಿಕವಾಗಿ ಊಟಕ್ಕೆ ಕರೆದಿದ್ದರು ಅಷ್ಟೇ. ರಾಜಕೀಯ ವಿಚಾರಗಳೇನೂ ಅಲ್ಲಿ ಚರ್ಚೆಯಾಗಿಲ್ಲ ಎಂದು ಹೇಳಿದರು.

10:36 AM (IST) Dec 23
ಈಗಾಗಲೇ ಇರುವ ಕಾನೂನುಗಳ ಅಡಿ ಪ್ರಕರಣಗಳು ದಾಖಲಾಗಿವೆ. ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಅಪರಾಧ ಸಾಬೀತಾಗಿ ಶಿಕ್ಷೆಯೂ ಆಗಿದೆ. ಹೀಗಿರುವಾಗ ಈ ಹೊಸ ಕಾನೂನಿನ ಅಗತ್ಯವೇನಿತ್ತು?
10:29 AM (IST) Dec 23
ಸಮಾಜದಲ್ಲಿ ಸದ್ಯ ಹೆಚ್ಚುತ್ತಿರುವ ದ್ವೇಷ ಭಾಷಣದಿಂದ ಸಾಮರಸ್ಯ, ಶಾಂತಿ/ಸುವ್ಯವಸ್ಥೆ, ಭ್ರಾತೃತ್ವ ಮತ್ತು ಶಾಸನಬದ್ಧ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಾಗರಿಕ ಸಮಾಜದ ಹಿತದೃಷ್ಟಿಯಿಂದ ದ್ವೇಷ ಭಾಷಣ ಸರಿಯಲ್ಲ.
10:21 AM (IST) Dec 23
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾರನ್ನು ಒಂದು ಮಾಡಲು ಮುತ್ತಜ್ಜಿ, ಮೊಮ್ಮಕ್ಕಳು ಒಂದಾಗಿದ್ದಾರೆ. ಹೀಗೆ ಹೊಸ ಗೇಮ್ ಆಡುತ್ತಿದ್ದಾರೆ. ಇದು ಯಾರಿಗೆ ಗೊತ್ತಾಗಬೇಕಿತ್ತೋ ಅವರಿಗೆ ಗೊತ್ತಾಗಿಲ್ಲ.
10:19 AM (IST) Dec 23
ಪ್ರಭುದೇವ ಅವರ 'ವಾಂಟೆಡ್' ಚಿತ್ರದ ಮೂಲಕ ಸಲ್ಮಾನ್ ಖಾನ್ ಅವರ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಶುರುವಾಯಿತು, ಇದರಿಂದಾಗಿ ಅವರು 2010ರ ದಶಕದಲ್ಲಿ ಬಾಕ್ಸ್ ಆಫೀಸ್ನಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡರು.
09:26 AM (IST) Dec 23
ಟಿವಿಎಸ್ ಎನ್ಟಾರ್ಕ್ 150. ಕ್ಯೂಟ್ ಆದ ದೇಹಾಕಾರ, ಎದ್ದು ಕಾಣುವಂತಹ ಬಣ್ಣಗಳ ಸಂಯೋಜನೆ ಹೊಂದಿರುವ ಎನ್ಟಾರ್ಕ್ ಓಡಿಸುತ್ತಿದ್ದರೆ ಒಂದಿಬ್ಬರಾದರೂ ಹಿಂತಿರುಗಿ ನೋಡುತ್ತಾರೆ. ಅಷ್ಟರ ಮಟ್ಟಿಗೆ ಈ ಸ್ಕೂಟರ್ ಗೆದ್ದಿದೆ.
09:23 AM (IST) Dec 23
Karna Kannada Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಕರ್ಣ ಧಾರಾವಾಹಿಯಲ್ಲಿ ತೇಜಸ್ ಹಾಗೂ ನಿತ್ಯಾ ಮುಖಾಮುಖಿಯಾಗಿದ್ದಾರೆ. ಈಗ ಸತ್ಯ ಹೊರಬಂದಿದೆ. ಆದರೆ ಇಲ್ಲಿ ಎಡವಟ್ಟು ಆಗುವ ಲಕ್ಷಣಗಳು ಕಾಣುತ್ತಿವೆ. ಹಾಗಾದರೆ ಏನಾಗಬಹುದು?
09:14 AM (IST) Dec 23
ತುಂಗಭದ್ರಾ ನದಿಯ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
08:21 AM (IST) Dec 23
ಬಿಗ್ಬಾಸ್ ಸ್ಪರ್ಧಿ 'ಗಿಲ್ಲಿ' ನಟನ 'ಡೆವಿಲ್' ಚಿತ್ರದ ಟ್ರೈಲರ್ ಪ್ರಸಾರವಾಗದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಘಟನೆಗೆ ನಟ ದರ್ಶನ್ ಅವರೇ ಕಾರಣ ಎಂದು ನಿರ್ದೇಶಕ ಆರೋಪಿಸಿದ್ದಾರೆ. ದರ್ಶನ್ ಈ ಹಿಂದೆ ನೀಡಿದ್ದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
07:48 AM (IST) Dec 23
Bigg Boss ಎನ್ನುವುದು ಒಂದು ರಿಯಾಲಿಟಿ ಶೋ. ಈ ಶೋ ಗೆಲ್ಲಲು ಸ್ಪರ್ಧಿಗಳು ಮನೆಯೊಳಗಡೆ ಕೂತು ಆಡೋದು ಒಂದುಕಡೆಯಾದರೆ, ಹೊರಗಡೆ ಅವರ ಕುಟುಂಬ ಅಥವಾ ಪಿಆರ್ಗಳು ಮಾಡೋ ತಂತ್ರ ಬೇರೆಯದೇ ಇರುತ್ತದೆ. ಈಗ ಗಿಲ್ಲಿ ನಟನ ಪಿಆರ್ ಟೀಂ ಬಗ್ಗೆ ರಜತ್ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
07:29 AM (IST) Dec 23