Published : Jul 22, 2025, 07:42 AM ISTUpdated : Jul 22, 2025, 11:05 PM IST

Karnatata Latest News Live: ಸರ್ಕಾರದ ನಿಯಂತ್ರಣಕ್ಕೆ ಬಿಸಿಸಿಐ, ರಾಷ್ಟ್ರೀಯ ಕ್ರೀಡಾ ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಸಿದ್ಧತೆ

ಸಾರಾಂಶ

ಬೆಂಗಳೂರು (ಜು.22): ಮುಡಾ ಹಗರಣದ ವಿಚಾರವಾಗಿ ಜಾರಿ ನಿರ್ದೇಶನಾಲದ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕೇಸ್‌ ಇಡಿ ಕುಣಿಕೆಯಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಬಿಎಂ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ ರಿಲೀಫ್‌ ನೀಡಿದೆ. ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ರಾಜಕೀಯ ಹೋರಾಟಗಳು ಚುನಾವಣೆಯಲ್ಲಿ ನಡೆಯಲಿ, ಇಲ್ಲಿ ಬೇಡ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ತಿಳಿಸಿದೆ. ಅದರೊಂದಿಗೆ ಅಧಿಕಾರ ಹಸ್ತಾಂತರದ ಗೊಂದಲದ ವೇಳೆ ಸಿಎಂಗೆ ಮಹತ್ವದ ರಾಜಕೀಯ ಜಯ ಸಿಕ್ಕಂತಾಗಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:05 PM (IST) Jul 22

ಸರ್ಕಾರದ ನಿಯಂತ್ರಣಕ್ಕೆ ಬಿಸಿಸಿಐ, ರಾಷ್ಟ್ರೀಯ ಕ್ರೀಡಾ ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಸಿದ್ಧತೆ

ವಿಶ್ವದ ಶ್ರೀಮಂತ ಸಂಸ್ಥೆ ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಮಸೂದೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಸೂದೆ ಪ್ರಕಾರ ಇತರ ಕ್ರೀಡಾ ಫೆಡರೇಷನ್ ಮಾದರಿಯಲ್ಲಿ ಬಿಸಿಸಿಐಗೂ ಕೂಡ ಈ ನೆಲಸದ ಕಾನೂನು ಅನ್ವಯವಾಗಲಿದೆ.

Read Full Story

10:59 PM (IST) Jul 22

Breaking News - ಬೆಳಗಾವಿಯಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಅಧಿಕ ಶಾಲಾ ಮಕ್ಕಳು ಅಸ್ವಸ್ಥ!

ಬೆಳಗಾವಿಯ ಮಾರ್ಕಂಡೇಯ ನಗರದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
Read Full Story

10:37 PM (IST) Jul 22

ನೋ ಕ್ಯಾಪ್ ನೋ ಎಂಟ್ರಿ, ಹಿಮೇಶ್ ರೆಶಮಿಯಾ ಕಾನ್ಸರ್ಟ್ ಬೆನ್ನಲ್ಲೇ ಕಾಂಡೋಮ್ ಆ್ಯಡ್ ವೈರಲ್

ಹಿಮೇಶ್ ರೆಶಮಿಯಾ ದೆಹಲಿ ಮ್ಯೂಸಿಕ್ ಕಾನ್ಸರ್ಟ್ ಅದ್ಧೂರಿಯಾಗಿ ನಡೆದಿದೆ. ಜನಸಾಗರವೇ ಸೇರಿತ್ತು. ಹಿಮೇಶ್ ಹಾಡು, ಮ್ಯೂಸಿಕ್ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕಾಂಡೋಮ್ ಜಾಹೀರಾತು ಭಾರಿ ವೈರಲ್ ಆಗಿದೆ.

Read Full Story

09:44 PM (IST) Jul 22

ವಿದ್ಯುತ್ ಬಿಲ್ ಪಾವತಿ ಸೇರಿ ಬೆಸ್ಕಾಂ, 5 ಎಸ್ಕಾಂ ಆನ್‌ಲೈನ್ ಸೇವೆ 2 ದಿನ ಬಂದ್

ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಸೇರಿದಂತೆ ಯಾವುದೇ ರೀತಿಯ ಬೆಸ್ಕಾಂ ಹಾಗೂ 5 ಎಸ್ಕಾಂಗಳ ಆನ್‌ಲೈನ್ ಸೇವೆಗಳು ಎರಡು ದಿನ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.

 

Read Full Story

08:59 PM (IST) Jul 22

ಉದ್ಯೋಗಿ ವೀಕ್ ಪಾಸ್‌ವಾರ್ಡ್ ಹ್ಯಾಕ್, 150 ವರ್ಷದ ಕಂಪನಿಗೆ ಬೀಗ, 700 ಮಂದಿ ಬೀದಿಗೆ

ಪ್ರತಿ ದಿನ ಕೆಲಸ ಸುಲಭವಾಗಲು ಸುಲಭದ ಪಾಸ್‌ವರ್ಡ್ ಹಾಕಿದ್ದಾನೆ. ಆದರೆ ಹ್ಯಾಕರ್ಸ್ ಈ ಪಾಸ್‌ವರ್ಡ್ ಗೆಸ್ ಮಾಡಿ ಹ್ಯಾಕ್ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ಅಲ್ಪ ಸ್ವಲ್ಪ ನಷ್ಟವಾಗುತ್ತಿತ್ತು. ಆದರೆ ಖದೀಮರು ಕಂಪನಿಯನ್ನೇ ಹ್ಯಾಕ್ ಮಾಡಿ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಕಂಪನಿಗೆ ಬೀಗ ಬಿದ್ದಿದೆ.

 

Read Full Story

08:52 PM (IST) Jul 22

ಕೊಪ್ಪಳ - ಆಗ್ನಿ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ವಿಕಲಚೇತನ ಸಾವು

ಕೊಪ್ಪಳ ತಾಲೂಕಿನ ಗುಳದಳ್ಳಿಯಲ್ಲಿ ನಿನ್ನೆ ಸಂಭವಿಸಿದ ಅಗ್ನಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಕಲಚೇತನ ಸೋಮಪ್ಪ ಬೆಣ್ಣಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹುಲಿಗೆಮ್ಮ ಬೆಣ್ಣಿ ಮನೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.
Read Full Story

08:15 PM (IST) Jul 22

ಮಗನೊಂದಿಗೆ ನದಿಗೆ ಜಿಗಿದ ತಾಯಿ, 4 ದಿನಗಳ ಬಳಿಕ 3 ವರ್ಷದ ಮಗುವಿನ ಮೃತದೇಹ ಪತ್ತೆ

ಎರಡೂ ವರೆ ವರ್ಷದ ಮಗುವಿನೊಂದಿಗೆ ಸೇತುವೆ ಮೇಲಿನಿಂದ ನದಿಗೆ ಜಿಗಿದ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ತೀವ್ರ ಹುಟುಕಾಟ ನಡೆಸಿದ್ದ ರಕ್ಷಣಾ ತಂಡ ಕೊನೆಗೂ ಮಗುವಿನ ಮೃತದೇಹ ಪತ್ತೆ ಹಚ್ಚಿ ಹೊರತೆಗಿದಿದ್ದಾರೆ.

Read Full Story

07:54 PM (IST) Jul 22

ಮಾಜಿ ಶಾಸಕ ಯಡವಟ್ಟು ಭಾಷಣ; 'ಸರ್ಕಾರಿ ಆಸ್ಪತ್ರೆ ದುರುಪಯೋಗ ಪಡೆಸಿಕೊಳ್ಳಿ' ಎಂದ ರಾಮಪ್ಪ ಲಮಾಣಿ!

ಶಿರಹಟ್ಟಿಯಲ್ಲಿ ನಡೆದ ಸರ್ಕಾರಿ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು ಭಾಷಣದ ವೇಳೆ ಹಲವು ಯಡವಟ್ಟುಗಳನ್ನು ಮಾಡಿಕೊಂಡ ಘಟನೆ ನಡೆದಿದೆ. ಆಸ್ಪತ್ರೆಯ ಸೌಲಭ್ಯಗಳನ್ನು 'ದುರುಪಯೋಗ'ಪಡಿಸಿಕೊಳ್ಳಿ ಎಂದು ಹೇಳುವ ಮೂಲಕ ಸಭಿಕರ ನಗೆಪಾಟಲಿಗೆ ಗುರಿಯಾದರು.
Read Full Story

07:42 PM (IST) Jul 22

ಯುಪಿಐ ಇಲ್ಲ ಕ್ಯಾಶ್ ಓನ್ಲಿ ಅಂದ ಆಟೋ ಚಾಲಕನಿಗೆ ಹಣ ಕೊಡದೇ ಹೋದ ಪ್ರಯಾಣಿಕ

ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ಯುಪಿಐ ಪಾವತಿ ನಿರಾಕರಿಸಿದ್ದು, ಪ್ರಯಾಣಿಕ ಹಣ ಪಾವತಿಸದೆ ಹೋಗಿರುವ ಘಟನೆ ವರದಿಯಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Read Full Story

07:29 PM (IST) Jul 22

ವೈದ್ಯರ ಭೇಟಿಗೆ 5 ನಿಮಿಷ ಕಾಯುವಂತೆ ಹೇಳಿದ ರಿಸೆಪ್ಶನಿಸ್ಟ್ ಮೇಲೆ ವ್ಯಕ್ತಿಯಿಂದ ಹಲ್ಲೆ, ವಿಡಿಯೋ

ವೈದ್ಯರ ಭೇಟಿಗೆ ಒಂದ್ ಐದ್ ನಿಮಿಷ ಕುಳಿತುಕೊಳ್ಳಿ. ಕ್ಲೀನಿಕ್‌ ರಿಸೆಪ್ಶನಿಸ್ಟ್ ಇಷ್ಟು ಹೇಳಿದ್ದೇ ತಡ, ವ್ಯಕ್ತಿಯೊಬ್ಬ ಗರಂ ಆಗಿದ್ದಾನೆ. ಮಹಿಳಾ ರೆಸೆಪ್ಶನಿಸ್ಟ್ ಕೂದಲು ಹಿಡಿದೆಳೆದು ಹಲ್ಲೆ ಮಾಡಿದ ಘಟನೆ ನಡೆದಿದೆ.

 

Read Full Story

06:56 PM (IST) Jul 22

ಧರ್ಮಸ್ಥಳದಲ್ಲಿ ನಿಗೂಢ ಸಾವು ಪ್ರಕರಣ - ಈ ಕಾರಣಕ್ಕೆ ಘಟನಾ ಸ್ಥಳಕ್ಕೆ ಎಸ್ ಐ ಟಿ ಭೇಟಿ ನೀಡ್ತಿಲ್ಲ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ತನಿಖೆಗಾಗಿ ಎಸ್ಐಟಿ ರಚನೆಯಾಗಿದೆ. ತನಿಖಾ ತಂಡವು ಸ್ಥಳಕ್ಕೆ ಭೇಟಿ ನೀಡುವ ದಿನಾಂಕ ಇನ್ನೂ ಅಂತಿಮವಾಗಿಲ್ಲ. ರಾಜಕೀಯ ವಲಯದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.
Read Full Story

06:48 PM (IST) Jul 22

ಸವದತ್ತಿಯಲ್ಲಿ ಆಘಾತಕಾರಿ ಘಟನೆ, ಕೋರ್ಟ್ ಆವರಣದಲ್ಲೇ ಗಂಡನಿಂದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ!

ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಪತಿಯಿಂದ ಪತ್ನಿ ಮತ್ತು ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ-ಮಗಳು.
Read Full Story

06:45 PM (IST) Jul 22

Breaking ದೆಹಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ

ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಲ್ಯಾಂಡ್ ಆಗುತ್ತಿದ್ದಂತೆ ದಿಡೀರ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Read Full Story

06:22 PM (IST) Jul 22

ದಾವಣಗೆರೆ - ವೀರಶೈವ ಲಿಂಗಾಯತ ಶೃಂಗ ಸಮ್ಮೇಳನದಲ್ಲಿ ರಂಭಾಪುರಿ ಶ್ರೀಗಳಿಂದ 12 ಮಹತ್ವದ ನಿರ್ಣಯಗಳು, ಸಂಪೂರ್ಣ ವಿವರ ಇಲ್ಲಿದೆ

ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಲಿಂಗಾಯತ ಸಮುದಾಯದ ಏಕತೆ ಮತ್ತು ಹಕ್ಕುಗಳಿಗಾಗಿ 12 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜನಗಣತಿಯಲ್ಲಿ 'ವೀರಶೈವ ಲಿಂಗಾಯತ' ಎಂದು ನೋಂದಾಯಿಸಿಕೊಳ್ಳುವಂತೆ ಸೂಚಿಸಿಲಾಗಿದೆ.

Read Full Story

06:15 PM (IST) Jul 22

18 ತಿಂಗಳ ಸಂಸಾರಕ್ಕೆ ವಿಚ್ಛೇದನ ವೇಳೆ 18 ಕೋಟಿ ರೂಪಾಯಿಗೂ ಜೀವನಾಂಶ ಕೇಳಿದ ಪತ್ನಿ

ಮದುವೆಯಾಗಿ 18 ತಿಂಗಳಿಗೆ ವಿಚ್ಚೇದನ ಅರ್ಜಿ ಕೋರ್ಟ್ ಮೆಟ್ಟಿಲೇರಿದೆ. ಪತಿಯಿಂದ ಜೀವನಾಂಶವಾಗಿ ಪತ್ನಿ ಕೇಳಿದ್ದು 12 ಕೋಟಿ ರೂಪಾಯಿ, ಮುಂಬೈನಲ್ಲೊಂದು ಮನೆ, BMW ಕಾರು. ಈ ಬೇಡಿಕೆ ಆಲಿಸಿದ ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆಯೊಂದನ್ನು ಕೇಳಿದೆ.

 

Read Full Story

06:11 PM (IST) Jul 22

ಧರ್ಮಸ್ಥಳ ವಿರುದ್ಧವಲ್ಲ, ವ್ಯಕ್ತಿಗಳ ವಿರುದ್ಧ ತನಿಖೆ ಆಗಲಿ - ಸಿಟಿ ರವಿ

ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆಗೆ ಸಿ.ಟಿ. ರವಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಟನಲ್ ರಸ್ತೆ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Read Full Story

06:06 PM (IST) Jul 22

'ಗುಂಡೇಟಿಗೆ ಖ್ಯಾತ ನಟಿ Shilpa Shirodkar ಬಲಿ'! ಪತ್ರಿಕೆಗಳಲ್ಲಿ ಬಂದ ಸುದ್ದಿಯ ಹಿಂದಿತ್ತು ವಿಚಿತ್ರ ಕಾರಣ...

ಸಿನಿಮಾದ ಶೂಟಿಂಗ್​ ಸಮಯದಲ್ಲಿ ಗುಂಡೇಟಿಗೆ ತಾವು ಬಲಿಯಾಗಿರುವ ಸುದ್ದಿ ಪತ್ರಿಕೆಗಳಲ್ಲಿ ನೋಡಿ ನಟಿ ಶಿಲ್ಪಾ ಶಿರೋಡ್​ಕರ್​ ಮೂರ್ಚೆ ಹೋಗಿದ್ದರಂತೆ. ಆ ಘಟನೆಯನ್ನು ವಿವರಿಸಿದ್ದಾರೆ ನೋಡಿ!

 

Read Full Story

05:53 PM (IST) Jul 22

ಧರ್ಮಸ್ಥಳಕ್ಕೆ ತೆರಳಿದ್ದ ಕೊಪ್ಪಳದ ಶಿಕ್ಷಕ ಕೊಳೆತ ಶವವಾಗಿ ಪತ್ತೆ!

ಕೊಪ್ಪಳ ಜಿಲ್ಲೆಯ ಶಿಕ್ಷಕರೊಬ್ಬರು ಧರ್ಮಸ್ಥಳದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಶಾಲೆಯಿಂದ ಕಾಣೆಯಾಗಿದ್ದ ಶಿಕ್ಷಕರ ಸಾವಿನ ಸುತ್ತ ಅನುಮಾನಗಳು ಕಾಡುತ್ತಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

05:20 PM (IST) Jul 22

Vinay Kashyap Simha - ಬೀಡಿ ಸೇದಲು ಹೋಗಿ ತುಟಿ, ರೆಪ್ಪೆ ಸುಟ್ಟುಕೊಂಡ 'ಕರ್ಣ' ಸೀರಿಯಲ್​ ನಾಯಕ!

ನಾಟಕಕ್ಕಾಗಿ ಮೊದಲ ಬಾರಿಗೆ ಬೀಡಿ ಸೇದಲು ಹೋಗಿ ತುಟಿ, ರೆಪ್ಪೆ ಎಲ್ಲಾ ಸುಟ್ಟುಕೊಂಡು ಪಡಬಾರದ ಪಾಡುಪಟ್ಟ ಬಗ್ಗೆ ಕರ್ಣ ಸೀರಿಯಲ್​ ಕರ್ಣ ಉರ್ಫ್​ ವಿನಯ್​ ಕಶ್ಯಪ್​ ಹೇಳಿದ್ದಾರೆ ಕೇಳಿ...

 

Read Full Story

03:53 PM (IST) Jul 22

Gagan Chinnappa - ಸೀತಾ ಮದ್ವೆಯಾಯ್ತು, ರಾಮಂದು ಯಾವಾಗ? ಕುತೂಹಲದ ಪೋಸ್ಟ್​ ಹಾಕಿದ ನಟನಿಗೆ ಪ್ರಶ್ನೆ

ಸೀತಾರಾಮ ಸೀರಿಯಲ್​ ಸೂಪರ್​ ಜೋಡಿಯಾಗಿದ್ದ ವೈಷ್ಣವಿ ಗೌಡ ಮತ್ತು ಗಗನ್​ ಚಿನ್ನಪ್ಪ ಅವರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ವೈಷ್ಣವಿ ಅವರ ಮದುವೆಯಾಗಿದ್ದು, ಈಗ ಗಗನ್​ ಅವರ ಮದ್ವೆ ಯಾವಾಗ ಎಂದು ಕೇಳ್ತಿರೋ ನಡುವೆಯೇ ನಟ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. ಏನಿದೆ ಅದರಲ್ಲಿ?

 

Read Full Story

03:52 PM (IST) Jul 22

ಡಿಸಿಎಂ ಹೇಳಿದಂತೆ ಕೋತಿ ತಾ ತಿಂದು ಮೇಕೆ ಬಾಯಿಗೆ ವರಸಿದಂತೆ ಆಯ್ತು, ತೆರಿಗೆ ನೋಟಿಸ್‌ ಗೆ ಸಿ.ಟಿ. ರವಿ ಗರಂ

ಸಿಟಿ ರವಿ ಅವರು ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಣ್ಣ ವ್ಯಾಪಾರಿಗಳಿಗೆ ನೀಡಿರುವ ವಾಣಿಜ್ಯ ತೆರಿಗೆ ನೋಟಿಸ್‌ಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ರಾಜ್ಯದ ಖಜಾನೆ ಖಾಲಿ ಇರುವುದನ್ನು ಒಪ್ಪಿಕೊಳ್ಳುವಂತೆ ಸರ್ಕಾರಕ್ಕೆ ಸವಾಲು ಹಾಕಿದರು.
Read Full Story

03:40 PM (IST) Jul 22

ಆ.15ರಿಂದ ಟೋಲ್ ಪಾಸ್ ಜಾರಿ, ಬೆಂಗಳೂರು-ಚೆನ್ನೈ ಪ್ರಯಾಣಿಕರಿಗೆ 7,680 ರೂ ಉಳಿತಾಯ

ವಾರ್ಷಿಕ ಟೋಲ್ ಪಾಸ್ ನಿಯಮ ಆಗಸ್ಟ್ 15ರಿಂದ ಜಾರಿಯಾಗುತ್ತಿದೆ. ಕಾರು, ವ್ಯಾನ್, ಜೀಪ್ ಸೇರಿದಂತೆ ಖಾಸಗಿ ವಾಹನಗಳು ವಾರ್ಷಿಕ ಟೋಲ್ ಪಾಸ್ ಪಡೆಯಬುಹುದು. ಟೋಲ್ ಪಾಸ್ ಬೆಲೆ ಎಷ್ಟು? ಪಾಸ್ ಆ್ಯಕ್ಟಿವೇಟ್ ಮಾಡುವುದರಿಂದ ಎಷ್ಟು ಉಳಿತಾಯ ಮಾಡಬಹುದು?

 

Read Full Story

03:27 PM (IST) Jul 22

ಅಮೆರಿಕದಿಂದ ಮೊದಲ ಬ್ಯಾಚ್‌ನ ಅಪಾಚೆ ಗಾರ್ಡಿಯನ್‌ ಹೆಲಿಕಾಪ್ಟರ್‌ ಸ್ವೀಕರಿಸಿದ ಭಾರತೀಯ ಸೇನೆ!

ಭಾರತೀಯ ಸೇನೆಯು ಅಮೆರಿಕದಿಂದ ಮೂರು ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್‌ಗಳನ್ನು ಸ್ವೀಕರಿಸಿದೆ. ಪಾಕಿಸ್ತಾನದ ಗಡಿಯಲ್ಲಿ ನಿಯೋಜನೆಗೊಳ್ಳಲಿರುವ ಈ ಹೆಲಿಕಾಪ್ಟರ್‌ಗಳು ಸೇನೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. 

Read Full Story

02:53 PM (IST) Jul 22

ಚೀಟಿ ವ್ಯವಹಾರಕ್ಕೂ ಬೀಳುತ್ತಾ ಜಿಎಸ್‌ಟಿ? ವಾಣಿಜ್ಯ ತೆರಿಗೆ ನೋಟೀಸ್ ಗೆ ಆತಂಕಗೊಂಡ ಚೀಟಿ ವ್ಯವಹಾರಗಾರರು

ಯುಪಿಐ ವ್ಯವಹಾರಗಳ ಆಧಾರದ ಮೇಲೆ ಚೀಟಿ ವ್ಯವಹಾರದಲ್ಲಿ ತೊಡಗಿರುವವರಿಗೆ ವಾಣಿಜ್ಯ ತೆರಿಗೆ ನೋಟೀಸ್‌ಗಳು ಹೋಗಿವೆ. ಚೀಟಿ ವ್ಯವಹಾರಗಳ ಮೇಲಿನ ಜಿಎಸ್‌ಟಿ ಬಗ್ಗೆ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
Read Full Story

02:42 PM (IST) Jul 22

ಸೋಪ್‌ ಬಾಕ್ಸ್‌ನಲ್ಲಿ 15 ಕೋಟಿ ಮೌಲ್ಯದ ಕೊಕೇನ್‌, ಬೆಂಗಳೂರಿನಲ್ಲಿ ಇಬ್ಬರು ಯುವತಿಯರು ಅರೆಸ್ಟ್‌!

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟ್ ಬಳಿ ಮಣಿಪುರದ ಲಾಲ್ಜಮ್ಲುವೈ ಮತ್ತು ಮಿಜೋರಾಂನ ಲಾಲ್ತಾಂಗ್ಲಿಯಾನಿ ಎಂದು ಗುರುತಿಸಲಾದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.

 

Read Full Story

02:24 PM (IST) Jul 22

ನಿಮಿಷ ಪ್ರಿಯಾ ಗಲ್ಲು ರದ್ದು? Video ಸಂದೇಶದಲ್ಲಿ ಧರ್ಮಗುರು ಕೆ.ಎ.ಪಾಲ್ ಹೇಳಿದ್ದೇನು?

ಯೆಮೆನ್​ನಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ನರ್ಸ್​ ನಿಮಿಷ ಪ್ರಿಯಾ ಅವರ ಶಿಕ್ಷೆ ರದ್ದಾಗಿರುವುದಾಗಿ ಧರ್ಮಗುರು ಕೆ.ಎ ಪಾಲ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಅವರು ನೀಡಿರೋ ಹೇಳಿಕೆ ಏನು?

 

Read Full Story

01:33 PM (IST) Jul 22

ಶ್ರೀಕ್ಷೇತ್ರ ಧರ್ಮಸ್ಥಳ ಬೆನ್ನಿಗೆ ನಿಂತ ಸ್ಪೀಕರ್ ಯು.ಟಿ ಖಾದರ್! ಮತ್ತೆ ಪದ್ಮಲತಾ ಕೇಸ್ ಮುನ್ನಲೆಗೆ

ಧರ್ಮಸ್ಥಳದಲ್ಲಿ ನಡೆದ ಶವ ಹೂತುಹಾಕುವ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ. 39 ವರ್ಷಗಳ ಹಿಂದಿನ ಪದ್ಮಲತಾ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ನ್ಯಾಯಕ್ಕಾಗಿ ಒತ್ತಾಯ ಜೋರಾಗಿದೆ.
Read Full Story

01:14 PM (IST) Jul 22

ಕಾಂತಾರ ಅಧ್ಯಾಯ 1 ಶೂಟಿಂಗ್ ಮುಕ್ತಾಯ, ಆ.2ರಂದು ಬಿಡುಗಡೆ

ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ ಅಧ್ಯಾಯ 1’ ಶೂಟಿಂಗ್‌ ಮುಕ್ತಾಯಗೊಂಡಿದ್ದು, ಆ.2ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಗೊಳ್ಳಲಿದೆ

Read Full Story

01:08 PM (IST) Jul 22

Anchor Anushree - ಅನುಶ್ರೀ ಮದ್ವೆ ಸುದ್ದಿನೇ ಸುಳ್ಳಾ? ಇನ್​ಸ್ಟಾದಲ್ಲಿ ಪೋಸ್ಟ್​ ಹಾಕಿ ಶಾಕ್​ ಕೊಟ್ಟ ನಟಿ!

ಆ್ಯಂಕರ್​ ಅನುಶ್ರೀ ಅವರ ಮದುವೆಯ ಸುದ್ದಿ ಹರಿದಾಡ್ತಿರೋ ಬೆನ್ನಲ್ಲೇ ಕುತೂಹಲದ ಪೋಸ್ಟ್​ ಒಂದನ್ನು ಶೇರ್​ ಮಾಡಿ ಶಾಕ್​ ಕೊಟ್ಟಿದ್ದಾರೆ. ಅದರಲ್ಲಿ ಇರೋದೇನು?

 

Read Full Story

12:39 PM (IST) Jul 22

ಮತ್ತಷ್ಟು ಶಾಲೆಗಳಲ್ಲಿ ಲಾಸ್ಟ್‌ ಬೆಂಚ್‌ಗೆ ಕೊಕ್‌

ಲಾಸ್ಟ್ ಬೆಂಚ್ ಪದ್ಧತಿಗೆ ಕೋಕ್ ನೀಡುವ ಮೂಲಕ ಅರ್ಧ ಚಂದ್ರಾಕೃತಿಯಲ್ಲಿ ಬೆಂಚ್‌ಗಳನ್ನು ಅಳವಡಿಸಿ ಮಕ್ಕಳಿಗೆ ಪಾಠ ಮಾಡುವ ವಿನೂತನ ಪ್ರಯೋಗವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಅನುದಾನಿತ ಮತ್ತು ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಸೋಮವಾರ ಆರಂಭಿಸಿದೆ.

Read Full Story

11:47 AM (IST) Jul 22

ಕೊರೊನಾ ಕಾಲದಲ್ಲಿ ಯಶಸ್ವಿ ಉದ್ಯಮಿಯಾದರು ಈ ಗೃಹಿಣಿ..!

ಕೊರೋನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡವರು, ಉದ್ಯಮ ಮುಚ್ಚಿದವರು ಅಸಂಖ್ಯ. ಕೊರೋನಾ ಜೀವವನ್ನು ಮಾತ್ರವಲ್ಲ ಕೋಟ್ಯಂತರ ಜನರ ಜೀವನವನ್ನೂ ಕಿತ್ತುಕೊಂಡಿತು. ಆದರೆ, ಬೆಂಗಳೂರಿನ ಗೃಹಿಣಿಯೊಬ್ಬರು ಕೊರೋನಾ ಕಾಲದಲ್ಲೇ ಉದ್ಯಮಿಯಾಗಿ ಬೆಳೆದು ನಿಂತರು.

Read Full Story

11:26 AM (IST) Jul 22

ಸ್ಟೇಟ್‌ಮೆಂಟ್‌ ನೀಡಲು ಕೋರ್ಟ್‌ಗೆ ಬಂದಾಗಲೇ ತುಂಬು ಗರ್ಭಿಣಿ ಪೊಲೀಸ್‌ ಅಧಿಕಾರಿಗೆ ರಕ್ತಸ್ರಾವ, ಮುಂದಾಗಿದ್ದೇನು?

ಒಲ್ಲೂರು ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಫರ್ಷದ್ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣದಲ್ಲಿ ಶ್ರೀಲಕ್ಷ್ಮಿ ಅವರು ಹೇಳಿಕೆ ನೀಡಲು ನ್ಯಾಯಾಲಯಕ್ಕೆ ಬಂದಿದ್ದರು.

 

Read Full Story

11:18 AM (IST) Jul 22

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ

ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಹಾಗೂ ಕಾಶಿ ಪೀಠದ ಜಗದ್ಗುರುಗಳು ಒಂದೂವರೆ ದಶಕದ ನಂತರ ಒಂದೇ ವೇದಿಕೆಯಲ್ಲಿ ದರ್ಶನ - ಅಮೃತ ಕ್ಷಣಗಳಿಗೆ ರೇಣುಕಾ ಮಂದಿರ, ದಾವಣಗೆರೆ ಮಹಾನಗರ ಸಾಕ್ಷಿ

Read Full Story

10:20 AM (IST) Jul 22

5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ - ಡಿಕೆಶಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿ 5 ನಗರ ಪಾಲಿಕೆ ರಚನೆ ಕುರಿತಂತೆ ಯಾವುದೇ ಆಕ್ಷೇಪಣೆಗಳಿದ್ದರೂ ಸಾರ್ವಜನಿಕರಷ್ಟೇ ಅಲ್ಲದೆ ಜನಪ್ರತಿನಿಧಿಗಳೂ ಸಲ್ಲಿಸಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Read Full Story

10:10 AM (IST) Jul 22

ಜಿಎಸ್‌ಟಿ ನೋಟಿಸ್‌ಗೆ ಬಿಪಿ ಹೆಚ್ಚಾಗಿದೆ - ವ್ಯಾಪಾರಸ್ಥರು

 ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದಂಡ ಮತ್ತು ಬಡ್ಡಿ ಕಟ್ಟಬೇಕು ಎಂಬ ನೋಟಿಸ್ ನೋಡಿ ನಮಗೆ ರಕ್ತದೊತ್ತಡ (ಬಿ.ಪಿ) ಹೆಚ್ಚಿದ್ದು, ಆತಂಕವಾಗಿದೆ. ನಿತ್ಯದ ದುಡಿಮೆ, ಕೆಲಸ ಕಾರ್ಯಗಳನ್ನು ಬಿಟ್ಟು ಈ ನೋಟಿಸ್‌ಗೆ ಏನು ಮಾಡುವುದು ಎಂಬ ಚಿಂತೆ ಶುರುವಾಗಿದೆ ಎಂದು ಸಣ್ಣ ವ್ಯಾಪಾರಿಗಳು ಅಳಲು ತೋಡಿಕೊಂಡರು.

Read Full Story

09:29 AM (IST) Jul 22

ಸಿದ್ದರಾಮಯ್ಯ ವಿರುದ್ಧ ಇ.ಡಿ ದುರ್ಬಳಕೆ-ಬಿಜೆಪಿಗರು ಕ್ಷಮೆಯಾಚಿಸಲಿ - ಡಾ. ಮಹದೇವಪ್ಪ ಆಗ್ರಹ

ನಾವು ಮಾತನಾಡಲು ಆರಂಭಿಸಿದರೆ ಇ.ಡಿ ವಿರುದ್ಧ ಬಹಳ ಕಟುವಾಗಿ ಮಾತನಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳನ್ನು ನಾವು ಕಂಡಿದ್ದೇವೆ. ಇ.ಡಿ ದೇಶಾದ್ಯಂತ ಈ ರೀತಿಯ ಕೆಟ್ಟ ಪ್ರವೃತ್ತಿ ಹರಡುವುದನ್ನು ನಾವು ಸಹಿಸುವುದಿಲ್ಲ ಎಂದು ಇ.ಡಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

Read Full Story

09:13 AM (IST) Jul 22

ರಾಜ್ಯವ್ಯಾಪಿ ನಾಳೆ, ನಾಡಿದ್ದು ಹಾಲು ಮಾರಾಟ ಬಂದ್‌

ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್‌ ಮಂಗಳವಾರ ಸಂಜೆಯೊಳಗೆ ಹಿಂಪಡೆಯದಿದ್ದರೆ ಜು.23 ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್

Read Full Story

09:08 AM (IST) Jul 22

ನಗದು ಬಹುಮಾನಕ್ಕಾಗಿ ಪ್ಯಾರಾ ಸ್ವಿಮ್ಮರ್‌ಗೆ 10 ವರ್ಷ ಅಲೆದಾಟ, ರಾಜ್ಯ ಸರ್ಕಾರಕ್ಕೆ 2 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌!

ನಗದು ಬಹುಮಾನಕ್ಕಾಗಿ ಪ್ಯಾರಾ ಸ್ವಿಮ್ಮರ್‌, 2023 ರಲ್ಲಿ ಹೈಕೋರ್ಟ್ ಮೊರೆ ಹೋದರು ಮತ್ತು ನೋಟಿಸ್ ಜಾರಿಯಾದ ನಂತರ 4.74 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗಿತ್ತು.

Read Full Story

07:45 AM (IST) Jul 22

ಕೇಂದ್ರದ ಕಪಾಳಕ್ಕೆ ಸುಪ್ರೀಂ ‘ನ್ಯಾಯದಂಡ’ ಚಾಟಿ: ಸಿದ್ದು

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನನ್ನ ಪತ್ನಿ ವಿರುದ್ಧ ತನಿಖೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

 

Read Full Story

07:45 AM (IST) Jul 22

ದರ್ಶನ್‌ ಬೇಲ್‌ ರದ್ದಾಗುತ್ತಾ?: ಇಂದು ಸುಪ್ರೀಂನಲ್ಲಿ ಭವಿಷ್ಯ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

 

Read Full Story

More Trending News