ವಿಜಯನಗರ: ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಡಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ. 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದ ಒಂದೇ ಕುಟುಂಬದ ಮೂವರಾದ ನಾಗಪ್ಪ (56), ಪುತ್ರ ಕೊಟ್ರೇಶ್ (22), ಪುತ್ರಿ ಸುಜಾತಾ (35), ತಿಮ್ಮಲಾಪುರ ಗ್ರಾಮದ ದುರುಗಪ್ಪ (55) ಮೃತರು.
ಕಿತ್ನೂರು ಗ್ರಾಮದ ನಾಲ್ವರು 2 ಬೈಕ್ನಲ್ಲಿ ಕೊಟ್ರೇಶ್ಗೆ ಕನ್ಯೆ ನೋಡಲು ಹೊರಟಿದ್ದಾಗ ಡಣಾಪುರ ಸೇತುವೆ ಬಳಿ ಲಾರಿ 2 ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದರಿಂದ 3 ಮಂದಿ ಸಾವನ್ನಪ್ಪಿದ್ದಾರೆ. ಈ ಮೊದಲೇ 2 ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದ್ದು, ಒಬ್ಬ ಬೈಕ್ ಸವಾರ ಮೃತಪಟ್ಟಿದ್ದಾನೆ. ನಂತರ ಕಾರು ಹಾಗೂ ಸೇತುವೆ ಮೇಲೆ ಬಸ್ ಹಿಂಭಾಗಕ್ಕೆ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಪಲ್ಟಿಯಾಗಿ ಸೇತುವೆ ಕೆಳಗೆ ಬಿದ್ದಿದೆ.
10:01 AM (IST) Apr 20
ಬೆಂಗಳೂರಿನ ಉದ್ಯಮಿ ಅಖಿಲ ಹೇಮಾದ್ರಿ ತಮ್ಮ ಕೋಟಿ ಬೆಲೆಯ ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಕಲಸಿ ರಸ್ತೆ ಗುಂಡಿ ಮುಚ್ಚಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನಾಗರಿಕ ಜವಾಬ್ದಾರಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
09:46 AM (IST) Apr 20
ಹೈನುಗಾರಿಕೆಯಲ್ಲಿ ಕ್ರಾಂತಿಕಾರಕವಾದ ಲಿಂಗನಿರ್ಧಾರಿತ ವೀರ್ಯ ತಂತ್ರಜ್ಞಾನದ ಮೂಲಕ ಇನ್ನು ಮುಂದೆ ಹಸುಗಳು ಹೆಣ್ಣು ಕರುಗಳಿಗೆ ಮಾತ್ರ ಜನ್ಮ ನೀಡಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ₹900 ಸಬ್ಸಿಡಿಯಿಂದಾಗಿ ರೈತರಿಗೆ ಕೇವಲ ₹100ಕ್ಕೆ ಈ ಸೌಲಭ್ಯ ಲಭ್ಯವಾಗಿದೆ.
09:33 AM (IST) Apr 20
09:31 AM (IST) Apr 20
ಬೆಳಗಾವಿಯ ಜ್ಯೋತಿ ನಗರದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದಿಂದ ಬೇಸತ್ತು ಶ್ರೀನಿಧಿ (28) ಎಂಬ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ, ಮೃತಳ ಪೋಷಕರ ದೂರಿನ ಮೇರೆಗೆ ಪತಿ ಸಂತೋಷ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
09:23 AM (IST) Apr 20
08:49 AM (IST) Apr 20
ಕೊಪ್ಪಳ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಎಸಿ ಮತ್ತು ಫ್ಯಾನ್ ಇಲ್ಲದೆ ಕಂದಮ್ಮಗಳು ತೀವ್ರ ಬಿಸಿಲಿನಿಂದ ಬಳಲುತ್ತಿವೆ. ಮಕ್ಕಳ ಪಾಡು ನೋಡಲಾರದೆ ಪಾಲಕರು ಮನೆಯಿಂದಲೇ ಫ್ಯಾನ್ ತಂದು ಅಳವಡಿಸಿದ್ದು, ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
08:31 AM (IST) Apr 20
ರಾಜ್ಯ ಸರ್ಕಾರ ಬೆಂಗಳೂರಿನ ಐದು ನಗರ ಪಾಲಿಕೆಗಳ 2026-27ನೇ ಸಾಲಿನ ಬಜೆಟ್ಗೆ ಕೆಲವು ಮಾರ್ಪಾಡುಗಳೊಂದಿಗೆ ಅನುಮೋದನೆ ನೀಡಿದೆ. ಈ ಆದೇಶದ ಅನ್ವಯ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನಿಂಗ್ ನಿರ್ಮಾಣಕ್ಕೆ 50 ಕೋಟಿ ರೂ. ಸೇರಿದಂತೆ ವಿವಿಧ ಕೆಂಪೇಗೌಡ ಯೋಜನೆಗಳಿಗೆ ಅನುದಾನ ಮೀಸಲಿಡಲು ಸೂಚಿಸಲಾಗಿದೆ.
08:13 AM (IST) Apr 20
ರಾಜ್ಯ ಸರ್ಕಾರವು ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಇದರಿಂದ ಮದ್ಯದ ದರಗಳು ಗಣನೀಯವಾಗಿ ಏರಿಕೆಯಾಗಲಿವೆ. ವಿಶೇಷವಾಗಿ, ಜನಸಾಮಾನ್ಯರು ಹೆಚ್ಚಾಗಿ ಸೇವಿಸುವ 'ಎಕಾನಮಿ' ಬ್ರ್ಯಾಂಡ್ಗಳ ಬೆಲೆಗಳು ಹೆಚ್ಚಾಗಲಿದೆ.
08:13 AM (IST) Apr 20
ಹುಬ್ಬಳ್ಳಿಯ KMCRI ಆಸ್ಪತ್ರೆಯಲ್ಲಿರುವ ರಾಜ್ಯದ ಮೊದಲ "ಜೀವಾಮೃತ ಬ್ಯಾಂಕ್" ಎರಡು ವರ್ಷಗಳಲ್ಲಿ 7147 ತಾಯಂದಿರಿಂದ 1,530 ಲೀಟರ್ ಎದೆಹಾಲು ಸಂಗ್ರಹಿಸಿದೆ. ಈ ಮಹತ್ವದ ಕಾರ್ಯದಿಂದಾಗಿ, ತಾಯಿಯ ಹಾಲಿನ ಕೊರತೆಯಿದ್ದ 2,599 ಶಿಶುಗಳಿಗೆ ಪೌಷ್ಟಿಕಾಂಶ ನೀಡಿ ಅವುಗಳ ಆರೋಗ್ಯ ರಕ್ಷಣೆಯಲ್ಲಿ ಯಶಸ್ವಿಯಾಗಿದೆ.
07:57 AM (IST) Apr 20
ಉಡುಪಿಯ ಉಚ್ಚಿಲದಲ್ಲಿ, ಪತಿಯೊಬ್ಬರು ತಮ್ಮ ಪತ್ನಿಯೇ ಬ್ಯಾಂಕ್ ಲಾಕರ್ ಕೀ ಕದ್ದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿ ನಕಲಿ ಕೀ ತಯಾರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
07:34 AM (IST) Apr 20
ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯು (ಬಿಎಸ್ಡಬ್ಲ್ಯುಎಂಎಲ್) ನಗರದಲ್ಲಿ ತ್ಯಾಜ್ಯವನ್ನು ನಾಲ್ಕು ವಿಧಗಳಾಗಿ ವಿಂಗಡಿಸುವುದನ್ನು ಕಡ್ಡಾಯಗೊಳಿಸಿದೆ. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಮೇಲ್ವಿಚಾರಣೆ ಚುರುಕುಗೊಳಿಸಲು ಹೊಸ ಕೇಂದ್ರೀಕೃತ ಆನ್ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.
07:32 AM (IST) Apr 20
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೇಶ್ವರದ ಮುಕ್ತಿಮಂದಿರಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಹುದ್ದೆಯ ಕುರಿತ ಪ್ರಶ್ನೆಗೆ 'ಕಾಲವೇ ಎಲ್ಲಕ್ಕೂ ಉತ್ತರ ಕೊಡಲಿದೆ' ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
07:21 AM (IST) Apr 20
ರಾಣಿಬೆನ್ನೂರಿನ ನಿಟ್ಟೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶುದ್ಧ ಭಕ್ತಿ ಮತ್ತು ಮಾನವೀಯತೆಯಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದರು.
07:08 AM (IST) Apr 20
ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪದ ಪ್ರಕರಣದಲ್ಲಿ, ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೂ ಆರೋಪಿಗೆ ಕಿರುಕುಳ ನೀಡಿದ ದೂರುದಾರೆ ಮತ್ತು ಪೊಲೀಸ್ ಅಧಿಕಾರಿಗೆ ನ್ಯಾಯಾಲಯವು ತೀವ್ರ ಎಚ್ಚರಿಕೆ ನೀಡಿದೆ. ಕಿರುಕುಳ ಮುಂದುವರಿದರೆ ಇಬ್ಬರನ್ನೂ ಬಂಧಿಸಲು ಆದೇಶಿಸಬೇಕಾಗುತ್ತದೆ ಎಂದಿದೆ.