ಬೆಂಗಳೂರು: ಗುತ್ತಿಗೆದಾರರ ಹೋರಾಟದ ನಂತರದಿಂದ ಬಾಕಿ ಬಿಲ್ ಪಾವತಿಗೆ ಮುಂದಾಗುತ್ತಿರುವ ರಾಜ್ಯ ಸರ್ಕಾರ, ಮಾರ್ಚ್ನಲ್ಲಿ 2 ಸಾವಿರ ಕೋಟಿ ರುಪಾಯಿ ಪಾವತಿ ನಂತರ ಇದೀಗ ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ 300 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಕಳೆದ ತಿಂಗಳು ರಾಜ್ಯ ಗುತ್ತಿಗೆದಾರರ ಸಂಘದಿಂದ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಅದಾದ ನಂತರ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಂತಹಂತವಾಗಿ ಬಾಕಿ ಬಿಲ್ ಪಾವತಿಸುವುದಾಗಿ ತಿಳಿಸಿದ್ದರು.

09:11 PM (IST) Apr 19
ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಪಕ್ಷವನ್ನು ಈ ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
08:53 PM (IST) Apr 19
ಮಾಜಿ ಪ್ರಧಾನಿ ದೇವೇಗೌಡರಿಗೆ 1.25 ಕೋಟಿ ರೂ ಕಾರು ಖರೀದಿಗೆ ರಾಜ್ಯ ಸರ್ಕಾರ ಒಪ್ಪಿಗೆ, ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ. ದೇವೇಗೌಡರಿಗೆ ಸರ್ಕಾರ ನೀಡುತ್ತಿರುವ ಕಾರು ಯಾವುದು?
07:41 PM (IST) Apr 19
07:19 PM (IST) Apr 19
ನಾವು ಪ್ರತಿದಿನ ಬಳಸೋ ಟೂತ್ಬ್ರಷ್ನಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಅದರಲ್ಲೂ ಬಾತ್ರೂಮ್ನಲ್ಲಿ ಬ್ರಷ್ ಇಡುವುದರಿಂದ ಈ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಿದ್ರೆ ಬ್ರಷ್ ಯಾವಾಗ ಬದಲಿಸಬೇಕು?
06:58 PM (IST) Apr 19
Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಕಥೆ ಈಗ ನಿಜಕ್ಕೂ ರೋಚಕ ಘಟ್ಟಕ್ಕೆ ಬಂದಿದೆ. ಉದ್ಯಮಿ ಗೌತಮ್ ದಿವಾನ್ ತನ್ನ ಎಲ್ಲ ಆಸ್ತಿಯನ್ನು ಮಲಸಹೋದರ ಜಯದೇವ್ ದಿವಾನ್ಗೆ ನೀಡಿದ್ದನು. ಈಗ ಅವನು ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾನೆ. ಅವನು ತನ್ನ ಆಸ್ತಿಯನ್ನು ಮರಳಿ ಪಡೆಯುವ ಹಾಗೆ ಕಾಣ್ತಿದೆ.
06:53 PM (IST) Apr 19
06:21 PM (IST) Apr 19
ಫೇಸ್ ಯೋಗಾದಿಂದ ಮುಖದ ಸ್ವರೂಪ ಬದಲಿಸಬಹುದು ಎಂದು ಹೇಳಿದ್ದಕ್ಕೆ ನಟಿ ಪಾರ್ವತಿ ಕೃಷ್ಣ ಟ್ರೋಲ್ ಆಗಿದ್ದಾರೆ. ಇದಕ್ಕೆ ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ಅವರು, ತಮ್ಮ ತರಬೇತಿ ಮತ್ತು ಸರ್ಟಿಫಿಕೇಶನ್ ಬಗ್ಗೆ ಹೇಳಿ ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
06:17 PM (IST) Apr 19
Why celebrities have babies close together: ನಟ ಯಶ್ರಿಂದ ಹಿಡಿದು ದೀಪಿಕಾ ಪಡುಕೋಣೆವರೆಗೆ ಸೆಲೆಬ್ರಿಟಿಗಳು ಮೊದಲ ಮಗು ಹುಟ್ಟಿದ ಎರಡು ವರ್ಷದೊಳಗೆ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಕೆಲವರಿಗೆ ಇದೆಲ್ಲ ಟ್ರೆಂಡ್ ಎನಿಸಬಹುದು. ಇದರ ಹಿಂದೆ ಬೇರೆ ಕಾರಣ ಇವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
05:31 PM (IST) Apr 19
Why trains are faster at night: ಹಗಲಿಗಿಂತ ರಾತ್ರಿ ಹೊತ್ತು ರೈಲು ಹೆಚ್ಚು ವೇಗವಾಗಿ ಚಲಿಸಿದಂತೆ ಭಾಸವಾಗಲು ಮೂರು ಮುಖ್ಯ ಕಾರಣಗಳಿವೆ. ಮೊದಲನೆಯದು ದೃಷ್ಟಿ ಭ್ರಮೆ, ಎರಡನೆಯದು ಸ್ಪಷ್ಟ ಸಿಗ್ನಲ್ಗಳು ಮತ್ತು ಮೂರನೆಯದು ಖಾಲಿ ಟ್ರ್ಯಾಕ್ಗಳು. ಈ ಕುತೂಹಲಕಾರಿ ಕಾರಣಗಳು ಏನು?
05:19 PM (IST) Apr 19
ಜವರಪ್ಪ ಎಂಬುವವರ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿತ್ತು. 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು, ಮೃತನ ಪತ್ನಿ ಅಮೃತಾ ಹಾಗೂ ಆಕೆಯ ಪ್ರಿಯಕರ ಸಿದ್ದೇಶ್ ಈ ಕೃತ್ಯದ ಹಿಂದಿದ್ದಾರೆ ಎಂದು ಪತ್ತೆಹಚ್ಚಿದ್ದಾರೆ. ಆರೋಪಿ ಸಿದ್ದೇಶ್ನನ್ನು ಬಂಧಿಸಲಾಗಿದೆ.
05:09 PM (IST) Apr 19
Actress Shreya Malatesh: ಇತ್ತೀಚೆಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಶ್ರೇಯಾ ಮಾಲತೇಶ್ ಅವರು ಸದ್ಯ ಪ್ರೇಮಕಾವ್ಯ ಸೀರಿಯಲ್ನಲ್ಲಿ ಪಂಚಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಸೀರಿಯಲ್ ಟೀಂ ಜೊತೆಗೆ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ.
04:19 PM (IST) Apr 19
Actor Karanvir Bohra Wife Teejay Sidhu: ನಟ ಕರಣ್ ವೀರ್ ಬೊಹ್ರಾ, ಅವರ ಪತ್ನಿ ತೀಜಯ್ ಸಿಧು ಸದ್ಯ ದೂರ ಇರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಬಾಲಿವುಡ್ನಲ್ಲಿ ಧಾರಾವಾಹಿ, ಸಿನಿಮಾ ಮಾಡುತ್ತಿರುವ ಕರಣ್ ವೀರ್ ಬೊಹ್ರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಪತ್ನಿಯನ್ನು ಕೂಡ ಫಾಲೋ ಮಾಡ್ತಿಲ್ಲ.
03:57 PM (IST) Apr 19
Saregamapa Lil Champs ಖ್ಯಾತ ನಟನ ಪುತ್ರ ಹರುಷ್, ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಮಗನಿಗೆ ತನ್ನಂತೆ 'ನಟನ ಮಗ' ಎಂಬ ಲೇಬಲ್ ಬೇಡ, ಬದಲಿಗೆ ಮಗನಿಂದ ತಾನು ಗುರುತಿಸಿಕೊಳ್ಳಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
03:35 PM (IST) Apr 19
ತೆಲುಗು ನಟ ಶರ್ವಾನಂದ್ (Sharwanand) ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆಯಾಗುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿರುವ ಮದುವೆಯ ಫೋಟೋಗಳನ್ನು ಕೂಡ ಅವರು ಡಿಲಿಟ್ ಮಾಡಿದ್ದಾರೆ.
03:21 PM (IST) Apr 19
ಗಜೇಂದ್ರಗಡದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಥರ್ಡ್ ಐ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು, ಕೆಲ ವಾಹನ ಸವಾರರು ತಮ್ಮ ನೋಂದಣಿ ಸಂಖ್ಯೆಯನ್ನು ಮರೆಮಾಚುತ್ತಿದ್ದಾರೆ ಅಥವಾ ನಂಬರ್ ಪ್ಲೇಟ್ಗಳನ್ನೇ ತೆಗೆದುಹಾಕುತ್ತಿದ್ದಾರೆ.
03:20 PM (IST) Apr 19
03:00 PM (IST) Apr 19
01:05 PM (IST) Apr 19
Thalapathy Vijay Wife Sangeetha Marriage: ನಟ ವಿಜಯ್ಗೆ ಇನ್ನೊಬ್ಬ ನಟಿಯೊಂದಿಗೆ ಸಂಬಂಧವಿದೆ ಮತ್ತು ಅವರೊಂದಿಗೆ ವಿದೇಶದಲ್ಲಿ ಸುತ್ತಾಡಿದ್ದಾರೆ ಎಂದು ಆರೋಪಿಸಿ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.
12:36 PM (IST) Apr 19
12:35 PM (IST) Apr 19
12:25 PM (IST) Apr 19
ಬಿಗ್ಬಾಸ್ ಖ್ಯಾತಿಯ ನಟಿ ರಿಷಾ ಗೌಡ ಅವರು, ಬೆಂಗಳೂರಿನ ಬಸ್ನಲ್ಲಿ ಪ್ರಯಾಣಿಸುವಾಗ ತಮಗಾದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದವನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೆ, ಮಹಿಳೆಯರ ಉಡುಗೆಗೂ ಇಂತಹ ಘಟನೆಗಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
12:14 PM (IST) Apr 19
11:54 AM (IST) Apr 19
11:52 AM (IST) Apr 19
ನಟಿ ಪತ್ರಲೇಖಾ ಅವರು ಮಗುವಿನ ಜನನದ ನಂತರ ದಪ್ಪ ಆಗಿದ್ದಕ್ಕೆ ನೆಟ್ಟಿಗರಿಂದ ಬಾಡಿ ಶೇಮಿಂಗ್ಗೆ ಒಳಗಾಗಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಇದು ಗರ್ಭಧಾರಣೆಯ ನೈಸರ್ಗಿಕ ಪ್ರಕ್ರಿಯೆ, ನಾನು ಬೆಟ್ಟ-ಗುಡ್ಡ ನುಂಗಿಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.
11:31 AM (IST) Apr 19
'ವಾಝಾ 2' ಇಷ್ಟೊಂದು ದೊಡ್ಡ ಹಿಟ್ ಆಗುತ್ತಿದ್ದಂತೆಯೇ ಚಿತ್ರತಂಡ ಮತ್ತೊಂದು ಬಿಗ್ ಅಪ್ಡೇಟ್ ನೀಡಿದೆ. ಹೌದು, ಈಗಲೇ 'ವಾಝಾ 3' ಘೋಷಣೆಯಾಗಿದೆ! ವಿಶೇಷ ಅಂದ್ರೆ, ಮುಂದಿನ ಭಾಗದಲ್ಲಿ ಹುಡುಗರ ಬದಲಿಗೆ ಮಹಿಳಾ ನಾಯಕಿಯರೇ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.
11:28 AM (IST) Apr 19
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರ್, ಸರ್ಕಾರಿ ಬಸ್ ಹಾಗೂ ಮೂರು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
11:09 AM (IST) Apr 19
10:52 AM (IST) Apr 19
ಕ್ಷೇತ್ರ ಮರು ವಿಂಗಡಣೆಯು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಪ್ರಾತಿನಿಧ್ಯ ಮತ್ತು ಮಹಿಳಾ ಮೀಸಲಾತಿ ಜಾರಿಗೆ ಅತ್ಯವಶ್ಯಕವಾಗಿದೆ. ಈ ಸುಧಾರಣೆಯು ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡುತ್ತದೆ ಎಂಬ ವಿಪಕ್ಷಗಳ ಆರೋಪಗಳ ನಡುವೆ, ಇದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಐತಿಹಾಸಿಕ ಹೆಜ್ಜೆ
10:28 AM (IST) Apr 19
ಕೃಪಲಾನಿ, ಪ್ರೀತಿ ಮತ್ತು ಮದುವೆಯ ನೆಪದಲ್ಲಿ ಸುಮಾರು 50 ಮಹಿಳೆಯರಿಗೆ ವಂಚಿಸಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು, ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಬೆದರಿಸುತ್ತಿದ್ದ ಈತನ ಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
10:24 AM (IST) Apr 19
Muddu Sose Kannada Serial: ಮುದ್ದು ಸೊಸೆ ಧಾರಾವಾಹಿಯಲ್ಲಿ ತಾನು ಹುಟ್ಟಿದ ಮನೆಗೆ ಸುಭಾಷ್ ದ್ರೋಹ ಮಾಡಿದ್ದಾನೆ, ಎಷ್ಟೇ ಬಾರಿ ಬುದ್ಧಿ ಹೇಳಿದರೂ ಕೂಡ ಅವನು ಮಾತ್ರ ತಪ್ಪು ತಿದ್ದಿಕೊಳ್ಳಲ್ಲ, ಬದಲಾಗಿ ಒಂದಿಲ್ಲೊಂದು ಮೋಸ ಮಾಡುತ್ತಿದ್ದಾನೆ. ಈಗ ಅವನು ತನ್ನ ಮನೆಯವರನ್ನೇ ಕೊಂದಿದ್ದಾನೆ.
09:31 AM (IST) Apr 19
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಗೊಂದಲಕ್ಕೆ ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಅವರೇ ಕಾರಣ ಎಂದು ಆರೋಪಿಸಿರುವ ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು, ಪಕ್ಷಕ್ಕಾಗಿ ದುಡಿದ ಕೆ. ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮ್ಮದ್ ವಿರುದ್ಧದ ಕ್ರಮವನ್ನು ಖಂಡಿಸಿದ್ದಾರೆ.
09:22 AM (IST) Apr 19
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾದ ನಂತರ, ಅವರ ಪುತ್ರಿ ದೀಪಾಲಿ ಕುಲಕರ್ಣಿ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
08:54 AM (IST) Apr 19
ಬೆಂಗಳೂರಿನಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ, ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ಪ್ರಕರಣಗಳ ತ್ವರಿತ ಇತ್ಯರ್ಥದ ಸಾಧ್ಯತೆಗಳ ಜೊತೆಗೆ ಅಲ್ಗಾರಿದಮಿಕ್ ಪಕ್ಷಪಾತದಂತಹ ಆಳವಾದ ಕಳವಳಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
08:40 AM (IST) Apr 19
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಂಸ್ಥೆಯನ್ನು ದೇಶಕ್ಕೆ ಮಾದರಿ ಎಂದು ಶ್ಲಾಘಿಸಿದರು. ಭ್ರಷ್ಟಾಚಾರ ಮುಕ್ತ ಆಡಳಿತದಲ್ಲಿ ಸಂಸ್ಥೆಯ ಪಾತ್ರವನ್ನು ಕೊಂಡಾಡಿದರು.
08:01 AM (IST) Apr 19
MBA graduate caught stealing ಖರೀದಿ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ತೆರಳಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಉಂಗುರ ಕಳವು ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಎಂಬಿಎ ಪದವೀಧರೆಯಾದ ಆರೋಪಿಯಿಂದ ಸುಮಾರು 1 ಲಕ್ಷ ಮೌಲ್ಯದ ಉಂಗುರವನ್ನು ಜಪ್ತಿ ಮಾಡಲಾಗಿದೆ.